Breaking News

ಬ್ಯಾಂಕ್​ ಖಾತೆಯಲ್ಲಿದ್ದ 6,69,904 ರೂ. ಹಣ ಖಾತೆದಾರರಿಗೂ ಗೊತ್ತಿಲ್ಲದೆ ವರ್ಗಾವಣೆ

Spread the love

ರಾಯಚೂರು: ಬ್ಯಾಂಕ್​ ಖಾತೆಯಲ್ಲಿದ್ದ 6,69,904 ರೂ. ಹಣವು ಖಾತೆದಾರರ ಗಮನಕ್ಕೂ ಬಾರದೆ, ವರ್ಗಾವಣೆ ಆಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ರೈತ ಮಹಿಳೆ ನೀಡಿದ ದೂರಿನ ಮೇರೆಗೆ ರಾಯಚೂರು ಸೈಬರ್ ಕ್ರೈಂ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಮಾಚನೂರು ಗ್ರಾಮದ ರೈತ ಮಹಿಳೆ ಜ್ಯೋತಿ ಎಂಬುವರೇ ಹಣ ಕಳೆದುಕೊಂಡವರು. ಇವರು ಮಾನ್ವಿ ಪಟ್ಟಣದ ಕೆನರಾ ಬ್ಯಾಂಕ್​ ಖಾತೆಯಲ್ಲಿದ್ದ ಹಣ ವರ್ಗಾವಣೆ ಆಗಿರುವುದಾಗಿ ದೂರು ನೀಡಿದ್ದಾರೆ. ವರ್ಷಪೂರ್ತಿ ದುಡಿಮೆ ಮಾಡಿದ ಹಣ ಕಳೆದುಕೊಂಡು ಮಹಿಳೆಯ ಹಾಗೂ ಅವರ ಪತಿ ಶರಣಬಸವ ಅವರು ದಿಕ್ಕು ತೋಚದಂತಾಗಿದ್ದಾರೆ.more-than-6-lakh-transferred-from-bank-account-woman-complained-to-police

ದೂರಿನ ವಿವರ: ಜ್ಯೋತಿ ದಂಪತಿ 10 ಎಕರೆ ಹೊಲವನ್ನು ಲೀಸ್​ಗೆ ಪಡೆದು, ಜಮೀನಿನಲ್ಲಿ ಮುಂಗಾರು ಹಂಗಾಮಿನಲ್ಲಿ ಹತ್ತಿ ಬಿತ್ತನೆ ಮಾಡಿದ್ದರು. ಭೂ ತಾಯಿಯನ್ನು ನಂಬಿಕೊಂಡು ಸಾಲ-ಸೋಲ ಮಾಡಿಕೊಂಡು ಕೃಷಿ ಮಾಡಿದ ದಂಪತಿಗೆ ಹತ್ತಿ ಬೆಳೆ ಚೆನ್ನಾಗಿ ಬಂದಿತ್ತು. ಬಳಿಕ ಫಸಲನ್ನು ಸರ್ಕಾರಿ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಿದ್ದರು. ಕಾಟನ್ ಕಾರ್ಪೋಷನ್​ಗೆ ಮಾರಾಟ ಮಾಡಿದ್ದ ಹತ್ತಿಯ ಹಣವು ಮೊದಲಿಗೆ ಜಮೀನು ಮಾಲೀಕನ ಖಾತೆಗೆ ಜಮಾ ಆಗಿತ್ತು. ಬಳಿಕ, ಬಳಿಕ ಹಣವನ್ನು ಲೀಸ್ ಪಡೆದ ಮಹಿಳೆ ಜ್ಯೋತಿ ಅವರು ತಮ್ಮ ಖಾತೆಗೆ ಜಮಾ ಮಾಡಿಸಿಕೊಂಡಿದ್ದರು. ಅದರಂತೆ 2025ರ ನ.21ರಂದು ಬ್ಯಾಂಕ್​ ಖಾತೆಗೆ 6,69,500 ರೂ. ಹಣ ಜಮಾ ಆಗಿತ್ತು. ನಂತರ ಮತ್ತೆ, ನ.26ರಂದು 2,31,000 ರೂ. ಜಮೆ ಮಾಡಿರುವುದಾಗಿ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಆದರೆ ನ.28ರಂದು ಬ್ಯಾಂಕ್​ಗೆ ಹೋಗಿ ಪರಿಶೀಲಿಸಿದಾಗ 2,31,000 ರೂ. ಮಾತ್ರ ಖಾತೆಯಲ್ಲಿ ಇರುವುದು ಗೊತ್ತಾಗಿದೆ. ತಕ್ಷಣ ವ್ಯವಸ್ಥಾಪಕರಿಗೆ ಸದರಿ ಹಣವನ್ನು ಹೋಲ್ಡ್ ಮಾಡಲು ತಿಳಿಸಿ, ಬ್ಯಾಂಕ್ ಸ್ಟೇಟ್‌ಮೆಂಟ್ ಪಡೆದು ಚೆಕ್​ ಮಾಡಿದಾಗ 23-11-2025ರಂದು ಹಂತ-ಹಂತವಾಗಿ ಒಟ್ಟು 6,69,904 ರೂ. ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆಯಾಗಿರುವುದು ಬೆಳಕಿಗೆ ಬಂದಿದೆ. ಆದರೆ ಹಣ ವರ್ಗಾವಣೆ ಆಗಿರುವ ಕುರಿತು ತಮ್ಮ ಮೊಬೈಲ್‌ಗೆ ಯಾವುದೇ ಮೆಸೇಜ್ ಬಂದಿಲ್ಲ ಎಂದು ಮಹಿಳೆಯು ವರ್ಗಾವಣೆ ಆಗಿರುವ ಮಾಹಿತಿಯಿರುವ ಬ್ಯಾಂಕ್​ ಸ್ಟೇಟ್​ಮೆಂಟ್ ಜೊತೆಗೆ ಪೊಲೀಸರಿಗೆ ದೂರು ನೀಡಿದ್ದಾರೆ.


Spread the love

About Laxminews 24x7

Check Also

ಹಿರೇಕೊಡಿಯಲ್ಲಿ ರಸ್ತೆ ಸುಧಾರಣೆ ಕಾಮಗಾರಿಗೆ ಚಾಲನೆ

Spread the love ಚಿಕ್ಕೋಡಿ:ಹಿರೇಕೊಡಿ ಗ್ರಾಮದ ಟಾಂಗ್ಯಾನಕೋಡಿ–ಚಿಕ್ಕೋಡಿ ಮುಖ್ಯ ರಸ್ತೆಯಿಂದ ಕಮ್ಮಾರ, ಸನದಿ, ಮಾಳಿ, ದೇವಡಕರ, ಕಾಗಲೆ, ಕರಗಾಂವೆ ಹಾಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ