Breaking News

Monthly Archives: ಜನವರಿ 2021

70ರ ಅಜ್ಜಿಗೆ ಪೊಂಗಲ್‌ ಗಿಫ್ಟ್ ಕೊಡಿಸಿದ ಅವಳಿ ಸಹೋದರರು! ಬಾಲಕರ ಕಾರ್ಯಕ್ಕೆ ಶ್ಲಾಘನೆ

ತಮಿಳುನಾಡು: ಮಕ್ಕಳ ನಿಷ್ಕಲ್ಮಶ ಮನಸ್ಸಿಗೆ ಕನ್ನಡಿ ಹಿಡಿದಿರುವಂಥ ಪ್ರಸಂಗವೊಂದು ತಮಿಳುನಾಡಿನಲ್ಲಿ ಸಂಕ್ರಾಂತಿಯ ದಿನದಂದೇ ನಡೆದಿದೆ. ಪೊಂಗಲ್‌ ಪ್ರಯುಕ್ತ ತಮಿಳುನಾಡು ಸರ್ಕಾರವು ಪಡಿತರ ಅಂಗಡಿಗಳ ಮೂಲಕ 2,500 ರೂ. ನಗದು, ಕಬ್ಬು ಮತ್ತು ಬಟ್ಟೆಬರೆಗಳನ್ನು ನೀಡುವುದಾಗಿ ಘೋಷಿಸಿತ್ತು. ಮಾನಸಿಕ ಅಸ್ವಸ್ಥೆ ಮಗಳನ್ನು ಸಾಕುವ ಜವಾಬ್ದಾರಿಯನ್ನು ಹೊತ್ತಿರುವ ವಿಧವೆ, 70 ವರ್ಷದ ವೃದ್ಧೆ ಸುಬ್ಬುಲಕ್ಷ್ಮಿ ಹೇಗಾದರೂ ಮಾಡಿ, ಆ ಉಡುಗೊರೆ ಸ್ವೀಕರಿಸಿಕೊಂಡು ಬರೋಣ ಎಂದು ತೀರಾ ಅನಾರೋಗ್ಯದ ನಡುವೆಯೂ ನಡಿಗೆ ಆರಂಭಿಸಿದರು. ಸ್ವಲ್ಪ …

Read More »

ಧಾರವಾಡದ ಬಳಿ ಭೀಕರ ರಸ್ತೆ ಅಪಘಾತ ಐವರ ದುರ್ಮರಣ: ಹಲವರಿಗೆ ಗಾಯ

ಧಾರವಾಡ: ತಾಲೂಕಿನ ಇಟಿಗಟ್ಟಿ ಬಳಿ ಭೀಕರ ರಸ್ತೆ ಅಪಘಾತ ನಡೆದಿದ್ದು, ಐವರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಟೆಂಪೋ ಹಾಗೂ ಲಾರಿಯ ನಡುವೆ ಅಪಘಾತ ನಡೆದಿದ್ದು, ತೀವ್ರವಾಗಿ ಗಾಯಗೊಂಡಿರುವವರನ್ನ ಧಾರವಾಡ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗುತ್ತಿದೆ. ವಾಹನದಲ್ಲಿ ಇನ್ನೂ ಶವಗಳು ಸಿಲುಕಿಕೊಂಡಿದ್ದು, ಅವುಗಳನ್ನ ತೆಗೆಯಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಬೆಳಗಿನ ಜಾವ ಮೂರು ಗಂಟೆಗೆ ದಾವಣಗೆರೆಯಿಂದ ಹೊರಟಿದ್ದ ಟೆಂಪೋ ಧಾರವಾಡದ ಸಮೀಪ ಬಂದಾಗ ಈ …

Read More »

ಕೃಷಿಕಾಯ್ದೆಯ ಸಮಿತಿಯಿಂದ ಹೊರಬಂದ ಭೂಪಿಂದರ್ ಸಿಂಗ್ ಮಾನ್

ನವದೆಹಲಿ: ಕೃಷಿ ಕಾಯ್ದೆಯ ಹಿನ್ನೆಲೆಯಲ್ಲಿ ಉಂಟಾಗಿರುವ ರೈತರ ಹಾಗೂ ಕೇಂದ್ರದ ನಡುವಿನ ಬಿಕ್ಕಟ್ಟನ್ನು ಬಗೆಹರಿಸಲು ಸುಪ್ರೀಂ ಕೋರ್ಟ್ ನೇಮಕ ಮಾಡಿದ್ದ ನಾಲ್ಕು ಜನರ ಕಮಿಟಿಯಿಂದ ಹೊರಬರುವುದಾಗಿ ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷ ಭೂಪಿಂದರ್ ಸಿಂಗ್ ಮಾನ್ ತಿಳಿಸಿದ್ದಾರೆ. ಈ ಸಮಿತಿಯಲ್ಲಿನ ಸದಸ್ಯರು ಈ ಹಿಂದೆ ಕೇಂದ್ರದ ಕೃಷಿ ಕಾಯ್ದೆಯನ್ನು ಸ್ವಾಗತಿಸಿದ್ದರು ಎಂದು ರೈತ ಸಂಘಟನೆಗಳು ಹಾಗೂ ವಿರೋಧಪಕ್ಷಗಳು ಆರೋಪಿಸಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.   …

Read More »

ದಸರಾ ಮಾದರಿ ಸರಳವಾಗಿ ಗವಿಸಿದ್ದೇಶ್ವರ ಜಾತ್ರೆ : ಅಜ್ಜನ ಜಾತ್ರೆ 3 ದಿನಕ್ಕೆ ಮಾತ್ರ ಸೀಮಿತ

ಕೊಪ್ಪಳ: ಕೋವಿಡ್ ಆರ್ಭಟದ ಮಧ್ಯೆ ಅಜ್ಜನ ಜಾತ್ರೆ ನಡೆಯುತ್ತದೆಯೋ ?ಇಲ್ಲವೋ ? ಎನ್ನುವ ಗೊಂದಲ್ಲಿದ್ದ ಭಕ್ತ ಸಮೂಹಕ್ಕೆ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾ ಸ್ವಾಮೀಜಿ ಅವರು ಅಜ್ಜನ ಜಾತ್ರೆಗೆ ಸರಳತೆಯ ಶ್ರೀಕಾರ ಹಾಕಿದ್ದಾರೆ. ಮೈಸೂರು ದಸರಾ, ಪುರಿ ಜಗನ್ನಾಥ ಮಾದರಿ ಸರ್ಕಾರದ ನಿಯಮಾವಳಿಗೆ ಒಳಪಟ್ಟು, ಸಂಪ್ರದಾಯ ಮುರಿಯದೆ, ಸರಳತೆಯಿಂದ ಗವಿಸಿದ್ದೇಶ್ವರ ಜಾತ್ರೆ ನಡೆಯಲಿದೆ ಎಂದು ಗವಿಮಠ ತಿಳಿಸಿದೆ. ಜಾತ್ರೆಯಲ್ಲಿ ಏನು ಇರುತ್ತದೆ ? : ಜ.26 ಕ್ಕೆ ಜಾತ್ರೆ ಸಂಪ್ರದಾಯ …

Read More »

ಪಂಚಮಸಾಲಿ ಮಠಕ್ಕೆ ₹ 10 ಕೋಟಿ ಮಂಜೂರು, ನಾಲ್ಕೈದು ದಿನಗಳಲ್ಲಿ ಖಾತೆಗೆ: ಬಿಎಸ್‌ವೈ

ದಾವಣಗೆರೆ: ‘ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಮಠದ ಅಭಿವೃದ್ಧಿಗಾಗಿ ₹ 10 ಕೋಟಿ ಅನುದಾನ ಮಂಜೂರು ಮಾಡಿದ್ದೇನೆ. ನಾಲ್ಕೈದು ದಿನಗಳಲ್ಲಿ ಮಠದ ಖಾತೆಗೆ ವರ್ಗಾವಣೆಗೊಳ್ಳಲಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತಿಳಿಸಿದರು. ಹರಿಹರದಲ್ಲಿ ಆಯೋಜಿಸಿದ್ದ ಹರಜಾತ್ರಾ ಮಹೋತ್ಸವದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಸನ್ಮಾನಿಸಿದರು. ಸಿದ್ದಗಂಗಾಮಠದ ಸಿದ್ದಲಿಂಗಸ್ವಾಮಿ ಅವರೂ ಇದ್ದರು. ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ಗುರುವಾರ ನಡೆದ ಹರಜಾತ್ರಾ ಮಹೋತ್ಸವದ ಸ್ವಾವಲಂಬಿ …

Read More »

ಕೊರೋನಾ ಲಸಿಕೆ ಬೇಕು, ಬೇಡಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದುದು ಇವಿಷ್ಟು..

ನವದೆಹಲಿ : ಲಸಿಕೆ ಅಭಿಯಾನವು ನಾಳೆಯಿಂದ ಆರಂಭವಾಗಲಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಲಸಿಕೆಗಳ ಪಟ್ಟಿ, ದೈಹಿಕ ನಿರ್ದಿಷ್ಟತೆ, ಡೋಸೇಜ್, ಕೋಲ್ಡ್ ಚೈನ್ ಸ್ಟೋರೇಜ್ ಅವಶ್ಯಕತೆಗಳು, ನಿರ್ಬಂಧಗಳು ಮತ್ತು ಸಣ್ಣ ಎಇಎಫ್ ಐಗಳು (ಪ್ರತಿರಕ್ಷಣಾ ನಂತರದ ಘಟನೆ) ಕುರಿತು ಮಾಹಿತಿ ಹೊಂದಿರುವ ಲಸಿಕೆಗಳ (ಕೋವಿಶೀಲ್ಡ್ ಮತ್ತು ಕೊವಾಕ್ಸಿನ್) ಎರಡೂ ಲಸಿಕೆಗಳ ಸಮಗ್ರ ಫ್ಯಾಕ್ಟ್ ಶೀಟ್ ಅನ್ನು ರಾಜ್ಯಗಳಿಗೆ ಕಳುಹಿಸಿದೆ. ಕೊರೋನಾ ಲಸಿಕೆ ಬೇಕು, ಬೇಡಗಳನ್ನು ಒಳಗೊಂಡ ದಾಖಲೆಯನ್ನು ಎಲ್ಲಾ …

Read More »

ಮೋಜಿಗಾಗಿ ವಾಹನಗಳನ್ನು ಕದಿಯುತ್ತಿದ್ದ ಆರೋಪಿ ಅರೆಸ್ಟ್, 3.50 ಲಕ್ಷ ಮೌಲ್ಯದ ಬೈಕ್ ವಶ

ಬೆಂಗಳೂರು, ಜ.14- ಮೋಜಿನ ಜೀವನ ನಡೆಸಲು ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಆರೋಪಿಯೊಬ್ಬನನ್ನು ಬಂಧಿಸಿರುವ ಜ್ಞಾನಭಾರತಿ ಠಾಣೆ ಪೊಲೀಸರು 3.50 ಲಕ್ಷ ಬೆಲೆಯ ನಾಲ್ಕು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ತಮಿಳುನಾಡಿನ ಸಂಪತ್ (26) ಬಂಧಿತ ಆರೋಪಿ. ಈತ ಡಿಪ್ಲೊಮಾ ಮೆಕ್ಯಾನಿ ಕಲ್ ವ್ಯಾಸಂಗ ಮಾಡಿದ್ದು, ಮೋಜಿ ಗಾಗಿ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದನೆಂದು ಆಪೊಲೀಸರು ತಿಳಿಸಿದ್ದಾರೆ. ಮನೆ ಮುಂದೆ ನಿಲ್ಲಿಸಿದ್ದ ಪಲ್ಸರ್ ದ್ವಿಚಕ್ರ ವಾಹನವನ್ನು ಯಾರೋ …

Read More »

ಮಕರ ಸಂಕ್ರಾಂತಿ’ಯು ‘ಉತ್ತರಾಯಣ ಪುಣ್ಯಕಾಲ’ವೇ.? ಇಲ್ಲಿದೆ ನಿಮ್ಮ ಅನುಮಾನಕ್ಕೆ ಉತ್ತರ.!

ಈ ಪ್ರಶ್ನೆಗೆ ‘ಅಲ್ಲ’ ಎಂದವರನ್ನು ‘ಅವಿವೇಕಿಗಳು’ ‘ಹುಚ್ಚರು’ ಎಂದು ಕರೆಯುವ ಕಾಲಘಟ್ಟದಲ್ಲಿ ನಾವಿಂದು ಬದುಕುತ್ತಿದ್ದೇವೆ ಎಂಬುದು ಸುಳ್ಳಲ್ಲ. ಆದರೆ ಬಹಳಷ್ಟು ಜನ ‘ಅವಿವೇಕ’ ‘ಹುಚ್ಚು’ ಎಂದ ಮಾತ್ರಕ್ಕೆ ಒಂದು ಸಂಗತಿ ಅವಿವೇಕದ್ದಾಗುವುದಿಲ್ಲ ಮತ್ತು ಅದನ್ನು ಪ್ರತಿಪಾದಿಸುವವನು ಅವಿವೇಕಿ ಆಗುವುದಿಲ್ಲ ಎಂಬುದೂ ಸುಳ್ಳಲ್ಲ. ಮಕರ ಸಂಕ್ರಾಂತಿಯನ್ನು ಉತ್ತರಾಯಣ ಪುಣ್ಯಕಾಲವೆಂದು ಸಂಭ್ರಮಿಸುವ ಘಟನೆಯ ವಿಶ್ಲೇಷಣೆಗೆ ತೊಡಗುವ ಮುನ್ನ ಇಂಥದ್ದೊಂದು ತಿಳಿವಳಿಕೆ ನಮಗಿರಬೇಕೆಂಬ ಕಾರಣದಿಂದ ಈ ಪ್ರಸ್ತಾಪಮಾಡಿದೆನಷ್ಟೆ. ಪ್ರತಿವರ್ಷದಂತೆ ಇವತ್ತು ಜನವರಿ ಹದಿನಾಲ್ಕು. ಮಕರ …

Read More »

53 ವರ್ಷಗಳ ಅನುಭವದಲ್ಲಿ ಇದೇ ಮೊದಲು; ಮೋಡ ಅಡ್ಡ ಬಂದಿದ್ದರಿಂದ ಯುದ್ಧಕಾಂಡ ನಡೆಯಬಹುದು’

ಬೆಂಗಳೂರು: ಗವಿಗಂಗಾಧರೇಶ್ವರನ ಸೂರ್ಯ ರಶ್ಮಿ ಸ್ಪರ್ಶಕ್ಕೆ ಮೋಡ ಅಡ್ಡವಾಗಿದೆ. ಭಾಸ್ಕರನು ಅಗೋಚರವಾಗಿ ಲಿಂಗ ಸ್ಪರ್ಶಿಸಿ ಹಾದುಹೋಗಿದ್ದಾನೆ. ಈ ಬಗ್ಗೆ, ಗವಿಗಂಗಾಧರೇಶ್ವರ ದೇಗುಲದ ಪ್ರಧಾನ ಅರ್ಚಕ ಸೋಮಸುಂದರ್ ದೀಕ್ಷಿತ್ ಮಾಹಿತಿ ನೀಡಿದ್ದಾರೆ. ದೈವ ನಿರ್ಣಯ ದೇವರಿಗೆ ಮಾತ್ರ ಗೊತ್ತಿರುತ್ತದೆ. ನನ್ನ 53 ವರ್ಷಗಳ ಅನುಭವದಲ್ಲಿ ಇದೇ ಮೊದಲ ಬಾರಿ ಹೀಗಾಗುತ್ತಿದೆ. ಕಳೆದ ವರ್ಷ ಈಶ್ವರನ ಮೇಲೆ 2.36 ನಿಮಿಷ ಸೂರ್ಯ ಕಿರಣವಿತ್ತು. ಹಾಗಾಗಿ, ಕಳೆದ ವರ್ಷ ಕೊರೊನಾ ಇಡೀ ವಿಶ್ವವನ್ನು ಕಾಡಿತ್ತು. …

Read More »

ಶಬರಿಗಿರಿಯಲ್ಲಿ ಮಕರ ಜ್ಯೋತಿ ದರ್ಶನ: ಪುಳಕಗೊಂಡ ಭಕ್ತಸಾಗರ

ಶಬರಿಮಲೆ : ಪ್ರತಿವರ್ಷದಂತೆ ಸಂಕ್ರಾಂತಿಯಂದು ಮಕರ ಜ್ಯೋತಿ ದರ್ಶನ ಶಬರಿಮಲೆಯಲ್ಲಿ ಇಂದು ಆಗಿದೆ. ಕೇವಲ 5 ಸಾವಿರ ಭಕ್ತರಿಗೆ ಮಾತ್ರವೇ ಅವಕಾಶವಿದ್ದ ನಡುವೆಯೂ ಶಬರಿಮಲೆಯಲ್ಲಿ ಅಯ್ಯಪ್ಪನ ಭಕ್ತರು ಮಕರ ಜ್ಯೋತಿಯ ದರ್ಶನವನ್ನು ಪಡೆದರು. ಶಬರಿಮಲೆಯಲ್ಲಿ ಕೊರೋನಾ ಸೋಂಕಿನ ಮುಂಜಾಗ್ರತಾ ಕ್ರಮಗಳ ಮೂಲಕ ಕೇವಲ 5 ಸಾವಿರ ಅಯ್ಯಪ್ಪನ ಭಕ್ತರಿಗೆ ಮಾತ್ರವೇ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಇಂದು ಸಂಕ್ರಾಂತಿಯ ದಿನವಾದ್ದರಿಂದ ಅಯ್ಯಪ್ಪನ ಭಕ್ತರು ಶಬರಿಮಲೆಗೆ ಆಗಮಿಸಿದ್ದರು. ಇಂತಹ ಭಕ್ತರಿಗೆ ಮೂರು ಬಾರಿ …

Read More »