Breaking News
Home / ಅಂತರಾಷ್ಟ್ರೀಯ / ಅದಾನಿಗೆ ಆಘಾತ, ಯುಎಸ್ ಷೇರುಪೇಟೆಯಿಂದ ಹೊರಕ್ಕೆ

ಅದಾನಿಗೆ ಆಘಾತ, ಯುಎಸ್ ಷೇರುಪೇಟೆಯಿಂದ ಹೊರಕ್ಕೆ

Spread the love

ನ್ಯೂಯಾರ್ಕ್: ಗಲಭೆ ಪೀಡಿತ ಮ್ಯಾನ್ಮಾರ್ ದೇಶದ ಮಿಲಿಟರಿ ಪಡೆ ಜೊತೆ ಸಂಪರ್ಕ, ವ್ಯವಹಾರ ಹೊಂದಿರುವ ಕಾರಣಕ್ಕೆ ಭಾರತ ಮೂಲದ ಅದಾನಿ ಅವರ ಅದಾನಿ ಪೋರ್ಟ್ಸ್ ಸಂಸ್ಥೆಯನ್ನು ನ್ಯೂಯಾರ್ಕ್ ಷೇರುಪೇಟೆ ಪಟ್ಟಿಯಿಂದ ಹೊರ ಹಾಕಲಾಗಿದೆ. ಅದಾನಿ ಬಂದರುಗಳು ಮತ್ತು ಭಾರತದ ವಿಶೇಷ ಆರ್ಥಿಕ ವಲಯ ಲಿಮಿಟೆಡ್ ಸಂಸ್ಥೆಗೆ ಯುಎಸ್ ಷೇರುಪೇಟೆ ಎಸ್ & ಪಿ ಡೌ ಜೋನ್ಸ್ ಭಾರಿ ಆಘಾತ ನೀಡಿದೆ.

ಮಾನವ ಹಕ್ಕು ಉಲ್ಲಂಘನೆ ಮಾಡಿ, ಪ್ರಜಾಪ್ರಭುತ್ವ ವ್ಯವಸ್ಥೆ ಹಾಳುಗೆಡವಿರುವ ಮ್ಯಾನ್ಮಾರ್ ಮಿಲಿಟರಿ ಜೊತೆ ಅದಾನಿ ಸಂಸ್ಥೆ ವ್ಯವಹಾರ ಹೊಂದಿರುವುದರಿಂದ ಈ ಕ್ರಮ ಜರುಗಿಸಲಾಗಿದೆ ಎಂದು ಎಸ್ & ಪಿ ಡೌ ಜೋನ್ಸ್ ತನ್ನ ಸುಸ್ಥಿರತೆ ಸೂಚ್ಯಂಕದಿಂದ ತೆಗೆದು ಹಾಕಿದೆ.

ಮ್ಯಾನ್ಮಾರ್ ಮಿಲಿಟರಿಯೊಂದಿಗೆ ಅದಾನಿ ಪೋರ್ಟ್ ವ್ಯಾಪಾರ ಸಂಬಂಧ ಹೊಂದಿರುವುದು ಹೊಸ ವಿಷಯವೇನಲ್ಲ. ಫೆಬ್ರವರಿ ತಿಂಗಳಲ್ಲಿ ಮಿಲಿಟರಿ ಬೆಂಬಲಿತ ಮ್ಯಾನ್ಮಾರ್ ಆರ್ಥಿಕ ನಿಗಮ(ಎಂಇಸಿ)ಕ್ಕೆ 30 ಮಿಲಿಯನ್ ಡಾಲರ್ (ಸುಮಾರು 225 ಕೋಟಿ ರು) ನೀಡಿರುವ ಅದಾನಿ ಸಂಸ್ಥೆ, ಯಾಂಗೊನ್ ಎಂಬಲ್ಲಿ ಬಂದರು ನಿರ್ಮಿಸತೊಡಗಿದೆ.

ಅದಾನಿ ಪೋರ್ಟ್ಸ್ ಕಂಪನಿ ಯಾಂಗೊನ್‌ನಲ್ಲಿ ಬಂದರು ನಿರ್ಮಿಸುತ್ತಿದೆ. ಇದಲ್ಲದೆ, ಈ ಭೂಮಿಯನ್ನು ಮ್ಯಾನ್ಮಾರ್ ಆರ್ಥಿಕ ನಿಗಮದಿಂದ (ಎಂಇಸಿ) ಗುತ್ತಿಗೆಗೆ ನೀಡಲಾಯಿತು. ಈ ಸಂದರ್ಭದಲ್ಲಿ ಮ್ಯಾನ್ಮಾರ್ ಮಿಲಿಟರಿಯೊಂದಿಗೆ ವ್ಯಾಪಾರ ಸಂಬಂಧ ಹೊಂದಿದೆ ಎಂಬ ಅಂಶದ ಬೆಳಕಿನಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅದು ಹೇಳಿದೆ. ಅದಾನಿ ಗ್ರೂಪ್ ಈ ಬಗ್ಗೆ ಇನ್ನೂ ಪ್ರತಿಕ್ರಿಯಿಸಬೇಕಾಗಿಲ್ಲ. ಅದಾನಿ ಬಂದರುಗಳ ವ್ಯಾಪಾರ ವಿಭಾಗವಾದ ಎಂಇಸಿಯಿಂದ ಭೂಮಿಯನ್ನು ಗುತ್ತಿಗೆ ನೀಡುವ ಕುರಿತು ಅದಾನಿ ಗ್ರೂಪ್ ಕಳೆದ ತಿಂಗಳು ಪ್ರತಿಕ್ರಿಯಿಸಿತ್ತು. ಇದು ಒಪ್ಪಂದದ ಪಾಲುದಾರರೊಂದಿಗೆ ಚರ್ಚಿಸಲಿದೆ ಎಂದು ತಿಳಿದುಬಂದಿದೆ.

ಏಪ್ರಿಲ್ 15ರಿಂದ ಜಾರಿಗೆ ಬರುವಂತೆ ಡೌ ಜೋನ್ಸ್ ಸೂಚ್ಯಂಕದಿಂದ ಅದಾನಿ ಪೋರ್ಟ್ಸ್ ಹಾಗೂ ಎಸ್ ಇ ಜಡ್ಜ್ ಲಿಮಿಟೆಡ್ ತೆಗೆದು ಹಾಕಲಾಗುತ್ತದೆ. ಈ ಸುದ್ದಿ ನಿನ್ನೆಯೇ ಬಿಎಸ್‌ಇಯಲ್ಲಿ ತಕ್ಕಮಟ್ಟಿನ ಕಂಪನ ಉಂಟು ಮಾಡಿ ಕಂಪನಿ ಷೇರುಗಳು ಭಾರತದಲ್ಲಿ ಶೇ 4.25ರಷ್ಟು ಕುಸಿಯುವಂತೆ ಮಾಡಿತ್ತು. ಇಂದು ಡಾ. ಅಂಬೇಡ್ಕರ್ ಜಯಂತಿ ನಿಮಿತ್ತ ಷೇರು ಪೇಟೆಗೆ ಬಿಡುವಿದೆ.

ಮ್ಯಾನ್ಮಾರ್‌ನಲ್ಲಿ 2020ರಲ್ಲಿ ನಡೆದಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ಅಕ್ರಮ ನಡೆದಿದ್ದರೂ ಅದನ್ನ ತಡೆಯಲು ಚುನಾವಣಾ ಆಯೋಗ ವಿಫಲವಾಗಿದೆ ಎಂದು ಆರೋಪಿಸಲಾಗಿತ್ತು. ಈ ಕಾರಣಕ್ಕಾಗಿ ಮ್ಯಾನ್ಮಾರ್‌ ಮಿಲಿಟರಿ ತುರ್ತು ಪರಿಸ್ಥಿತಿ ಹೇರಿದೆ. ದೇಶದಲ್ಲಿ ಮಿಲಿಟರಿ 1 ವರ್ಷದವರೆಗೂ ತುರ್ತು ಪರಿಸ್ಥಿತಿ ಘೋಷಿಸಿ ಹಂಗಾಮಿ ಅಧ್ಯಕ್ಷರನ್ನೂ ನೇಮಿಸಿದೆ.

ಮಿಲಿಟರಿ ಆಡಳಿತ ವಿರೋಧಿಸಿದವರ ಮೇಲೆ ಬಲಪ್ರಯೋಗ ಮಾಡಿರುವ ಸೇನೆ, 550ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿರುವ ಆರೋಪವಿದೆ. ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ಮ್ಯಾನ್ಮಾರ್ ಮಿಲಿಟರಿ ಕ್ರಮವನ್ನು ಖಂಡಿಸಿವೆ.


Spread the love

About Laxminews 24x7

Check Also

ನಾವು ರೈತರ ಹಿತಕ್ಕೆ ಬರ ಪರಿಹಾರ ಕೇಳುತ್ತಿದ್ದೇವೆ ಹೊರತು ಭಿಕ್ಷೆಯನ್ನಲ್ಲ :  ಡಿಕೆಶಿ 

Spread the loveನಾವು ರೈತರ ಹಿತಕ್ಕೆ ಬರ ಪರಿಹಾರ ಕೇಳುತ್ತಿದ್ದೇವೆ ಹೊರತು ಭಿಕ್ಷೆಯನ್ನಲ್ಲ :  ಡಿಕೆಶಿ ಬೆಂಗಳೂರು: “ನಾವು ರೈತರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ