Breaking News

Daily Archives: ಮಾರ್ಚ್ 28, 2025

ಅಣ್ಣನ ಮಗನಿಂದಲೇ ಮಚ್ಚಿನಿಂದ ಹಲ್ಲೆಗೊಳಗಾದ ವ್ಯಕ್ತಿ ಸಾವು

ಹಾವೇರಿ: ಜಮೀನಿನ ರಸ್ತೆ ವಿವಾದ ಹಿನ್ನೆಲೆಯಲ್ಲಿ ಇತ್ತೀಚೆಗೆ ಅಣ್ಣನ ಮಗನಿಂದಲೇ ಮಚ್ಚಿನಿಂದ ಹಲ್ಲೆಗೊಳಗಾಗಿದ್ದ ವ್ಯಕ್ತಿ ಚಿಕಿತ್ಸೆಗೆ ಸ್ಫಂದಿಸದೇ ಶುಕ್ರವಾರ ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ. ಹಾವೇರಿಯ ಉಳಿವೆಪ್ಪ ಅಕ್ಕಿ (68) ಗಂಭೀರ ಗಾಯಗಳಿಂದ ಸಾವನ್ನಪ್ಪಿದವರು. ಕಳೆದ ಮಂಗಳವಾರ (ಮಾರ್ಚ್ 25)​ ಹಾವೇರಿಯ ಜನನಿಬಿಡ ಪ್ರದೇಶವಾದ ಎಂ.ಜಿ‌.ರಸ್ತೆಯಲ್ಲಿ ಆರೋಪಿ ಬಸವರಾಜ್ ತನ್ನ ಚಿಕ್ಕಪ್ಪ ಉಳಿವೆಪ್ಪನ ಮೇಲೆ ಮಚ್ಚಿನಿಂದ ಮನಬಂದಂತೆ ದಾಳಿ ನಡೆಸಿ ಕೊಲೆಗೆ ಯತ್ನಿಸಿದ್ದ. ಗಣಪತಿ ದೇವಾಲಯದ ಎದುರು ದೇವರಿಗೆ ಕೈ ಮುಗಿಯುತ್ತಿರುವಾಗಲೇ ಹಲ್ಲೆ …

Read More »

ಯುಗಾದಿ ಹಬ್ಬದ ಜೂಜಾಟಕ್ಕೆ ಬ್ರೇಕ್​

ಮಂಡ್ಯ: ಯುಗಾದಿ ಹಬ್ಬದ ಪ್ರಯುಕ್ತ ಮಂಡ್ಯ ಜಿಲ್ಲಾದ್ಯಂತ ಇಸ್ಪೀಟು ಸೇರಿದಂತೆ ಇತರ ಅಕ್ರಮ ಜೂಜಾಟ ಮತ್ತು ಬೆಟ್ಟಿಂಗ್ ನಡೆಸುವುದನ್ನು ನಿಷೇಧಿಸಲಾಗಿದ್ದು, ಅಂತಹ ಘಟನೆಗಳು ಕಂಡು ಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.   ಯುಗಾದಿ ಹಬ್ಬದಂದು ಎಲ್ಲ ಮಾದರಿಯ ಜೂಜಾಟಗಳನ್ನು ನಿಷೇಧಿಸಿದ್ದು, ಒಂದು ವೇಳೆ, ಪೊಲೀಸರ ಎಚ್ಚರಿಕೆ ಕಡೆಗಣಿಸಿ ಜೂಜಾಟ ಆಡುವುದು ಹಾಗೂ ಜೂಜು ಅಡ್ಡೆ ನಡೆಸುವವರ ಮೇಲೆ ಗೂಂಡಾ ಕಾಯ್ದೆ …

Read More »

ಓವರ್ ಲೋಡೆಡ್ ಇದ್ರೂ ಕಾಂಗ್ರೆಸ್ ಪಕ್ಷದಲ್ಲೇ ಕಾಯುತ್ತೇನೆ. ಇಲ್ಲಿಯೇ ಅಧ್ಯಕ್ಷ ಆಗಬೇಕು, ಇಲ್ಲಿಯೇ ಸಿಎಂ ಆಗಬೇಕು. ನಾನು ವೇಯ್ಟಿಂಗ್ ಲಿಸ್ಟ್​ನಲ್ಲಿದ್ದೇನೆ ಎಂದ ಸಚಿವ ಸತೀಶ್ ಜಾರಕಿಹೊಳಿ

ಬೆಂಗಳೂರು: ನಮ್ಮದೇ ಗಾಡಿ (ಕಾಂಗ್ರೆಸ್ ಪಕ್ಷ ) ಫುಲ್ ಇದೆ. ಇನ್ನು ಜೆಡಿಎಸ್ 14 ಶಾಸರನ್ನು ತೆಗೆದುಕೊಂಡು ನಾವೇನು ಮಾಡೋಣ. ಓವರ್ ಲೋಡೆಡ್ ಇದ್ರೂ ಕಾಂಗ್ರೆಸ್ ಪಕ್ಷದಲ್ಲೇ ಕಾಯುತ್ತೇನೆ. ಇಲ್ಲಿಯೇ ಅಧ್ಯಕ್ಷ ಆಗಬೇಕು, ಇಲ್ಲಿಯೇ ಸಿಎಂ ಆಗಬೇಕು. ನಾನು ವೇಯ್ಟಿಂಗ್ ಲಿಸ್ಟ್​ನಲ್ಲಿದ್ದೇನೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ತಮ್ಮ ನಿವಾಸದಲ್ಲಿಂದು ಮಾತನಾಡಿದ ಅವರು, ಸದ್ಯಕ್ಕೆ ತಾವು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಲ್ಲ. ಈಗಾಗಲೇ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ. ತಮ್ಮ ಸರದಿ ಏನಿದ್ದರೂ …

Read More »

ಶಿಕ್ಷಕರ ವ್ಯಕ್ತಿತ್ವ ವಿಕಸನವಾದರೇ…ಮಾತ್ರ ಉತ್ತಮ ವಿದ್ಯಾರ್ಥಿ.ಉತ್ತಮ ಸಮಾಜ ನಿರ್ಮಾಣ ಸಾಧ್ಯ

ಶಿಕ್ಷಕರ ವ್ಯಕ್ತಿತ್ವ ವಿಕಸನವಾದರೇ…ಮಾತ್ರ ಉತ್ತಮ ವಿದ್ಯಾರ್ಥಿ.ಉತ್ತಮ ಸಮಾಜ ನಿರ್ಮಾಣ ಸಾಧ್ಯ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ;ಕಾರ್ಯಾಗಾರ; ಪ್ರಶಸ್ತಿ ಪ್ರದಾನ ಶಿಕ್ಷಕರು ನಿರ್ಮಿಸಿದಂತೆ ವಿದ್ಯಾರ್ಥಿಗಳು ನಿರ್ಮಾಣಗೊಂಡು, ಸಮಾಜವನ್ನು ನಿರ್ಮಿಸುತ್ತಾರೆ. ಆದ್ದರಿಂದ ಶಿಕ್ಷಕರು ತಮ್ಮ ವ್ಯಕ್ತಿತ್ವವನ್ನು ವಿಕಸನಗೊಳಿಸಿಕೊಳ್ಳಬೇಕು. ಒತ್ತಡದ ಜೀವನ ನಡೆಸುವ ಶಿಕ್ಷಕರು ತಮ್ಮ ಆರೋಗ್ಯದ ಕಡೆಗೆ ಗಮನಹರಿಸಬೇಕು ಎಂದು ಜಿಲ್ಲಾ ಖಜಾನೆ ಅಧಿಕಾರಿ ವೀಣಾ ಬಿದರಿ ಹೇಳಿದರು. ಶುಕ್ರವಾರದಂದು ಬೆಳಗಾವಿಯ ಕುಮಾರಗಂಧರ್ವ ಕಲಾ ಮಂದಿರದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ …

Read More »

ರಾಜ್ಯದಲ್ಲಿ ಕ್ಯಾಂಪಸ್ ತೆರೆಯಲು ಪೋರ್ಟ್ಸ್ ಮೌತ್ ವಿವಿ ಒಲವು, ಕೈಗಾರಿಕಾ ಸಚಿವರ ಭೇಟಿ*

ಬೆಂಗಳೂರು: ರಾಜ್ಯದಲ್ಲಿ ತನ್ನದೇ ಆದ ಕ್ಯಾಂಪಸ್ ಸ್ಥಾಪಿಸಲು ಆಸಕ್ತಿ ಹೊಂದಿರುವ ಬ್ರಿಟನ್ನಿನ ಪ್ರತಿಷ್ಠಿತ ಪೋರ್ಟ್ಸ್ ಮೌತ್ ವಿಶ್ವವಿದ್ಯಾಲಯದ ಉನ್ನತ ಮಟ್ಟದ ನಿಯೋಗವು ಗುರುವಾರ ಇಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರನ್ನು ಭೇಟಿ ಮಾಡಿ, ಚರ್ಚಿಸಿತು. ಈ ವೇಳೆ ಸಚಿವರು, `ವಿದೇಶಿ ವಿಶ್ವವಿದ್ಯಾಲಯಗಳು ಸಹಭಾಗಿತ್ವದ ಮೂಲಕ ಅಥವಾ ಸ್ವತಂತ್ರವಾಗಿಯೇ ರಾಜ್ಯದಲ್ಲಿ ತಮ್ಮ ಕ್ಯಾಂಪಸ್ ತೆರೆಯಲು ಮುಂದೆ ಬರುತ್ತಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಇದಕ್ಕೆ ಬೇಕಾದ ಭೂಮಿ …

Read More »

ಜಿಲ್ಲಾ ಅಧ್ಯಕ್ಷರಿಗೆ ಶಕ್ತಿ ತುಂಬಲು ಎಐಸಿಸಿಯಿಂದ ಕಾರ್ಯಕ್ರಮ: ಡಿಸಿಎಂ ಡಿ.ಕೆ. ಶಿವಕುಮಾರ್*

ನವದೆಹಲಿ : “ಎಐಸಿಸಿಯು ಪಕ್ಷದ ಜಿಲ್ಲಾ ಅಧ್ಯಕ್ಷರಿಗೆ ಶಕ್ತಿ ತುಂಬಿ ಸಂಘಟನೆಗೆ ಹೊಸ ಸ್ವರೂಪ ನೀಡಲು ಮುಂದಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ದೆಹಲಿಯಲ್ಲಿ ನಡೆಯುತ್ತಿರುವ ಜಿಲ್ಲಾ ಅಧ್ಯಕ್ಷರುಗಳ ಸಭೆ ವೇಳೆ ಕೆಪಿಸಿಸಿ ಅಧ್ಯಕ್ಷರೂ ಆದ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮಗಳಿಗೆ ಶುಕ್ರವಾರ ಪ್ರತಿಕ್ರಿಯೆ ನೀಡಿದರು. “ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಸೇರಿ ಎಲ್ಲಾ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಸಭೆ ನಡೆಸಿದ್ದಾರೆ. …

Read More »

ಬಂಡೀಪುರ ರಾತ್ರಿ ಸಂಚಾರ: ಸರ್ವಸಮ್ಮತ ನಿರ್ಧಾರ- ಈಶ್ವರ ಖಂಡ್ರೆ

ಬಂಡೀಪುರ ರಾತ್ರಿ ಸಂಚಾರ: ಸರ್ವಸಮ್ಮತ ನಿರ್ಧಾರ- ಈಶ್ವರ ಖಂಡ್ರೆ ನವದೆಹಲಿ : ಬಂಡೀಪುರ ರಾತ್ರಿ ಸಂಚಾರ ನಿರ್ಬಂಧ ವಿಷಯ ಅತ್ಯಂತ ಸೂಕ್ಷ್ಮವಾಗಿದ್ದು, ಮುಖ್ಯಮಂತ್ರಿಯವರೊಂದಿಗೆ ಸಮಾಲೋಚಿಸಿ, ಕಾನೂನು ತಜ್ಞರ ಅಭಿಪ್ರಾಯ ಪಡೆದು ಸರ್ವಸಮ್ಮತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ. ದೆಹಲಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರಸ್ತುತ ಈ ಪ್ರಕರಣ ಸರ್ವೋನ್ನತ ನ್ಯಾಯಾಲಯದಲ್ಲಿದ್ದು, ಪ್ರಸ್ತುತ ರಾತ್ರಿ 9ರಿಂದ ಬೆಳಗ್ಗೆ 6ಗಂಟೆಯವರೆಗೆ ನಿರ್ಬಂಧ …

Read More »

ಬುದ್ದಿ ಮಾಂದ್ಯನಿಗೆ ಕಲ್ಲಿನೇಟ್ಟು ನೀಡಿ ಧಾರವಾಡದಲ್ಲಿ ಅಮಾನವೀಯ ಘಟನೆ…. ಚಿಕಿತ್ಸೆ ಫಲಿಸದೆ ಅಪ್ರಾಪ್ತ ಯುವಕನ ಅಟಹಾಸಕ್ಕೆ ಬಲಿಯಾದ ಜೀವ.

ಬುದ್ದಿ ಮಾಂದ್ಯನಿಗೆ ಕಲ್ಲಿನೇಟ್ಟು ನೀಡಿ ಧಾರವಾಡದಲ್ಲಿ ಅಮಾನವೀಯ ಘಟನೆ…. ಚಿಕಿತ್ಸೆ ಫಲಿಸದೆ ಅಪ್ರಾಪ್ತ ಯುವಕನ ಅಟಹಾಸಕ್ಕೆ ಬಲಿಯಾದ ಜೀವ. ಆ ವ್ಯಕ್ತಿ ಮೊದಲೇ ಬುದ್ದಿ ಮಾದ್ಯವನಾಗಿದ್ದ, ಹಾಗೇ ಅಲ್ಲಿಂದ ಇಲ್ಲಿ ಇಲ್ಲಿಂದ ಅಲ್ಲಿ ಅಲೇದಾಡುತ್ತಾ ಬೇಡಿ ತಿನ್ನುತ್ತಾ ರಸ್ತೆ ಬದಿ ಜೀವ ಸಾಗಿಸುತ್ತಿದ್ದ. ಆದರೆ ಅಪ್ರಾಪ್ತ ಯುವಕನೊಂದಿಗೆ ಕಿರಿಕ್ ಆಗಿದೆ, ಆ ಯುವಕ ಬುದ್ದಿ ಮಾಂದ್ಯ ಯುವಕನ ಮೇಲೆ ಹಲ್ಲೆ ಮಾಡಿದ್ದಾನೆ. ಯುವಕನ ಅಟಹಾಸಕ್ಕೆ ಗಂಭೀರವಾಗಿ ಗಾಯಗೊಂಡ ಬುದ್ದಿ ಮಾಂದ್ಯ …

Read More »

ರೈತರ ಜಮೀನಿನಲ್ಲಿ ಚಿರತೆ ಪ್ರತ್ಯಕ್ಷ…!!!

ರೈತರ ಜಮೀನಿನಲ್ಲಿ ಚಿರತೆ ಪ್ರತ್ಯಕ್ಷ…!!! ಜನರಲ್ಲಿ ಮೂಡಿದ ಆತಂಕ… ಸಿಸಿಟ್ಹಿವಿಯಲ್ಲಿ ಸೆರೆಯಾಯ್ತು ದೃಶ್ಯ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಂಪಗಾಂವ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು ಜನರಲ್ಲಿ ಆತಂಕ ಮನೆ ಮಾಡಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಂಪಗಾಂವ ಮತ್ತು ಪಟ್ಟಿಹಾಳ ಕೆ.ಎಸ್ ಗ್ರಾಮದ ಹೊರವಲಯದಲ್ಲಿ ಚಿರತೆಯೊಂದು ಕಾಣಿಸಿಕೊಂಡಿದೆ. ನರಿ ಬೇಟೆ ಆಡಿರುವ ಚಿರತೆ ಓಡಾಡುವ ದೃಶ್ಯಗಳು ಅರಣ್ಯ ಇಲಾಖೆ ಅಧಿಕಾರಿಗಳು ಇಟ್ಟಿದ ಕ್ಯಾಮೆರಾದಲ್ಲೂ ಚಿರತೆ ಸೆರೆಯಾಗಿವೆ. ರಾತ್ರಿ ಹೊತ್ತು ಜಮೀನಿನಲ್ಲಿ …

Read More »

ಖಾನಾಪೂರ ಪಟ್ಟಣದಲ್ಲಿನ ರೇಷನ್ ಅಂಗಡಿಗಳಿಗೆ ಹೋಗಿ ಪರಿಶೀಲನೆ ನಡೆಸಿದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯ ಇಸಾಕ್ ಖಾನ್ ಪಠಾಣ್

ಖಾನಾಪೂರ ಪಟ್ಟಣದಲ್ಲಿನ ರೇಷನ್ ಅಂಗಡಿಗಳಿಗೆ ಹೋಗಿ ಪರಿಶೀಲನೆ ನಡೆಸಿದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯ ಇಸಾಕ್ ಖಾನ್ ಪಠಾಣ್ ಖಾನಾಪೂರ ಪಟ್ಟಣದ ರೇಷನ್ ವಿತರಣೆ ಅಂಗಡಿಗಳಾದ ಗರೀಭಿ ಹಟಾವೋ ಜನಸೇವಾ ಸಹಕಾರಿ ಸಂಘದ ನಿಂಗಾಪೂರಗಲ್ಲಿಯಲ್ಲಿ ಇರುವ ಅಂಗಡಿ ನಂಬರ್ 132 ಅಂಗಡಿ ಸೇರಿದಂತೆ ಟಿಎಪಿಸಿಎಂಎಸ್ ಖಾನಾಪೂರ ಶಾಖೆಯ ಅಂಗಡಿ ನಂಬರ್ 129 ಕ್ಕೆ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯ ಇಸಾಕ್ ಖಾನ್ ಪಠಾಣ್ ಅವರು …

Read More »