Breaking News

ಅಂತರಾಷ್ಟ್ರೀಯ

71 ನೇ ಗಣರಾಜ್ಯೋತ್ಸವ ಆಚರಿಸುತ್ತಿರುವ ದೇಶದ ಜನತೆಗೆ ಶಾಸಕ ಸತೀಶ ಜಾರಕಿಹೊಳಿ ಶುಭಾಶಯಗಳನ್ನು ಕೋರಿದ್ದಾರೆ.

ಬೆಂಗಳೂರು: 71 ನೇ ಗಣರಾಜ್ಯೋತ್ಸವ ಆಚರಿಸುತ್ತಿರುವ ದೇಶದ ಜನತೆಗೆ ಶಾಸಕ ಸತೀಶ ಜಾರಕಿಹೊಳಿ ಶುಭಾಶಯಗಳನ್ನು ಕೋರಿದ್ದಾರೆ. ಭಾರತೀಯರಿಗೆ ಸ್ವಾತಂತ್ರ್ಯ ಪಡೆದ ದಿನವಾದ ಆಗಸ್ಟ್ 15 ರಷ್ಟೇ ಮಹತ್ವದ ದಿನ ಇದಾಗಿದೆ. ಭಾರತದ ಎಲ್ಲಾ ನಾಗರಿಕರಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು, ಚಿಂತನೆ, ಅಭಿವ್ಯಕ್ತಿ, ನಂಬಿಕೆ ಮತ್ತು ಆರಾಧನೆಯ ಸ್ವಾತಂತ್ರ್ಯವನ್ನು, ಸ್ಥಾನಮಾನ ಮತ್ತು ಅವಕಾಶಗಳಲ್ಲಿ ಸಮಾನತೆಯನ್ನು ಖಾತರಿ ಪಡಿಸಿ ಎಲ್ಲರ ನಡುವೆ ಭಾತೃತ್ವವನ್ನು ಉದ್ದೀಪನಗೊಳಿಸುವುದೇ ಸಂವಿಧಾನದ ಮೂಲ ಆಶಯವಾಗಿದೆ ಎಂದು …

Read More »

ಎಪ್ಪತ್ತೊಂದನೆ ಗಣರಾಜ್ಯೋತ್ಸವದ ಪ್ರಯುಕ್ತ76 ಶೌರ್ಯ ಪದಕ

ನವದೆಹಲಿ, ಜ.25- ಎಪ್ಪತ್ತೊಂದನೆ ಗಣರಾಜ್ಯೋತ್ಸವದ ಪ್ರಯುಕ್ತ ಪೊಲೀಸ್ ಶೌರ್ಯ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ಜಮ್ಮು-ಕಾಶ್ಮೀರದ 108 ಪೊಲೀಸರಿಗೆ ಶೌರ್ಯ ಪ್ರಶಸ್ತಿ ಲಭಿಸಿವೆ.  ಸಿಆರ್‌ಪಿಎಫ್‌ ಎರಡನೆ ಸ್ಥಾನದಲ್ಲಿದ್ದು, ಒಟ್ಟು 76 ಶೌರ್ಯ ಪದಕಗಳನ್ನು ಗಳಿಸಿವೆ. ಕಾಶ್ಮೀರದ ಪೊಲೀಸರ ಪೈಕಿ ಮೂವರಿಗೆ ರಾಷ್ಟ್ರಪತಿ ಪೊಲೀಸ್ ಶೌರ್ಯ ಪದಕಗಳನ್ನು (ಪಿಪಿಎಂಜಿ) ನೀಡಲಾಗಿದೆ. ಇವರಲ್ಲಿ ಒಬ್ಬರಿಗೆ ಮರಣೋತ್ತರವಾಗಿ ಈ ಪದಕ ಘೋಷಿಸಲಾಗಿದೆ. ಕೇಂದ್ರಾಡಳಿತ ಪ್ರದೇಶವಾದ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರ ನಿಗ್ರಹ ಕಾರ್ಯಾಚರಣೆಯಲ್ಲಿ ತೊಡಗಿದ ಕಾಶ್ಮೀರ ಪೊಲೀಸರಿಗೆ ಈ ಪದಕಗಳು …

Read More »

ಟಿ 20 ಇತಿಹಾಸದಲ್ಲಿ ಇದೇ ಮೊದಲು ಇಂತಹ ದಾಖಲೆ ! ಏನು ಗೊತ್ತಾ ?

ಟಿ 20 ಇತಿಹಾಸದಲ್ಲಿ ಇದೇ ಮೊದಲು ಇಂತಹ ದಾಖಲೆ ! ಏನು ಗೊತ್ತಾ ? ಆಕ್ಲಾಂಡ್ : ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ನಡೆದ ಮೊದಲ ಟಿ 20 ಪಂದ್ಯದಲ್ಲಿ ಅಪರೂಪದ ದಾಖಲೆಯೊಂದು ದಾಖಲಾಗಿದೆ. ಈ ಪಂದ್ಯದಲ್ಲಿ ಉಭಯ ತಂಡಗಳ ಆಟಗಾರರು ಉತ್ತಮ ಬ್ಯಾಟಿಂಗ್ ಪ್ರದರ್ಶನ ಮಾಡಿ ರನ್ ಗಳ ಸುರಿಮಳೆಗೈದಿದ್ದಾರೆ. ನ್ಯೂಜಿಲೆಂಡ್‌ನ ಮೂವರು ಆಟಗಾರರು ಐವತ್ತಕ್ಕೂ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ. ಜೊತೆಗೆ ಇಬ್ಬರು ಭಾರತೀಯ ಆಟಗಾರರೂ ಸಹಾ …

Read More »

ನರೇಂದ್ರ ಮೋದಿ ಎಂದಾಕ್ಷಣ ಕಟ್ಟಾ ಹಿಂದೂವಾದಿ ಎಂದೇ ಜಗಜ್ಜಾಹಿರ

ನವದೆಹಲಿ: ನರೇಂದ್ರ ಮೋದಿ ಎಂದಾಕ್ಷಣ ಕಟ್ಟಾ ಹಿಂದೂವಾದಿ ಎಂದೇ ಜಗಜ್ಜಾಹಿರ. ಈ ಕಾರಣಕ್ಕೆ ಪ್ರತಿಯೊಂದು ನಡೆಗೂ ವಿರೋಧ ಪ್ರತಿಪಕ್ಷಗಳಿಂದ ಎದುರಾಗುತ್ತಲೇ ಇದೆ. ಅದರಲ್ಲೂ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಬಳಿಕ ದೇಶದಲ್ಲಿ ಅಲ್ಪಸಂಖ್ಯಾತರಾದ ಮುಸ್ಲಿಂ ಸಮುದಾಯ ಮೋದಿ ವಿರುದ್ಧ ತಿರುಗಿಬಿದ್ದಿದೆ ಎಂದೇ ಭಾವಿಸಲಾಗಿದೆ. ಆದರೆ, ಇಂಡಿಯಾ ಟುಡೆ ಗ್ರೂಪ್-ಕಾರ್ವಿ ಇನ್ಸೈಟ್ ಮೂಡ್ ಆಫ್ ದಿ ನೇಷನ್ (ಎಂಒಟಿಎನ್) ಎಂಬ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಮೋದಿ ಪರ ಶೇ.17ರಷ್ಟು ಮುಸ್ಲಿಮರು ಒಲವು …

Read More »

ನರೇಂದ್ರ ಮೋದಿ ಮಾತಿನ ಮೋಡಿ ಎದುರು ಸಪ್ಪೆಯಾಗಿ ಕಾಣುವ ಕಾಂಗ್ರೆಸ್ ನೇತಾರ

ನವದೆಹಲಿ: ನರೇಂದ್ರ ಮೋದಿ ಮಾತಿನ ಮೋಡಿ ಎದುರು ಸಪ್ಪೆಯಾಗಿ ಕಾಣುವ ಕಾಂಗ್ರೆಸ್ ನೇತಾರ, ಯುವ ನಾಯಕ ರಾಹುಲ್ ಗಾಂಧಿ, ತನ್ನ ಅಮ್ಮ ಸೋನಿಯಾ ಗಾಂಧಿಗಿಂತಲೂ ಹೆಚ್ಚು ಜನರ ಒಲವು ಪಡೆದಿದ್ದಾರೆ. ಇಂಡಿಯಾ ಟುಡೆ ಗ್ರೂಪ್-ಕಾರ್ವಿ ಇನ್ಸೈಟ್ ಮೂಡ್ ಆಫ್ ದಿ ನೇಷನ್ (ಎಂಒಟಿಎನ್) ಎಂಬ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಈ ವಿಷಯ ಬಹಿರಂಗವಾಗಿದೆ. ಶೇ. 53ರಷ್ಟು ಜನರು ಮೋದಿ ಪರ ಒಲವು ತೋರಿದ್ದರೆ, ಶೇ. 13 ರಷ್ಟು ಮಂದಿ ರಾಹುಲ್ …

Read More »

ಹಾಸ್ಟೆಲ್‍ಗಳಿಗೆ ಕಳಪೆ ಮಟ್ಟದ ಆಹಾರ ಸಾಮಾಗ್ರಿ ವಿತರಿಸುವವರ ವಿರುದ್ಧ ಸೂಕ್ತ ಕ್ರಮ -ಸಿಇಒ ಡಾ.ಪಿ.ರಾಜಾ

ಕಲಬುರಗಿ,ಜ.20.(ಕ.ವಾ.)- ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆಸುತ್ತಿರುವ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಕಳಪೆ ಮಟ್ಟದ ಆಹಾರ ನೀಡುತ್ತಿರುವ ಕುರಿತು ದೂರುಗಳು ಬಂದಿದ್ದು, ಅಧಿಕಾರಿಗಳು ವಸತಿ ನಿಲಯಗಳಿಗೆ ಭೇಟಿ ನೀಡುವ ಮೂಲಕ ಸಂಪೂರ್ಣ ವರದಿ ನೀಡಬೇಕು. ಅಲ್ಲದೇ ಕಳಪೆ ಮಟ್ಟದ ಆಹಾರ ಸಾಮಾಗ್ರಿ ಒದಗಿಸುತ್ತಿರುವ ಏಜೆಂಟ್‍ಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಪಿ.ರಾಜಾ ಅಧಿಕಾರಿಗಳಿಗೆ ಸೂಚಿಸಿದರು. ಸೋಮವಾರ ನಗರದ ಜಿಲ್ಲಾ …

Read More »

ಎನ್‌ಆರ್‌ಸಿ-ಸಿಎಎ ಭಾರತದ ಆಂತರಿಕ ವಿಷಯ: ಬಾಂಗ್ಲಾ ಪ್ರಧಾನಿ ಹಸೀನಾ

ಡಾಕಾ,ಜ.20- ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕತ್ವ ನೋಂದಣಿ(ಎನ್‍ಸಿಆರ್)ಯ ಅವಶ್ಯಕತೆ ಹಾಗೂ ಅನಿವಾರ್ಯತೆಯೂ ಇರಲಿಲ್ಲ. ಆದರೂ ಇದು ಭಾರತದ ಆಂತರಿಕ ವಿಷಯವಾಗಿದೆ. ಈ ವಿಚಾರದಲ್ಲಿ ಬಾಂಗ್ಲಾದೇಶ ತಟಸ್ಥ ನೀತಿ ಅನುಸರಿಸಲಿದೆ ಎಂದು ಪ್ರಧಾನಿ ಶೇಕ್ ಹಸೀನಾ ತಿಳಿಸಿದರು. 2014, ಡಿಸೆಂಬರ್ 31ರ ನಂತರದ ಹಿಂದು, ಬ್ಲಾಂಗ್ಲಾದೇಶ ಮತ್ತು ಆಫ್ಘಾನಿಸ್ತಾನದಿಂದ ಬಂದ ಹಿಂದು, ಸಿಖ್, ಬುದ್ದಿಸ್ಟ್ , ಜೈನ್, ಪಾರ್ಸಿ ಮತ್ತು ಕ್ರಿಶ್ಚಿಯನ್‍ಗಳು ಸಮುದಾಯದವರಿಗೆ ಭಾರತೀಯ ಪೌರತ್ವ ಸಿಗಲಿದೆ ಎಂದು …

Read More »

ರಾಜಕೀಯ ಪಕ್ಷಗಳಿಗೆ ದೇಣಿಗೆ ಸಂಗ್ರಹಿಸಲು ಅಸ್ತಿತ್ವದಲ್ಲಿರುವ ಚುನಾವಣಾ ಬಾಂಡ್

ನವದೆಹಲಿ,ಜ.20- ರಾಜಕೀಯ ಪಕ್ಷಗಳಿಗೆ ದೇಣಿಗೆ ಸಂಗ್ರಹಿಸಲು ಅಸ್ತಿತ್ವದಲ್ಲಿರುವ ಚುನಾವಣಾ ಬಾಂಡ್ ಯೋಜನೆಗೆ ಮಧ್ಯಂತರ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ಇಂದು ನಿರಾಕರಿಸಿದೆ.  ಚುನಾವಣಾ ಬಾಂಡ್ ಯೋಜನೆಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸರ್ಕಾರೇತರ ಸಂಸ್ಥೆಯೊಂದು ಸಲ್ಲಿಸಿದ್ದ ಅರ್ಜಿಯ ಕುರಿತು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಇದನ್ನು ನಿರಾಕರಿಸಿದೆ. ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ಹಾಗೂ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಸೂರ್ಯಕಾಂತ್ ಅವರನ್ನೊಳಗೊಂಡ ಪೀಠ ಈ ಸಂಬಂಧ ಎರಡು ವಾರಗಳ ಒಳಗೆ ಪ್ರತ್ಯುತ್ತರ ನೀಡುವಂತೆ ಕೇಂದ್ರ ಸರ್ಕಾರ …

Read More »

ಶೂನ್ಯ ಅನುಭವದ ಅದಾನಿ ಕಂಪೆನಿಗೆ ರಕ್ಷಣಾ ಜಲಾಂತರ್ಗಾಮಿ ನೌಕೆ ತಯಾರಿಕಾ ಜವಾಬ್ಧಾರಿ

ನವದೆಹಲಿ(16-01-2019): 45,000 ಕೋಟಿ ರೂ.ಗಳ ರಕ್ಷಣಾ ಜಲಾಂತರ್ಗಾಮಿ ಯೋಜನೆಯಲ್ಲಿ ನರೇಂದ್ರ ಮೋದಿ ಸರ್ಕಾರವು ಕೈಗಾರಿಕೋದ್ಯಮಿ ಗೌತಮ್ ಅದಾನಿಯ ಕಂಪೆನಿ ಪರ ಒಲವು ತೋರುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಅದಾನಿ ಗ್ರೂಫ್ ಡಿಫೆನ್ಸ್ ಹಡಗುಗಳು ಅಥವಾ ಜಲಾಂತರ್ಗಾಮಿ ನೌಕೆಗಳನ್ನು ತಯಾರಿಸುವ ‘ಅನುಭವ’ ಹೊಂದಿಲ್ಲ. ಒಂದು ಷರತ್ತಿನ ಆಧಾರದ ಮೇಲೆ ಜಲಾಂತರ್ಗಾಮಿ ನೌಕೆಗಳನ್ನು ತಯಾರಿಕೆ ಗುತ್ತಿಗೆ ನೀಡಲು ಕೇಂದ್ರ ಮುಂದಾಗಿದೆ. ಸಾಮಾನ್ಯವಾಗಿ  ಇದರಲ್ಲಿ ವಿದ್ಯುತ್ ಸ್ಥಾವರವನ್ನು ಸ್ಥಾಪಿಸುವ ಮತ್ತು ನಡೆಸುವ ಅನುಭವವನ್ನು ಪರಿಗಣಿಸಲಾಗುತ್ತದೆ ಆದರೆ …

Read More »

ರೇಲ್ವೆಇಲಾಖೆ ರಾಜ್ಯ ಸಚಿವ ಸುರೇಶ ಅಂಗಡಿ, ವಿಮಾನನಿಲ್ದಾಣಕ್ಕೆ ವೀರರಾಣಿ ಚನ್ನಮ್ಮನ ಹೆಸರನ್ನು ಶಿಫಾರಸು ಮಾಡುವಂತೆ ಜಿಲ್ಲಾಡಳಿತವನ್ನು ಕೋರಿದ್ದಾರೆ.

ಬೆಳಗಾವಿ: ಸಾಂಬ್ರಾ ವಿಮಾನ ನಿಲ್ದಾಣಕ್ಕೆ ವೀರರಾಣಿ ಕಿತ್ತೂರು ಚನ್ನಮ್ಮ ಹೆಸರಿಡುವ ಕುರಿತಂತೆ ಸಿದ್ಧರಾಮಯ್ಯ ಸಕಾ೯ರ ಕಳಿಸಿದ್ದ ಶಿಫಾರಸ್ಸನ್ನು ಡಿಸೆಂಬರ್ 2018 ರಲ್ಲಿ ರದ್ದು ಮಾಡಿರುವ ಕೇಂದ್ರ ಸಕಾ೯ರ, ಇತ್ತೀಚಿಗೆ ಜಿಲ್ಲಾಡಳಿತಕ್ಕೆ ಪತ್ರ ಬರೆದು ವಿಮಾನ ನಿಲ್ದಾಣಕ್ಕೆ ಹೆಸರಿಡಲು ಐತಿಹಾಸಿಕ ವ್ಯಕ್ತಿಗಳ ಹೆಸರಿಗಳನ್ನು ಕಳಿಸಿಕೊಡಲು ಸೂಚಿಸಿದೆ ‘ ರೇಲ್ವೆಇಲಾಖೆ ರಾಜ್ಯ ಸಚಿವ ಸುರೇಶ ಅಂಗಡಿ, ಮಂಗಳವಾರ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ವಿಮಾನ ನಿಲ್ದಾಣಕ್ಕೆ ವೀರರಾಣಿ ಚನ್ನಮ್ಮನ ಹೆಸರನ್ನು ಶಿಫಾರಸು ಮಾಡುವಂತೆ ಜಿಲ್ಲಾಡಳಿತವನ್ನು …

Read More »