Breaking News

ಮಾಜಿ ಸೈನಿಕರು ಸರ್ಕಾರದ ಸೌಲಭ್ಯ ಪಡೆಯಲಿ: ಸಂಸದೆ ಪ್ರಿಯಾಂಕಾ ಜಾರಕಿಹೊಳಿ

Spread the love

ನಿಪ್ಪಾಣಿ: ಸೈನಿಕರು ದೇಶದ ಶಾಂತಿ ಹಾಗೂ ನಮ್ಮ ಜೀವ ಕಾಪಾಡುವ ರಕ್ಷಕರು. ವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ದೇಶ ಸೇವೆ ತೊಡಗಿರುವುದು ಶ್ಲಾಘನೀಯ ಎಂದು ಚಿಕ್ಕೋಡಿ ಲೋಕಸಭಾ ಸದಸ್ಯೆ ಪ್ರಿಯಾಂಕಾ ಜಾರಕಿಹೊಳಿ ಅವರು ಹೇಳಿದರು.May be an image of one or more people, temple, dais and text
ತಾಲೂಕಿನ ತವಂದಿ ಗ್ರಾಮದಲ್ಲಿ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ 20.00 ಲಕ್ಷ ರೂ. ವೆಚ್ಚದಲ್ಲಿ ಮಂಜೂರಾದ ಮಾಜಿ ಸೈನಿಕರ ಭವನದ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು ಸಮಾರಂಭ ನೆರವೇರಿಸಿ ಅವರು ಮಾತನಾಡಿದರು.May be an image of text
ದೇಶ ರಕ್ಷಣೆಗೆ ಅಮೂಲ್ಯ ಸೇವೆ ಸಲ್ಲಿಸಿದ ಮಾಜಿ ಸೈನಿಕರ ಗೌರವ ಮತ್ತು ಸೌಲಭ್ಯಗಳನ್ನು ಇನ್ನಷ್ಟು ಬಲಪಡಿಸಲಾಗುವುದು. ಮಾಜಿ ಸೈನಿಕರ ಭವನವು ಶೀಘ್ರದಲ್ಲೇ ಪೂರ್ಣಗೊಂಡು, ಮಾಜಿ ಸೈನಿಕರು ಹಾಗೂ ಅವರ ಕುಟುಂಬಗಳಿಗೆ ಉಪಯುಕ್ತವಾಗಲಿ ಎಂದು ತಿಳಿಸಿದರು.May be an image of one or more people, flute, dais and text that says "้กัจาสินตติ ထနတ်း 品り कु. प्रियांर प्रियांसमातेज ম सातिेऊ. जरकोशली (चिकोडी लोकसभा खासदार) तवंदी नगरीमध्ये सहर्ष स्वा्गत सबंदी गावामध्ये सैनिक महनसादरी20 लाखनिषीरंकी 10 लाख नানे, त्या इमारताचा मराीचाभरमीपुजोः शुक्वारबि. 02-01-2026 ।ााাभवशोव2-01-2026 रीशी भुमीपूनन दुपारी 12 वाजता करण्यात येणार आहे. .तरी सर्य प्रामस्थ महिला आंण सर्ब रुण मंडळे उर्पसधित रहावे. स्वागतीत्सुक आजी माजी सैनिक संघटना, तवंदी"
ದೇಶ ರಕ್ಷಣೆಯಲ್ಲಿ ಸೈನಿಕರ ಪಾತ್ರ ಪ್ರಮುಖ. ರೈತರು, ಸೈನಿಕರು ಹಾಗೂ ಕಾರ್ಮಿಕರು ದೇಶದ ಪ್ರಮುಖ ನಾಯಕರು. ಈ ಮೂರು ವರ್ಗದ ಸಹಕಾರವಿಲ್ಲದೇ ನಮ್ಮ ಪ್ರತಿನಿತ್ಯದ ಕಾರ್ಯ ನಡೆಯುವುದು ಅಸಾಧ್ಯ. ದೇಶಕ್ಕಾಗಿ ಸೇವೆ ಸಲ್ಲಿಸಿದ ಮಾಜಿ ಸೈನಿಕರು ಸರ್ಕಾರದಿಂದ ದೊರಕುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಮುಂದಾಗಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಬೆಳಗಾವಿ ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ‌ಚಿಂಗಳೆ, ಮುಖಂಡರಾದ ಉತ್ತಮ ಪಾಟೀಲ, ಸುಪ್ರಿಯಾ ಪಾಟೀಲ, ಸುಜಯ ಪಾಟೀಲ, ತವಂದಿ ಗ್ರಾ.ಪಂ. ಅಧ್ಯಕ್ಷೆ ಲಕ್ಷ್ಮೀ ಕಾಂಬಳೆ, ಉಪಾಧ್ಯಕ್ಷ ಸಂಜಯ ಪಾಟೀಲ ಸೇರಿದಂತೆ ನಿಪ್ಪಾಣಿ ತಾಲೂಕಿನ ಮಾಜಿ ಸೈನಿಕರು ಹಾಗೂ ಗ್ರಾಮದ ಹಿರಿಯರು ಉಪಸ್ಥಿತರಿದ್ದರು.

Spread the love

About Laxminews 24x7

Check Also

ರಾಕ್ಷಸರು ಎಷ್ಟೇ ಅಟ್ಟಹಾಸ ಮೆರೆದರೂ ಬಳ್ಳಾರಿ ಶಾಂತಿಯುತವಾಗಿರುವಂತೆ ನೋಡಿಕೊಳ್ಳುತ್ತೇವೆ: ಶಾಸಕ ನಾರಾ ಭರತ್​ ರೆಡ್ಡಿ

Spread the loveಬಳ್ಳಾರಿ: “ಯಾವ ರಾಕ್ಷಸರು ಎಷ್ಟೇ ಅಟ್ಟಹಾಸ ಮೆರೆದರೂ ಬಳ್ಳಾರಿ ಶಾಂತಿಯುತವಾಗಿದೆ, ಅದು ಹಾಗೆ ಇರುವಂತೆ ನಾವು ಯಾವತ್ತೂ ನೋಡಿಕೊಳ್ಳುತ್ತೇವೆ” …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ