ವಿಜಯಪುರ ದಲ್ಲಿ ಬೆಳ್ಳಂಬೆಳಿಗ್ಗೆ ಜೆಸಿಬಿ ಘರ್ಜಿಸಿದೆ. ಅತಿಕ್ರಮಣ ಗೊಂಡಿದ್ದ ರಸ್ತೆ ತೆರವು ಮಾಡಲಾಗಿದೆ.ವಿಜಯಪುರ ನಗರದ ವಲ್ಲಭಭಾಯಿ ವೃತ್ತದಿಂದ ವಿಶ್ವೇಶ್ವರಯ್ಯ ವೃತ್ತದ ವರೆಗೆ ಅತಿ ಕ್ರಮಣ ತೆರವು ಮಾಡಲಾಯಿತು. 100 ಫೂಟ್ ಅಗಲವಿರುವ ರಸ್ತೆಯಲ್ಲಿ ಹಲವು ಕಡೆ ಅತೀಕ್ರಮಣವಾಗಿತ್ತು. ಈ ಕುರಿತು ಮಹಾನಗರ ಪಾಲಿಕೆ ಹಲವು ಬಾರಿ ನೋಟಿಸ್ ಜಾರಿ ಮಾಡಿದ್ದರೂ ಸಹಿತ ಅತಿಕ್ರಮಣ ತೆರವುಗೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ್ ಮೆಕ್ಕಳಕಿ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ಮಾಡಲಾಯಿತು. …
Read More »
Laxmi News 24×7