Breaking News

ಕಳಸೂರು ಬ್ರಿಡ್ಜ್​​​​​​ ಕಂ ಬಾಂದಾರಕ್ಕೆ ಕ್ರಸ್ಟ್​ಗೇಟ್​ ಹಾಕುವ ಕಾರ್ಯ ಪೂರ್ಣ​:​ ರೈತರ ಹೋರಾಟಕ್ಕೆ ಜಯ

Spread the love

ಹಾವೇರಿ: ಜಿಲ್ಲೆಯ ಸವಣೂರು ತಾಲೂಕು ಕಳಸೂರು ಸೇರಿದಂತೆ ಸುತ್ತಮುತ್ತಲ ರೈತರ ಹೋರಾಟಕ್ಕೆ ಜಯಸಿಕ್ಕಿದೆ. ಕಳಸೂರು ಬ್ರಿಡ್ಜ್​​​​​​ ಕಂ ಬಾಂದಾರಕ್ಕೆ ಕ್ರಸ್ಟ್​ಗೇಟ್​ಗೆ ಅಳವಡಿಸಲು ನೀರಾವರಿ ಇಲಾಖೆ ಗೇಟ್‌ಗಳನ್ನು ನೀಡಿದೆ. ಇಲಾಖೆ 132 ಗೇಟ್‌ಗಳನ್ನು ನೀಡಿದ್ದು ರೈತರು ಲೇಬರ್​ಗಳ ಸಹಾಯದಿಂದ ಕ್ರಸ್ಟ್​ಗೇಟ್​ಗಳನ್ನು ಹಾಕುವ ಕಾರ್ಯ ಪೂರ್ಣಗೊಳಿಸಿದ್ದಾರೆ.

ಪ್ರತಿಯೊಂದು ಹಂತದಲ್ಲಿ 44 ಗೇಟ್​ಗಳಂತೆ ಮೂರು ಹಂತದಲ್ಲಿ ಬಾಂದಾರಕ್ಕೆ ಸುಮಾರು 132 ಗೇಟ್​ ಅಳವಡಿಸಲಾಗಿದೆ. ರೈತರೇ ನೂತನ ಗೇಟ್‌ಗಳಿಗೆ ಬಣ್ಣ ಬಳಿದು ವೈಸರ್​ ರಬ್ಬರ್ ಹಾಕಿ ಗೋಣಿಚೀಲದ ತುಣುಕುಗಳಿಂದ ಕ್ರೈಸ್ಟಗೇಟ್ ಹಾಕಿದರು. ನೀರು ಸೋರುತ್ತಿರುವ ಗೇಟ್‌ಗಳಲ್ಲಿ ಬಟ್ಟೆ ಸೇರಿದಂತೆ ಮರಳು ಹಾಕುವ ಮೂಲಕ ನೀರು ಪೋಲಾಗದಂತೆ ಎಚ್ಚರಿಕೆ ವಹಿಸಿದರು. ಪ್ರಸ್ತುತ ಭಾನುವಾರ ಮಧ್ಯಾಹ್ನ ಗೇಟ್​ ಹಾಕಿಲಾಗಿದೆ. ಈಗಾಗಲೇ ಎರಡನೇ ಹಂತದವರೆಗೆ ಗೇಟ್ ಹಾಕಲಾಗಿದ್ದು ನೀರು ನಿಂತಿದೆ. ಮೂರನೇಯ ಹಂತದಲ್ಲಿ ಗೇಟ್​ ಹಾಕಲಾಗಿದ್ದು, ಇನ್ನು ಒಂದು ದಿನದಲ್ಲಿ ಬಾಂದಾರ ತುಂಬಿ ನೀರು ಮೇಲೆ ಹರಿಯುತ್ತದೆ ಎಂಬ ಸಂತಸವನ್ನು ರೈತರು ವ್ಯಕ್ತಪಡಿಸಿದರು.ಮೂರು ತಿಂಗಳ ಹಿಂದೆ ಕಳುವಾಗಿದ್ದ ಗೇಟ್​: ಹಾವೇರಿ ಜಿಲ್ಲೆಯ ಜೀವನಾಡಿ ವರದಾ ನದಿಗೆ ಸುಮಾರು 14 ಕಡೆ ಬ್ರಿಡ್ಜ್​​​​ ಕಂ ಬ್ಯಾರೇಜ್​​​​​​ ನಿರ್ಮಿಸಲಾಗಿದೆ. ಮಳೆಗಾಲದ ಮುಗಿಯುತ್ತಿದ್ದಂತೆ ಗೇಟ್​ ಅಳವಡಿಸುವದರಿಂದ ಬ್ಯಾರೇಜ್​ ಇರುವ ಸ್ಥಳ ಸೇರಿದಂತೆ ಸುತ್ತಮುತ್ತಲ ಹತ್ತಾರು ಗ್ರಾಮಗಳಿಗೆ ಜನ ಜಾನುವಾರುಗಳಿ ನೀರು ಸಿಗುತ್ತದೆ. ಈ ಹಿನ್ನೆಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ಗೇಟ್ ಹಾಕುತ್ತದೆ. ಆದರೆ ಪ್ರಸ್ತುತ ವರ್ಷ ಕಳಸೂರು ಶೇಷಗಿರಿ ಸೇರಿದಂತೆ ಮೂರು ಬ್ಯಾರೇಜ್‌ಗಳ ಕ್ರೈಸ್ಟ್​​ ಗೇಟ್‌ಗಳನ್ನು ಕಳ್ಳರು ಕದ್ದೊಯ್ದಿದ್ದರು.


Spread the love

About Laxminews 24x7

Check Also

ಪೃಥ್ವಿ ಫೌಂಡೇಶನ್ ವತಿಯಿಂದ ಪ್ರಶಸ್ತಿ ಪ್ರದಾನ ಸಮಾರಂಭ- ಸಾಧಕರ ಮಹತ್ಕಾರ್ಯ ಗೌರವಿಸುವುದು ಯುವ ಜನಾಂಗಕ್ಕೆ ದಾರಿ ದೀಪ- ಡಾ. ಹೇಮಾವತಿ ಸೋನೋಳ್ಳಿ

Spread the love ಪೃಥ್ವಿ ಫೌಂಡೇಶನ್ ವತಿಯಿಂದ ಪ್ರಶಸ್ತಿ ಪ್ರದಾನ ಸಮಾರಂಭ- ಸಾಧಕರ ಮಹತ್ಕಾರ್ಯ ಗೌರವಿಸುವುದು ಯುವ ಜನಾಂಗಕ್ಕೆ ದಾರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ