Breaking News

‘ನನ್ನ ಸಿನಿಮಾ ತಡೆಯುವ ಮೂರ್ಖತನ ಬೇಡ’; ತಮಿಳು ನಟ ಧನುಷ್ ಎಚ್ಚರಿಸಿದ್ದು ಯಾರಿಗೆ?

Spread the love

ಕಾಲಿವುಡ್ ಸ್ಟಾರ್ ಹೀರೋ ಧನುಷ್ (Dhanush) ಅವರ ಇತ್ತೀಚಿನ ಸಿನಿಮಾ ‘ಕುಬೇರ’ ರಿಲೀಸ್​ಗೆ ರೆಡಿ ಇದೆ. ನಿರ್ದೇಶಕ ಶೇಖರ್ ಕಮ್ಮುಲ ನಿರ್ದೇಶನದ ಈ ಚಿತ್ರದಲ್ಲಿ ಟಾಲಿವುಡ್ ಹೀರೋ ಅಕ್ಕಿನೇನಿ ನಾಗಾರ್ಜುನ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಸುತ್ತ ಈಗಾಗಲೇ ಒಳ್ಳೆಯ ಹೈಪ್ ಇದೆ. ಭಾರಿ ನಿರೀಕ್ಷೆಗಳ ನಡುವೆ ತಯಾರಾಗಿರುವ ಈ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾ ಬಗ್ಗೆ ಕೆಲವರು ನೆಗೆಟಿವ್ ಸುದ್ದಿ ಹಬ್ಬಿಸುತ್ತಿದ್ದುಈ ಬಗ್ಗೆ ಧನುಷ್ ಮಾತನಾಡಿದ್ದಾರೆ.

ಕುಬೇರ’ ಚಿತ್ರ ಜೂನ್ 20ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಇದರೊಂದಿಗೆ ಚಿತ್ರತಂಡ ಈಗ ಪ್ರಚಾರಗಳನ್ನು ಪ್ರಾರಂಭಿಸಿದೆ. ತಯಾರಕರು ಇತ್ತೀಚೆಗೆ ಜೂನ್ 1ರಂದು ಚೆನ್ನೈನಲ್ಲಿ ‘ಕುಬೇರ’ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ಆಯೋಜಿಸಿದ್ದರು. ಧನುಷ್, ನಾಗಾರ್ಜುನ, ರಶ್ಮಿಕಾ ಮಂದಣ್ಣ, ದೇವಿ ಶ್ರೀ ಪ್ರಸಾದ್ ಮತ್ತು ಅನಿರುದ್ಧ್ ಮುಂತಾದ ಸೆಲೆಬ್ರಿಟಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು. ಆದರೆ, ಕಾರ್ಯಕ್ರಮದಲ್ಲಿ ಧನುಷ್ ಮಾಡಿದ ಹೇಳಿಕೆಗಳು ಈಗ ಚರ್ಚೆಯ ವಿಷಯವಾಗಿದೆ. ತಮ್ಮ ಮುಂಬರುವ ಚಿತ್ರಗಳ ಸುತ್ತಲಿನ ನಕಾರಾತ್ಮಕ ಪ್ರಚಾರವನ್ನು ಅವರು ಬಲವಾಗಿ ಖಂಡಿಸಿದರು.

ಕೆಲವರು ತಮ್ಮ ಸ್ವಾರ್ಥಕ್ಕಾಗಿ ತಮ್ಮ ಮುಂಬರುವ ಚಿತ್ರದ ಬಗ್ಗೆ ನಕಾರಾತ್ಮಕ ಪ್ರಚಾರವನ್ನು ಹರಡುತ್ತಿದ್ದಾರೆ ಎಂದು ಅವರು ಹೇಳಿದರು. ಯಾರು ಏನೇ ಮಾಡಿದರೂ ಅವರಿಗೆ ಏನೂ ಮಾಡಲು ಸಾಧ್ಯವಿಲ್ಲ ಎಂದು ಕೂಡ ಎಚ್ಚರಿಸಿದರು. ತಮ್ಮ ಚಿತ್ರಕ್ಕೆ ಎದುರಾದ ನಕಾರಾತ್ಮಕ ಪ್ರಚಾರದ ಬಗ್ಗೆ ಧನುಷ್ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದರು.

 

‘ನೀವು ನನ್ನ ವಿರುದ್ಧ ನಕಾರಾತ್ಮಕ ಪ್ರಚಾರ ಮಾಡಬಹುದು.. ಆದರೆ ನನ್ನ ಚಿತ್ರ ಬಿಡುಗಡೆಯಾಗುವ ಮೊದಲು ಯಾವುದೂ ನನ್ನನ್ನು ತಡೆಯಲು ಸಾಧ್ಯವಿಲ್ಲ. ನನ್ನ ಅಭಿಮಾನಿಗಳು ನನ್ನೊಂದಿಗಿದ್ದಾರೆ. ನನ್ನ ಬಗ್ಗೆ ನಕಾರಾತ್ಮಕ ಪ್ರಚಾರ ಮಾಡುವವರು ದಯವಿಟ್ಟು ಪಕ್ಕಕ್ಕೆ ಹೋಗಿ ಆಟವಾಡಿ. ನಮಗೆ ಈ ರೀತಿಯ ಸರ್ಕಸ್ ಬೇಡ. ಇಲ್ಲಿ ನನ್ನ ಅಭಿಮಾನಿಗಳು ಮಾತ್ರವಲ್ಲ. ನನ್ನ ಸಹೋದ್ಯೋಗಿಗಳು ಸಹ ಇದ್ದಾರೆ. ನನ್ನ ಅಭಿಮಾನಿಗಳು ಸುಮಾರು 23 ವರ್ಷಗಳಿಂದ ನನ್ನೊಂದಿಗಿದ್ದಾರೆ. ನನ್ನ ಬಗ್ಗೆ ನಕಾರಾತ್ಮಕ ವದಂತಿಗಳನ್ನು ಹರಡುವ ಮೂಲಕ ನೀವು ನನ್ನನ್ನು ತಡೆಯುತ್ತೀರಿ ಎಂದು ನೀವು ಭಾವಿಸಿದರೆ, ಅದಕ್ಕಿಂತ ಮೂರ್ಖತನ ಇನ್ನೊಂದಿಲ್ಲ. ನಾನು ಹಿಂದೆ ಸಾಕಷ್ಟು ಕಷ್ಟಪಟ್ಟಿದ್ದೇನೆ ಮತ್ತು ಈಗ ಈ ಮಟ್ಟದಲ್ಲಿದ್ದೇನೆ. ಜಗತ್ತಿಗೆ ಕುಬೇರನಂತಹ ಚಿತ್ರ ಬೇಕು. ಈ ಚಿತ್ರ ಹಿಟ್ ಆಗುತ್ತದೆ ಎಂದು ನನಗೆ ಸಂಪೂರ್ಣ ವಿಶ್ವಾಸವಿದೆ’ ಎಂದರು ಧನುಷ್.


Spread the love

About Laxminews 24x7

Check Also

ಕಾಂಗ್ರೆಸ್ ಪಕ್ಷಕ್ಕೆ ಮುಜುಗರಕ್ಕಿಡಾಗಿಸಿದ ಬಿಜೆಪಿ; ನಾಟಿ ಕೋಳಿ ಸರ್ಕಾರದ ಘೋಷಣೆಗಳು* ನಾಟಿ ಕೋಳಿ ಸರ್ಕಾರಕ್ಕೆ ವಿಜಯಪುರದಲ್ಲಿ ಬಿಜೆಪಿ ಸೆಡ್ಡು!

Spread the love ಕಾಂಗ್ರೆಸ್ ಪಕ್ಷಕ್ಕೆ ಮುಜುಗರಕ್ಕಿಡಾಗಿಸಿದ ಬಿಜೆಪಿ; ನಾಟಿ ಕೋಳಿ ಸರ್ಕಾರದ ಘೋಷಣೆಗಳು* ನಾಟಿ ಕೋಳಿ ಸರ್ಕಾರಕ್ಕೆ ವಿಜಯಪುರದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ