Breaking News

ಬಡತನಕ್ಕೆ ಬಗ್ಗದ ಛಲ… ಬೆಳಗಾವಿಯ ಪ್ರಶಾಂತ್’ಗೆ ಸಿಎ ಪರೀಕ್ಷೆಯಲ್ಲಿ ಅಗ್ರಸ್ಥಾನ

Spread the love

ಬಡತನಕ್ಕೆ ಬಗ್ಗದ ಛಲ… ಬೆಳಗಾವಿಯ ಪ್ರಶಾಂತ್’ಗೆ ಸಿಎ ಪರೀಕ್ಷೆಯಲ್ಲಿ ಅಗ್ರಸ್ಥಾನ
ಯಾವುದೇ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸುವ ಶಕ್ತಿ ಇದ್ದರೆ ಯಾವುದೇ ಸಾಧನೆ ಅಸಾಧ್ಯವಲ್ಲ ಎಂಬುದಕ್ಕೆ ಬಹುದೊಡ್ಡ ಸಾಕ್ಷ್ಯವಾಗಿದ್ದಾರೆ ಬೆಳಗಾವಿಯ ಯುವಕನ ಈ ಸಾಧನೆ. ಹಾಗಾದರೇ, ಆ ಯುವಕ ಮಾಡಿರುವ ಸಾಧನೆಯಾದರೂ ಯಾವುದು? ಎಂಬುದನ್ನು ನೋಡೋಣ ಬನ್ನಿ.
ಹೌದು, ಬೆಳಗಾವಿಯ ಕಂಗ್ರಾಳಿ ಬುದ್ರುಕ್ ಗ್ರಾಮದ ಪ್ರಶಾಂತ್ ಮಂಗೇಶ್ ಚೌಗುಲೆ. ಆರ್ಥಿಕ ಸಂಕಷ್ಟಗಳಿಂದ ಜರ್ಜರಿತ ಕುಟುಂಬದಿಂದ ಬಂದ ಈ ಪ್ರತಿಭಾವಂತ ಯುವಕ. ಈತ ತನ್ನ ಬುದ್ಧಿಮತ್ತೆ ಮತ್ತು ಪರಿಶ್ರಮದಿಂದ ಸಿಎ ಪರೀಕ್ಷೆಯನ್ನು ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾನೆ.
ಅವರ ತಂದೆ ‘ಮುಜಾವರ್ ಪೆಟ್ರೋಲಿಯಂ’ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಟ್ಯಾಂಕ್‌ಗಳ ದುರಸ್ಥಿಯ ಕೆಲಸ ಮಾಡುತ್ತಾ ಕುಟುಂಬ ನಿರ್ವಹಣೆಯನ್ನು ಮಾಡುತ್ತಾರೆ. ಕುಟುಂಬದಲ್ಲಿ ಯಾರಿಗೂ ಉನ್ನತ ಶಿಕ್ಷಣವಿಲ್ಲದ ಈ ಸ್ಥಿತಿಯಲ್ಲಿಯೂ ಪ್ರಶಾಂತ್ ತನ್ನ ಕನಸುಗಳಿಗೆ ದಿಕ್ಕು ನೀಡಿ, ಶ್ರದ್ಧೆ ಮತ್ತು ಪರಿಶ್ರಮದಿಂದ ಮುಂದುವರಿದು ಈ ಸಾಧನೆ ಮಾಡಿದ್ದಾರೆ.
ಅವರ ಈ ಯಶಸ್ಸನ್ನು ಕಂಡು ಬೆಳಗಾವಿ ಕ್ಷೇತ್ರದ ಶಾಸಕ ಆಸೀಫ್ ಸೇಠ್ ಅವರು ಸತ್ಕರಿಸಿ ಅಭಿನಂದನೆ ಸಲ್ಲಿಸಿದ್ದಾರೆ. ಬಡ ಕುಟುಂಬದ ಈ ವಿಜಯದಿಂದ ಮನೆಯಲ್ಲೂ ಹಾಗೂ ಗ್ರಾಮದಲ್ಲೂ ಸಂತಸ ಮೂಡಿಸಿದೆ. ಪ್ರಶಾಂತ್‌ ಅವರ ಈ ಸಾಧನೆ ಬಡ ಮಕ್ಕಳಿಗೂ ಪ್ರೇರಣೆಯಾಗಿದೆ.

Spread the love

About Laxminews 24x7

Check Also

150ನೇ ವರ್ಷಕ್ಕೆ ಕಾಲಿಟ್ಟ ಬೆಳಗಾವಿ ಬಾರ್ ಅಸೋಸಿಯೇಷನ್… ಸವಿನೆನಪಿನ ಕಚೇರಿಯನ್ನು ಉದ್ಘಾಟಿಸಿ ವಕೀಲರು…

Spread the love 150ನೇ ವರ್ಷಕ್ಕೆ ಕಾಲಿಟ್ಟ ಬೆಳಗಾವಿ ಬಾರ್ ಅಸೋಸಿಯೇಷನ್… ಸವಿನೆನಪಿನ ಕಚೇರಿಯನ್ನು ಉದ್ಘಾಟಿಸಿ ವಕೀಲರು… ಬೆಳಗಾವಿಯ ವಕೀಲರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ