ರಾಜ್ಯದ ಇತಿಹಾಸದಲ್ಲಿಯೇ ಮೊದಲ
ಬಾರಿಗೆ ರಾಜ್ಯ ವಿಧಾನ ಮಂಡಲದ
ವತಿಯಿಂದ ಆಚರಿಸಲಾದ ಕರ್ನಾಟಕ
ರಾಜ್ಯೋತ್ಸವದ ಸಂದರ್ಭದಲ್ಲಿ ಇಂದು
ಮುಂಜಾನೆ ಬೆಳಗಾವಿ ಜಿಲ್ಲಾ ಕನ್ನಡ
ಸಂಘಟನೆಗಳ ಕ್ರಿಯಾ ಸಮಿತಿ
ಅಧ್ಯಕ್ಷ ಶ್ರೀ ಅಶೋಕ ಚಂದರಗಿ
ಹಾಗೂ ಟೋಕಿಯೊ ಓಲಂಪಿಕ್ಸನ
ಕೋಚ್ ಹಾಗೂ ಉತ್ತರ ಪ್ರದೇಶದ
ನೊಯಿಡಾ ಜಿಲ್ಲಾಧಿಕಾರಿಯಾದ
ಕನ್ನಡಿಗ ಶ್ರೀ ಸುಹಾಸ ಲಾಲಿನಕೆರೆ ಯತಿರಾಜ ಅವರನ್ನು ವಿಧಾನ ಪರಿಷತ್
ಸಭಾಪತಿ ಶ್ರೀ ಬಸವರಾಜ ಹೊರಟ್ಟಿ
ಹಾಗೂ ವಿಧಾನ ಸಭಾಧ್ಯಕ್ಷ
ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು
ಸನ್ಮಾನಿಸಿದರು.ಙ್ಞಾನಪೀಠ
ಪ್ರಶಸ್ತಿ ವಿಜೇತರಾದ ಡಾ.ಚಂದ್ರಶೇಖರ ಕಂಬಾರ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.ಉಭಯ ಸದನಗಳ ಸಭಾಧ್ಯಕ್ಷರು ಹಾಗೂ ಸಭಾಪತಿಗಳ ಜಂಟೀ ಅಧ್ಯಕ್ಷತೆಯಲ್ಲಿ ಈ ಸಮಾರಂಭವನ್ನು ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಏರ್ಪಡಿಸಲಾಗಿತ್ತು.
Laxmi News 24×7