ಇಂದು ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಅಂಕಲಿ ರಸ್ತೆಯಲ್ಲಿ ಲೋಕೋಪಯೋಗಿ ಇಲಾಖೆಯ ಅನುದಾನದಡಿ,
ಸುಮಾರು ₹3 ಕೋಟಿ ವೆಚ್ಚದ ರಾಜ್ಯ ಹೆದ್ದಾರಿ–97ರ ಸಂಕೇಶ್ವರ–ಸದಲಗಾ ಮಾರ್ಗದ ಮರುಡಾಂಬರೀಕರಣ ಕಾಮಗಾರಿಗೆ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ಚಾಲನೆ ನೀಡಿದರು
ಅದೇ ರೀತಿ, ಕಮತನೂರ ಗ್ರಾಮದಲ್ಲಿ ಶ್ರೀ ದುರದುಂಡೀಶ್ವರ ಮಠದ ಹತ್ತಿರ ಇರುವ ಹಳ್ಳಕ್ಕೆ ಸ್ಥಳೀಯ ಜನರ ಸುಗಮ ಸಂಚಾರಕ್ಕೆ ಅಂದಾಜು ₹34 ಲಕ್ಷ ವೆಚ್ಚದ ಕಾಲಸುಂಕ ನಿರ್ಮಾಣ ಕಾರ್ಯಕ್ಕೂ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕರಾದ ನಿಖಿಲ್ ಕತ್ತಿ, ಮುಖಂಡರಾದ ಸಂತೋಷ ಮುಡಶಿ ಸೇರಿದಂತೆ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
Laxmi News 24×7