Breaking News

ಬೆಳಗಾವಿಯ ಸ್ಮಶಾನಗಳ ದುಸ್ಥಿತಿ ಹೇಗಿದೆ ಎಂದರೆ ಮೃತರ ಅಂತ್ಯಕ್ರಿಯೆಗೆ ಹೋದವರು ಮರಳಿ ಮನೆಗೆ ಬರುತ್ತಾರೆ ಎನ್ನೋದು ಗ್ಯಾರಂಟಿ ಇಲ್ಲ

Spread the love

ಬೆಳಗಾವಿಯ ಸ್ಮಶಾನಗಳ ದುಸ್ಥಿತಿ ಹೇಗಿದೆ ಎಂದರೆ ಮೃತರ ಅಂತ್ಯಕ್ರಿಯೆಗೆ ಹೋದವರು ಮರಳಿ ಮನೆಗೆ ಬರುತ್ತಾರೆ ಎನ್ನೋದು ಗ್ಯಾರಂಟಿ ಇಲ್ಲ. ಕೆಲವೊಂದು ಸ್ಮಶಾನಗಳಲ್ಲಿ ರಾತ್ರಿಯಾದ್ರೆ ಬೆಳಕಿನ ವ್ಯವಸ್ಥೆ ಇಲ್ಲ, ಮತ್ತೊಂದಿಷ್ಟು ಮುಕ್ತಿಧಾಮಗಳ ಮೇಲ್ಛಾವಣಿಯ ತಗಡುಗಳು ಆಗಲೋ ಈಗಲೋ ಬೀಳುವಂತಾಗಿವೆ.

ಹೌದು ನಾವು ತೋರಿಸುತ್ತಿರುವ ಈ ದೃಶ್ಯ ಶಾಹಪುರದ ಮುಕ್ತಿಧಾಮದಲ್ಲಿನ ಅವ್ಯವಸ್ಥೆಯನ್ನು. ಇಲ್ಲಿ ಮೇಲ್ಛಾವಣಿಯಲ್ಲಿ ಹಾಕಿರುವ ತಗಡುಗಳು ಸಂಪೂರ್ಣವಾಗಿ ತುಕ್ಕು ಹಿಡಿದಿವೆ. ಯಾವಾಗ ಬೀಳುತ್ತವೋ ಗೊತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿಯೇ ಮೃತರ ಅಂತ್ಯಕ್ರಿಯೆಯನ್ನು ಕುಟುಂಬಸ್ಥರು, ಅವರ ಸಂಬಂಧಿಕರು ನಡೆಸುತ್ತಿದ್ದಾರೆ.

ಈ ವೇಳೆ ಆ ತಗಡುಗಳು ಯಾರ ಮೇಲಾದ್ರೂ ಬಿದ್ದು ಏನಾದ್ರೂ ಜೀವ ಹಾನಿ ಆದ್ರೆ ಇದಕ್ಕೆ ಯಾರು ಹೊಣೆ..? ಇನ್ನು ಮಳೆ ನೀರು ಶವದ ಮೇಲೆಯೇ ಬೀಳುತ್ತಿರುವುದು ಶವಗಳು ಸಂಪೂರ್ಣವಾಗಿ ದಹನವಾಗುತ್ತಿಲ್ಲ. ಹೀಗಾಗಿ ತಕ್ಷಣವೇ ಮಹಾನಗರ ಪಾಲಿಕೆ ಆಯುಕ್ತ ಡಾ.ರುದ್ರೇಶ ಘಾಳಿ ಅವರು ಈ ಬಗ್ಗೆ ಗಮನಹರಿಸಬೇಕು. ಇಲ್ಲಿನ ಅವ್ಯವಸ್ಥೆ ಸರಿಪಡಿಸಿ ಹೊಸ ತಗಡುಗಳನ್ನು ಹಾಕಿ, ಮುಂದೆ ಆಗುವ ಅನಾಹುತ ತಪ್ಪಿಸಬೇಕು ಎಂದು ಇಲ್ಲಿನ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.


Spread the love

About Laxminews 24x7

Check Also

ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆ ‌ಅವ್ಯವಸ್ಥೆ ಕಂಡು ಗರಂ ಆದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ

Spread the love ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆ ‌ಅವ್ಯವಸ್ಥೆ ಕಂಡು ಗರಂ ಆದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚಿಕ್ಕೋಡಿ: …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ