Breaking News

ಬಾವನ ಜೊತೆಯೇ ಲವ್ವಿ ಡವ್ವಿ: ಗಂಡನಿಗೆ ಪ್ರಸಾದ ಎಂದು ನಿದ್ದೆ ಮಾತ್ರೆ! ಕತ್ತು ಹಿಸುಕುವಾಗ ಎದ್ದ ಗಂಡ, ಮುಂದೆ ಆಗಿದ್ದೇನು?

Spread the love

ಯಾದಗಿರಿ(ನ.21): ನಿದ್ದೆ ಮಾತ್ರೆ ನೀಡಿ ಹೆಂಡತಿಯೇ ಗಂಡನನ್ನು ಕೊಲೆ ಮಾಡಲು ಯತ್ನಿಸಿದ ಪ್ರಕರಣ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಹೊವಿನಹಳ್ಳಿಯಲ್ಲಿ ನಡೆದಿದೆ. ಪಾಪಿ ಪತ್ನಿ ತನ್ನ ಅಕ್ರಮ ಸಂಬಂಧ ಮುಚ್ಚಿ ಹಾಕಲು ಪತಿಯನ್ನು ಕೊಲೆ ಮಾಡಲು ಯತ್ನಿಸಿದ್ದಾಳೆ ಎಂದು ತಿಳಿದು ಬಂದಿದೆ.

 

ಚಂದ್ರಕಲಾ ತನ್ನ ಪ್ರಿಯತಮ ಬಸನಗೌಡನ ಜೊತೆ ಸೇರಿ ತನ್ನ ಪತಿ ವಿಶ್ವನಾಥರಡಿಯನ್ನು ಕೊಲೆ ಮಾಡಲು ಯತ್ನಿಸಿದ ಆರೋಪಿ. ಚಂದ್ರಕಲಾ ತನ್ನ ಸಹೋದರಿಯ ಪತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ನೀರಿನಲ್ಲಿ ನಿದ್ದೆ ಮಾತ್ರೆ ಪುಡಿ ಮಾಡಿ ಪತಿಗೆ ನೀಡಿದ್ದಾಳೆ ನಂತರ ನಿದ್ದೆ ಮಾತ್ರೆ ಸೇವಿಸಿ ಗಂಡ ಘಾಡ ನಿದ್ರೆಗೆ ಜಾರಿದ ಸಮಯದಲ್ಲಿ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ್ದಾರೆ.
ಕತ್ತು ಹಿಸುಕಿದಾಗ ಎಚ್ಚರಗೊಂಡ ಪತಿ ಮನೆಯಿಂದ ಪರಾರಿಯಾಗಿದ್ದಾನೆ. ಪರಾರಿಯಾಗುವ ಮುನ್ನ ಪತ್ನಿಯ ಪ್ರಿಯಕರನಿಗೆ ಥಳಿಸಿದ್ದಾರೆ ಎಂದು ತಿಳಿದು ಬಂದಿದೆ.

ದೇವರ ಪ್ರಸಾದ ಎಂದು ನಂಬಿಸಿ ಗಂಡನಿಗೆ ನಿದ್ದೆ ಮಾತ್ರೆ ಪುಡಿ ಮಾಡಿ ಪ್ರಸಾದ ನೀಡಿದ್ದಾರೆ. ಚಂದ್ರಕಲಾ ಪ್ರಿಯತಮ ಬಸನಗೌಡ ಸೇರಿ ನಡೆಸಿದ ಕೊಲೆ ಪ್ರಯತ್ನದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು ಆರೋಪಿ ಚಂದ್ರಕಲಾ ಹಾಗೂ ಬಸನಗೌಡನನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇವರಿಬ್ಬ ಸ್ಕೆಚ್ ನ ಆಡಿಯೋ ಕೂಡ ಸಿಕ್ಕಿದೆ ಎಂದು ಹೇಳಲಾಗುತ್ತಿದ್ದು ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ.


Spread the love

About Laxminews 24x7

Check Also

ಮೈಸೂರಿನಿಂದ ಉದಯಪುರಕ್ಕೆ ತೆರಳುತ್ತಿದ್ದ ರೈಲಿನ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು.

Spread the loveರಾಮನಗರ: ಬೊಂಬೆನಗರಿ ಚನ್ನಪಟ್ಟಣದ ಬಳಿ ಚಲಿಸುತ್ತಿದ್ದ ರೈಲಿನ ಇಂಜಿನ್​​ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು (ಗುರುವಾರ) ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ