Breaking News

ಬೆಳಗಾವಿಯಲ್ಲಿ ಲವ್ ಜಿಹಾದ್ ಆರೋಪ…ನೈತಿಕ ಪೊಲೀಸಗಿರಿ.. ನಾಲ್ವರನ್ನು ವಶಕ್ಕೆ ಪಡೆದ ಗ್ರಾಮೀಣ ಪೊಲೀಸರು/

Spread the love

ಬೆಳಗಾವಿ: ಲವ್ ಜಿಹಾದ್ ಆರೋಪದ ಹಿನ್ನೆಲೆ ಯುವಕನಿಗೆ ಗೂಸಾ ನೀಡಿ ನೈತಿಕ ಪೊಲೀಸಗಿರಿ ತೋರಿಸಿದ ಹಿನ್ನೆಲೆ ನಾಲ್ವರನ್ನು ಬೆಳಗಾವಿ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿ ತಾಲೂಕಿನ ಸಾಂವಗಾಂವ ಗ್ರಾಮದ ಜಮೀನೊಂದರಲ್ಲಿ ತನ್ನ ಸ್ನೇಹಿತೆ ಜೊತೆಗೆ ಜಮೀನಿನಲ್ಲಿ ಮಾತನಾಡುತ್ತ ಕುಳಿತಿದ್ದ ಯುವಕ ಮತ್ತು ಯುವತಿಯರನ್ನು ವಿಚಾರಿಸಿದಾಗ, ಯುವಕ ಡಿ ಫಾರ್ಮಸಿ ವಿದ್ಯಾರ್ಥಿ ಅಲ್ಲಾವುದ್ದೀನ್ ಪೀರಜಾದೆ ಮತ್ತು ಯುವತಿ ಹಿಂದೂ ಎಂದು ಗೊತ್ತಾದ ಹಿನ್ನೆಲೆ ಸಾಂವಗಾವ್ ಗ್ರಾಮದ ಸುದೇಶ ಪಾಟೀಲ, ಸಂತೋಷ ಜಾಧವ್, ಅನಗೋಳದ ನಿವಾಸಿಗಳಾದ ಜೈ ಇಂಜಲ್ ಮತ್ತು ಸುಮಿತ್ ಮೋರೆ ಅವರು ಅಲ್ಲಾವುದ್ದೀನ್ ಮೇಲೆ ಹಲ್ಲೆ ನಡೆಸಿದ್ದಾರೆ. ಬೆಳಗಾವಿಯಲ್ಲಿ ನೈತಿಕ ಪೊಲೀಸ್ ಗಿರಿ ತೋರಿದ ನಾಲ್ವರ ವಿರುದ್ಧ ಬೆಳಗಾವಿ ‌ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.


Spread the love

About Laxminews 24x7

Check Also

ಅಕ್ರಮ ಎಸಗಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ

Spread the loveಬೆಳಗಾವಿ: ಮಹಾನಗರ ಪಾಲಿಕೆ 8 ಮತ್ತು 9 ವಾರ್ಡ್‌ನಲ್ಲಿನ  ಆಸ್ತಿಗಳಿಗೆ ಮತ್ತೊಬ್ಬರ ಹೆಸರಿನಲ್ಲಿ ಬಾಂಡ್ ಆಧಾರದ ಮೇಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ