ದಾವಣಗೆರೆ: ಕಳ್ಳತನ ಪ್ರಕರಣವೊಂದನ್ನು ಬೇಧಿಸಿರುವ ದಾವಣಗೆರೆ ಪೊಲೀಸರು, 18.790 ಕೆಜಿ ಬೆಳ್ಳಿ ಆಭರಣ ಕಳವು ಮಾಡಿದ್ದ ರಾಜಸ್ಥಾನ ಮೂಲದ ಮೂವರು ಖದೀಮರನ್ನು ಬಂಧಿಸಿದ್ದಾರೆ. ದಿನೇಶ್ ಕುಮಾರ್(35), ದೀಪಕ್ ಕುಮಾರ್(26), ರಮೇಶ್ ಕುಮಾರ್ (31) ಬಂಧಿತರು.
ನಗರದ ಕೆಬಿ ಬಡಾವಣೆಯ ಕೀರ್ವಾಡಿ ಲೇಔಟ್ನ ನಿವಾಸಿ ಗಿರೀಶ್ ಎನ್ನುವರು ಜು.14ರಂದು ತಾವು ಯಾರು ಇಲ್ಲದಾಗ ತಮ್ಮ ಮನೆಯಲ್ಲಿ ಕಳ್ಳತನವಾಗಿದೆ ಎಂದು ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ತನಿಖೆ ಚುರುಕುಗೊಳಿಸಿದ್ದ ಕೆಟಿಜೆ ನಗರ ಪೊಲೀಸರು, ಕಳತನ ನಡೆದ 15 ದಿನದಲ್ಲೇ ಪ್ರಕರಣ ಬೇಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಮೂಲದ ಮೂವರು ಆರೋಪಿಗಳಾದ ದಿನೇಶ್ ಕುಮಾರ್, ದೀಪಕ್ ಕುಮಾರ್ ಮತ್ತು ರಮೇಶ್ ಕುಮಾರ್ ಎಂಬುವರನ್ನು ಬಂಧಿಸಲಾಗಿದ್ದು, ಅವರಿಂದ ಒಟ್ಟು 20 ಲಕ್ಷ ಮೌಲ್ಯದ 17.690 ಕೆಜಿ ಬೆಳ್ಳಿ ಆಭರಣ ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್ ಮಾಹಿತಿ ನೀಡಿದ್ದಾರೆ.
Laxmi News 24×7