ಬಂಗಾರಪೇಟೆ, ಫೆ.4- ದೇಶದಲ್ಲಿ ಕೇಂದ್ರ ಸರ್ಕಾರ ಸರಿಯಾಗಿ ಬೆಂಬಲ ನೀಡುತ್ತಿಲ್ಲ. ಬಿಜೆಪಿ ಎಂಪಿಗಳಿಗೆ ಕೇಂದ್ರ ಸರ್ಕಾರದಲ್ಲಿ ಮಾತನಾಡುವ ಧಮ್ ಇಲ್ಲ ಎಂದು ಮಾಜಿ ಗೃಹ ಸಚಿವ, ಕಾಂಗ್ರೆಸ್ ನಾಯಕ ರಾಮಲಿಂಗಾರೆಡ್ಡಿ ಟೀಕಿಸಿದರು. ಕಾಮಸಮುದ್ರಂನಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಗಂಗಮ್ಮ ದೇವಸ್ಥಾನಕ್ಕೆ ಭೇಟಿ ನೀಡುವ ಮುಂಚೆ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸಕ್ತ ಕೇಂದ್ರ ಬಡ್ಜೆಟ್ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿ ಬಿಜೆಪಿ ಸದಸ್ಯರ ವಿರುದ್ದ ಅಸಮಧಾನ ಹೊರಹಾಕಿದರು. ರಾಜ್ಯದಲ್ಲಿ 25 ಅಭ್ಯರ್ಥಿಗಳನ್ನು …
Read More »ಯಡಿಯೂರಪಪ್ಪಾ ಜಿ ಯವರ ಮಹತ್ವಾಕಾಂಕ್ಷೆ ಭಾಗ್ಯಲಕ್ಷೀ ಯೋಜನೆಯ ಮೂರು ಫಲಾನುಭವಿಗಳಿಗೆ ಭಾಗ್ಯಲಕ್ಷೀ ಬಾಂಡ್ ವಿತರಿಸಿದರು.
ಹದಿನಾಳ ನಿಪ್ಪಾಣಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹದಿನಾಳ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ಅಪೆಂಡಿಕ್ಸ-ಇ ಗ್ರಾಮ ಪರಿಮಿತಿ ಯೋಜನೆಯಡಿ ಹದಿನಾಳ ಅಪ್ಪಾಚಿವಾಡಿಯಿಂದ ರಾ.ಹೆ -4 ಕೂಡು ರಸ್ತೆ ಕಿ.ಮೀ ನಂ.1 20 ರಿಂದ 2.50 ವರೆಗೆ ಹಾಗೂ ಭಾವೇಶ್ವರಿ ಮಂದಿರದಿಂದ ನಾಗನಾಥವಾಡಿ ವರೆಗೆ ಸುಮಾರು 1 ಕೋಟಿ 92 ಲಕ್ಷ ರೂಗಳ ಮೊತ್ತದಲ್ಲಿ ರಸ್ತೆ ಅಗಲೀಕರಣ ಹಾಗೂ ಸುಧಾರಣೆಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ …
Read More »ನಿಷ್ಠಾವಂತರಾಗಿ ದುಡಿದು ಸಾಕಷ್ಟು ಬಾರಿ ಶಾಸಕರಾದರೂ ಲೆಕ್ಕಕ್ಕಿಲ್ಲ :ಆನಂದ್ ಮಾಮನಿ
ಸವದತ್ತಿ: ಫೆ.6ರಂದು ರಾಜ್ಯ ಸಚಿವ ಸಂಪುಟಗೆ ಮುಹೂರ್ತ ಫಿಕ್ಸ್ ಆಗಿದ್ದು, ಈಗಾಗಲೇ ಬಿಜೆಪಿ ಶಾಸಕರು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಸವದತ್ತಿ ಶಾಸಕ ಆನಂದ್ ಮಾಮನಿ, ಹೊಸದಾಗಿ ಪಕ್ಷ ಸೇರಿ ಮಂತ್ರಿಯಾಗುವವರೆದುರಿಗೆ, ಪಕ್ಷಕ್ಕೆ ಅಡಿಪಾಯ ಹಾಕಿ, ಕಟ್ಟಿ, ನಿಷ್ಠಾವಂತರಾಗಿ ದುಡಿದು ಸಾಕಷ್ಟು ಬಾರಿ ಶಾಸಕರಾದರೂ ಲೆಕ್ಕಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಸರಣಿ ಟ್ವೀಟ್ ಮೂಲಕ ಒಂದು ರೀತಿಯಲ್ಲಿ ಬಂಡಾಯದ ಬಾವುಟ ಹಾರಿಸಿರುವ ಆನಂದ್ ಮಾಮನಿ, ಬಿಜೆಪಿ ಮೇಲಿಟ್ಟಿರುವ ಕ್ಷೇತ್ರದ ಜನತೆಯ …
Read More »ಮೂಡಲಗಿ ಕೋ ಆಪ್ ಬ್ಯಾಂಕ್ ಲಿ. ಚುನಾವಣೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅವಿರೋಧ ಆಯ್ಕೆ
ಮೂಡಲಗಿ: ಮೂಡಲಗಿ ಕೋ ಆಪ್ ಬ್ಯಾಂಕ್ ಲಿ. ಚುನಾವಣೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅವಿರೋಧ ಆಯ್ಕೆ ಯಾಗಿದ್ದು ಅಧ್ಯಕ್ಷರಾಗಿ ಸುಭಾಸ ಢವಳೇಶ್ವರ ಮತ್ತು ಉಪಾಧ್ಯಕ್ಷರಾಗಿ ನವೀನ ಬಡಗನ್ನವರ ನೇಮಕಗೊಂಡಿದ್ದಾರೆ. ಸಂಘದ ಮುಂದಿನ 5 ವಷ೯ಗಳ ಅವದಿಗೆ ಅಧ್ಯಕ್ಷ ಸುಭಾಸ ಢವಳೇಶ್ವರ ಅವಿರೋಧವಾಗಿ ಪುನರ ಆಯ್ಕೆಯಾಗಿದ್ದಾರೆ, ಉಪಾಧ್ಯಕ್ಷರಾಗಿ ನವೀನ ಬಡಗನ್ನವರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಕೆ. ವ್ಹಿ ದಂತಿ , ಆರ್ ಎಲ್ ವಾಲಿ, ಎಸ್ ಎಮ್ ಗಾಣಿಗೇರ, ಆರ್ …
Read More »ಸಾಹುಕಾರ್ ರಮೇಶ್ ಜಾರಕಿಹೋಳಿ ನೇತೃತ್ವದಲ್ಲಿ ತಿರುಪತಿಗೆ ತೆರಳಲು ಸಿದ್ಧ ಮಾಡಿಕೊಂಡಿರೋ ತಂಡ
ಸಿಎಂ ಯಡಿಯೂರಪ್ಪ ಸಂಪುಟ ಸಂಪುಟ ವಿಸ್ತರಣೆಗೆ ಗುರುವಾರ ಸಮಯ ನಿಗದಿ ಮಾಡಿದ್ದಾರೆ. ಈಗಾಗಲೇ ಯಾರು ಮಂತ್ರಿ ಅಂತಾನೂ ಬಹುತೇಕ ಫೈನಲ್ ಆಗಿದೆ. ಹೆಸರು ಫೈನಲ್ ಆಗಿರೋ ಅರ್ಹ ಶಾಸಕರು ಮುಂದಿನ ರಾಜಕೀಯ ಜೀವನ ಒಳ್ಳೆಯದು ಮಾಡಪ್ಪ ಅಂತ ಬೇಡಿಕೊಳ್ಳಲು ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗ್ತಿದ್ದಾರೆ. ಗೆದ್ದ 11 ಶಾಸಕರ ಪೈಕಿ 10 ಜನರಿಗೆ ಸಚಿವ ಸ್ಥಾನ ಫಿಕ್ಸ್ ಆಗಿದೆ. ಗುರುವಾರ ಸಂಪುಟ ಸೇರ್ಪಡೆ ಆಗೋಕು ಮುಂಚೆ ಸಾಹುಕಾರ್ ಟೀಂ ತಿರುಪತಿಗೆ …
Read More »ಕೊಟ್ಟ ಮಾತಿನಂತೆ ಮಹೇಶ್ ಕುಮಟಳ್ಳಿಗೆ ಮಂತ್ರಿ ಸ್ಥಾನ ನೀಡಬೇಕು,: ರಮೇಶ್ ಜಾರಕಿಹೊಳಿ ಶತಪ್ರಯತ್ನ
ಬಿಜೆಪಿಯಲ್ಲಿ ಮೂಲ ಮತ್ತು ವಲಸಿಗರ ನಡುವಿನ ಸಂಘರ್ಷ ತಾರಕಕ್ಕೇರಿದೆ. ಆಪ್ತ ಮಹೇಶ್ ಕುಮಟಳ್ಳಿಗೆ ಸ್ಥಾನ ಕಲ್ಪಿಸಲು ರಮೇಶ್ ಜಾರಕಿಹೊಳಿ ಶತಪ್ರಯತ್ನ ಪಟ್ಟು ಸಡಿಲಿಸದ ರಮೇಶ್ ಜಾರಕಿಹೊಳಿ ಮಹೇಶ್ಕುಮಟಳ್ಳಿ, ಶ್ರೀಮಂತ ಪಾಟೀಲ್ಗೂ ಸಂಪುಟದಲ್ಲಿ ಸ್ಥಾನ ಕಲ್ಪಿಸಬೇಕು, ನೀವು ಉಪಚುನಾವಣೆಯಲ್ಲಿ ಇದೇ ಮಾತನ್ನು ಹೇಳಿದ್ದೀರಿ, ಈಗ ಕೊಟ್ಟ ಮಾತಿನಿಂದ ಹಿಂದೆ ಸರಿದರೆ ಅನ್ಯಾಯವಾಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಬೆಂಗಳೂರು,ಫೆ.3- ಸಚಿವ ಸಂಪುಟ ವಿಸ್ತರಣೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಮುಹೂರ್ತ ನಿಗದಿಪಡಿಸಿರುವ ಬೆನ್ನಲ್ಲೇ ಸಂಪುಟಕ್ಕೆ ಸೇರ್ಪಡೆಯಾಗಲು …
Read More »ಸಂಪುಟ ವಿಸ್ತರಣೆ ಅಷ್ಟು ಸುಲಭ ವಿಚಾರವಲ್ಲ, 17 ಜನರಿಗೆ ಕೊಟ್ಟ ಮಾತಿನಂತೆ ಸ್ಥಾನ ನೀಡಬೇಕಾಗುತ್ತದೆ:ಬಿಜೆಪಿ ಸರ್ಕಾರದಲ್ಲಿ ಭಿನ್ನಮತ ಸ್ಪೋಟಗೊಳ್ಳಲಿದೆ
ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಳಿಕ ಬಿಜೆಪಿ ಸರ್ಕಾರದಲ್ಲಿ ಭಿನ್ನಮತ ಸ್ಪೋಟಗೊಳ್ಳಲಿದೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಭವಿಷ್ಯ ನುಡಿದಿದ್ದಾರೆ. ಸುದ್ದಿಗಾರರೊಂದಿಗೆ ಮಾತಾಡಿದ ಸತೀಶ್ ಜಾರಕಿಹೊಳಿ, ಪ್ರಸ್ತುತ ಸಂಪುಟ ವಿಸ್ತರಣೆ ಅಷ್ಟು ಸುಲಭ ವಿಚಾರವಲ್ಲ, 17 ಜನರಿಗೆ ಕೊಟ್ಟ ಮಾತಿನಂತೆ ಸ್ಥಾನ ನೀಡಬೇಕಾಗುತ್ತದೆ. ಆಗ ಮೂಲ ಬಿಜೆಪಿಯವರಿಗೆ ನಿರಾಸೆಯಾಗಲಿದೆ. ಅವರಿಗೆ ತಮ್ಮನ್ನು ಬಿಟ್ಟು ವಲಸಿಗರಿಗೆ ಆದ್ಯತೆ ನೀಡಿದ್ದಾರೆ ಎಂದು ಅಸಮಾಧಾನವುಂಟಾಗುವುದು ಸಹಜ. ಹಾಗಾಗಿ ಯಾರಿಗೆ ಮಂತ್ರಿ ಸ್ಥಾನ ನೀಡಿದರೂ …
Read More »ಬೆಳಗಾವಿಯ ರಾಜಹಂಸಘಡ ಕಾರ್ಯಕ್ರಮ ವಿವಾದ: ತಗ್ಗಿ,ಬಗ್ಗಿ ನಡೆಯೆಂದರೆ ನಡೆದೇವು,ತೆವಳಿಕೊಂಡು ಹೋಗೆಂದರೆ ಸೆಟೆದು ನಿಲ್ಲಬೇಕಾಗುತ್ತದೆ! ಅಶೋಕ ಚಂದರಗಿ
ಬೆಳಗಾವಿಯ ರಾಜಹಂಸಘಡ ಕಾರ್ಯಕ್ರಮ ವಿವಾದ: ತಗ್ಗಿ,ಬಗ್ಗಿ ನಡೆಯೆಂದರೆ ನಡೆದೇವು,ತೆವಳಿಕೊಂಡು ಹೋಗೆಂದರೆ ಸೆಟೆದು ನಿಲ್ಲಬೇಕಾಗುತ್ತದೆ! ಕರ್ನಾಟಕ ಸರಕಾರದ,ಕನ್ನಡಿಗರಿಗಾದ ಅವಮಾನವನ್ನು ಸರಿಪಡಿಸುವ ಹೊಣೆ ಬೆಳಗಾವಿ ಡಿಸಿ ಯವರ ಮೇಲಿದೆ ಬೆಳಗಾವಿ ಸಮೀಪದ ಯಳ್ಳೂರು ಗ್ರಾಮದಲ್ಲಿಯ ಐತಿಹಾಸಿಕ ರಾಜಹಂಸಘಡ ಕೋಟೆಯ ಮೇಲೆ ಬಹು ಎತ್ತರದ ಶಿವಾಜಿ ಪ್ರತಿಮೆಯನ್ನು ಸ್ಥಾಪಿಸುವ ಮತ್ತು ಕೋಟೆಯ ಸುಧಾರಣೆಯ ಯೋಜನೆಗಾಗಿ ಕರ್ನಾಟಕ ಸರಕಾರ ಮೂರುವರೆ ಕೋಟಿ ರೂ.ಒದಗಿಸಿದೆ.ಇದರ ಭೂಮಿ ಪೂಜೆಯ ಕಾರ್ಯಕ್ರಮವು ಸೋಮವಾರ ನಡೆದಿದ್ದು ಅದು ಸಂಪೂರ್ಣವಾಗಿ ಮರಾಠಿಯಲ್ಲೇ ಇತ್ತು.ಕಾರ್ಯಕ್ರಮದ …
Read More »ಸೋನಿಯಾ ಗಾಂಧಿ ಅವರು ಜ್ವರ ಹಾಗೂ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸೋನಿಯಾ ಗಾಂಧಿ ಅವರು ಜ್ವರ ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಭಾನುವಾರ ಸಂಜೆ 7 ಗಂಟೆಗೆ ಅವರನ್ನು ಸೆಂಟ್ರಲ್ ದೆಹಲಿಯ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸೋನಿಯಾ ಅವರ ಜೊತೆ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ಕೂಡ ಆಸ್ಪತ್ರೆಯಲ್ಲಿ ಇದ್ದಾರೆ. ಸೋನಿಯಾ ಅವರಿಗೆ ರೂಟಿನ್ ಚೆಕಪ್ ಮಾಡಲಾಗುತ್ತಿದೆ ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ …
Read More »ಗೆದ್ದವರಿಗೆ ಮಂತ್ರಿ ಮಾಡದೇ ಇದ್ದರೆ ರಾಜ್ಯಕ್ಕೆ ತಪ್ಪು ಸಂದೇಶ: ಶ್ರೀಮಂತ್ ಪಾಟೀಲ್
ಬೆಂಗಳೂರು : ಬಿಜೆಪಿಯಲ್ಲಿ ಸಂಪುಟ ವಿಸ್ತರಣೆ ದೊಡ್ಡ ಗೊಂದಲಕ್ಕೆ ಕಾರಣವಾಗಿದೆ. 10 ಜನರಿಗೆ ಮಾತ್ರ ಮಂತ್ರಿ ಸ್ಥಾನ ಅನ್ನೋ ಸಿಎಂ ಮಾತಿಗೆ ಮಿತ್ರ ಮಂಡಳಿ ಶಾಸಕರು ಪರೋಕ್ಷವಾಗಿ ವಿರೋಧ ಮಾಡ್ತಿದ್ದು, ವಚನ ಭ್ರಷ್ಟತೆಯ ಅಸ್ತ್ರ ಹೂಡುತ್ತಿದ್ದಾರೆ. ಮತ್ತೊಬ್ಬ ಅರ್ಹ ಶಾಸಕ ಶ್ರೀಮಂತ್ ಪಾಟೀಲ್ ಗೆದ್ದವರಿಗೆ ಮಂತ್ರಿ ಸ್ಥಾನ ಕೊಡದೇ ಇದ್ದರೆ ವಚನ ಭ್ರಷ್ಟತೆ ಆಗುತ್ತೆ ಅಂತ ಸಿಎಂಗೆ ಎಚ್ಚರಿಸಿದ್ದಾರೆ. ಸಂಪುಟ ವಿಸ್ತರಣೆ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ನನಗೆ ಇನ್ನು …
Read More »