Breaking News

ಶೀಗಿ ಹುಣ್ಣಿಮೆ: ವಿಶೇಷ ಬಸ್​ಗಳಲ್ಲಿ ಯಲ್ಲಮ್ಮನ ಗುಡ್ಡಕ್ಕೆ 10 ಸಾವಿರಕ್ಕೂ ಹೆಚ್ಚು ಭಕ್ತರ ಪ್ರಯಾಣ

Spread the love

ಹುಬ್ಬಳ್ಳಿ: ಬೆಳಗಾವಿ ಜಿಲ್ಲೆಯ ಸವದತ್ತಿ ರೇಣುಕಾ ದೇವಿ ದರ್ಶನ ತೆರಳುವ ಭಕ್ತಾದಿಗಳು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ದೀಪಾವಳಿ ಅಮಾವಾಸ್ಯೆವರೆಗೆ ಶುಕ್ರವಾರ, ರವಿವಾರ ಹಾಗೂ ಮಂಗಳವಾರ ಹುಬ್ಬಳ್ಳಿ ಹಾಗೂ ನವಲಗುಂದದಿಂದ ಯಲ್ಲಮ್ಮನ ಗುಡ್ಡಕ್ಕೆ ನೇರವಾಗಿ ವಿಶೇಷ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.

ಶೀಗಿ ಹುಣ್ಣಿಮೆಯ ಪ್ರಯುಕ್ತ ಅವಳಿ ನಗರದಿಂದ ಸವದತ್ತಿಯ ರೇಣುಕಾದೇವಿ ದರ್ಶನಕ್ಕೆ ತೆರಳುವ ಭಕ್ತಾದಿಗಳು ಹಾಗೂ ಇತರ ಪ್ರಯಾಣಿಕರ ಅನುಕೂಲಕ್ಕಾಗಿ ಮಾಡಲಾಗಿದ್ದ ವಿಶೇಷ ಬಸ್ ಗಳಿಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಒಂದೇ ದಿನ ಹುಬ್ಬಳ್ಳಿಯಿಂದ 42 ಬಸ್ಸುಗಳಲ್ಲಿ 82 ಸರತಿಗಳಲ್ಲಿ 6350 ಭಕ್ತಾದಿಗಳು ಹಾಗೂ ನವಲಗುಂದದಿಂದ ಬಸ್​ಗಳಲ್ಲಿ 60 ಸರತಿಗಳಲ್ಲಿ 4300ಕ್ಕೂ ಹೆಚ್ಚು ಭಕ್ತಾದಿಗಳು ಯಲ್ಲಮ್ಮನಗುಡ್ಡಕ್ಕೆ ಹೋಗಿ ರೇಣುಕಾ ದೇವಿಯ ದರ್ಶನ ಪಡೆದು ಬಂದಿದ್ದಾರೆ. ಈ ವಿಶೇಷ ಬಸ್ ಗಳಲ್ಲಿ ನೇರವಾಗಿ ಯಲ್ಕಮ್ಮನ ಗುಡ್ಡಕ್ಕೆ ಹೋಗಿಬರಲು ಭಕ್ತಾದಿಗಳಿಗೆ ಬಹಳಷ್ಟು ಅನುಕೂಲವಾವಾಗಿದೆ.

ಆದ್ದರಿಂದ ಬರುವ ಅಮಾವಾಸ್ಯೆವರೆಗೆ ಪ್ರತಿ ಶುಕ್ರವಾರ, ರವಿವಾರ ಹಾಗೂ ಮಂಗಳವಾರಂದು ಈ ವಿಶೇಷ ಬಸ್ ಗಳ ಸೌಲಭ್ಯವನ್ನು ಮಾಡುವಂತೆ ಬೇಡಿಕೆ ಬಂದಿರುತ್ತದೆ ಅದರಂತೆ ದೀಪಾವಳಿ ಅಮಾವಾಸ್ಯೆವರೆಗೆ ಪ್ರತಿ ಶುಕ್ರವಾರ, ರವಿವಾರ ಹಾಗೂ ಮಂಗಳವಾರದಂದು ಅಂದರೆ ಅಕ್ಟೋಬರ್ 10,12,14,17,19ರಂದು ವಿಶೇಷ ಬಸ್ ಗಳ ವ್ಯವಸ್ಥೆ ಇರುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.


Spread the love

About Laxminews 24x7

Check Also

ಬಾಯ್ಲರ್ ಸ್ಫೋಟ; 11 ವರ್ಷದ ಬಾಲಕಿ ಸಾವು, ಮೂವರಿಗೆ ಗಂಭೀರ ಗಾಯ

Spread the loveದಾವಣಗೆರೆ, ಅಕ್ಟೋಬರ್​ 08: ಮನೆಯಲ್ಲಿದ್ದ ಬಾಯ್ಲರ್ ಸ್ಫೋಟಗೊಂಡು (Boiler explosion) 11 ವರ್ಷದ ಬಾಲಕಿ ಸಾವನ್ನಪ್ಪಿದ್ದು (death), ಮೂವರಿಗೆ ಗಂಭೀರ ಗಾಯಗಳಾಗಿರುವಂತಹ ಘಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ