Breaking News

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬಡವರ ಕೈಗೆಟುಕದ ಬಂಗಾರ: ತುಟ್ಟಿಯಾದ ಚಿನ್ನ – ಬೆಳ್ಳಿ!

Spread the love

ಮಂಗಳೂರು (ದಕ್ಷಿಣ ಕನ್ನಡ): ಭಾರತದಲ್ಲಿ ಹಬ್ಬಗಳ ಋತು ಚಿನ್ನ ಮತ್ತು ಬೆಳ್ಳಿಯ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯನ್ನು ಸೃಷ್ಟಿಸುವ ಸಮಯವಾಗಿದೆ. 2025ರ ಸೆಪ್ಟೆಂಬರ್ – ಅಕ್ಟೋಬರ್​​ನಲ್ಲಿ ನವರಾತ್ರಿ, ದಸರಾ ಮತ್ತು ದೀಪಾವಳಿಯಂತಹ ಹಬ್ಬಗಳು ಬರುತ್ತಿದ್ದಂತೆ, ಚಿನ್ನದ ದರಗಳು ದಾಖಲೆಯ ಮಟ್ಟಕ್ಕೆ ಏರಿಕೆ ಕಂಡಿವೆ. ಇದು ಹಣತೆಗಳ ಬೆಳಕವನ್ನು ತುಸು ಮಸುಕಾಗುವಂತೆ ಮಾಡಿದೆ. ದೇಶೀಯ ಮಾರುಕಟ್ಟೆಯಲ್ಲಿ 24 ಕ್ಯಾರಟ್ ಚಿನ್ನದ ದರ 10 ಗ್ರಾಂಗೆ ಸುಮಾರು ರೂ. 1,20,600 ಗೆ ತಲುಪಿದ್ದು, ಬೆಳ್ಳಿಯ ದರ ಕೆಜಿಗೆ ರೂ. 1,63,800 ಆಗಿದೆ.

ಚಿನ್ನದ ದರ ಹೆಚ್ಚಳಕ್ಕೆ ಪ್ರಮುಖ ಕಾರಣಗಳು : ಚಿನ್ನದ ದರಗಳ ಏರಿಕೆಯು ದೇಶೀಯ ಹಬ್ಬಗಳಲ್ಲಿ‌ ಬರುವ ಬೇಡಿಕೆಯೊಂದಿಗೆ ಜಾಗತಿಕ ಅಂಶಗಳಿಂದಲೂ ಪ್ರೇರಿತವಾಗಿದೆ. ಭಾರತದಲ್ಲಿ ನವರಾತ್ರಿ ಮತ್ತು ದೀಪಾವಳಿಯಂತಹ ಹಬ್ಬಗಳು ಚಿನ್ನದ ಆಭರಣಗಳ ಖರೀದಿಯನ್ನು ಹೆಚ್ಚಿಸುತ್ತವೆ. ಇದು ಸಾಂಸ್ಕೃತಿಕವಾಗಿ ಶುಭ ಎಂದು ಪರಿಗಣಿಸಲ್ಪಡುತ್ತದೆ. 2025ರಲ್ಲಿ ಈ ಋತುವಿನ ಆರಂಭದೊಂದಿಗೆ ಚಿನ್ನದ ಖರೀದಿ ಹೆಚ್ಚಾಗಿದ್ದು, ಬೆಲೆಗಳನ್ನು ಏರಿಸಿದೆ. ಜಾಗತಿಕವಾಗಿ ಅಸ್ಥಿರತೆಯಂತಹ ಆತಂಕಗಳು ಚಿನ್ನವನ್ನು ಸುರಕ್ಷಿತ ಕಾರಣಕ್ಕೆ ಹೂಡಿಕೆಯಾಗಿ ಮಾಡಿವೆ. ವಿವಿಧ ದೇಶಗಳು ಚಿನ್ನವನ್ನು ರಿಸರ್ವ್ ಆಗಿಡಲು ಖರೀದಿಸುತ್ತಿದ್ದು, ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ.


Spread the love

About Laxminews 24x7

Check Also

: ಪರಿಹಾರ ಹಣಕ್ಕಾಗಿ ಪಂಚ ಗ್ಯಾರಂಟಿ, ಐಪಿ ಸೆಟ್ ಸಹಾಯಧನ ಕಡಿತ?

Spread the loveಬೆಂಗಳೂರು: ಕೃಷ್ಣ ಮೇಲ್ದಂಡೆ ಯೋಜನೆ ಹಂತ-3ರ ಯೋಜನೆಯಡಿಯ ಭೂಸ್ವಾಧೀನ, ಪುನರ್ವಸತಿಗಾಗಿ ಪರಿಹಾರ ದರ ನಿಗದಿ ಮಾಡಿ ರಾಜ್ಯ ಸರ್ಕಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ