ಪ್ರವೀಣ್ ಭಾಯಿ ತೊಗಾಡಿಯಾ ಕಾರಿಗೆ ಬೆಂಗಾವಲು ವಾಹನ ಡಿಕ್ಕಿ…
ಅಂತರರಾಷ್ಟ್ರೀಯ ಹಿಂದೂ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಪ್ರವೀಣ್ ಭಾಯಿ ತೊಗಾಡಿಯಾ ಪ್ರಯಾಣಿಸುತ್ತಿದ್ದ ವಾಹನಕ್ಕೆ ಮಂಗಳವಾರ ಹುಬ್ಬಳ್ಳಿ-ವಿಜಯಪುರ ರಸ್ತೆಯ ಜಿರಗ್ಯಾಳ ಬೈಪಾಸ್ ಬಳಿ ಬೆಂಗಾವಲಿನ ವಾಹನ ಡಿಕ್ಕಿಹೊಡೆದಿದೆ.
ಬಾಗಲಕೋಟೆಜಿಲ್ಲೆಯ ಮುಧೋಳದಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಜಮಖಂಡಿಯಲ್ಲಿದ್ದ ಕಾರ್ಯಕ್ರಮಕ್ಕೆ ವಾಹನದಲ್ಲಿ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಪ್ರವೀಣ ತೊಗಾಡಿಯಾ ಸೇರಿ ಯಾರಿಗೂ ಗಾಯಗಳಾಗಿಲ್ಲ.
ತೊಗಾಡಿಯಾ ಅವರು ಸಂಚರಿಸುತ್ತಿದ್ದ ವಾಹನದ ವೇಗವನ್ನು ತಗ್ಗಿಸಿದಾಗ ಹಿಂದಿದ್ದ ಬೆಂಗಾವಲು ಬೊಲೆರೋ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೊಲೆರೊದ ಎರಡು ಏರ್ ಬ್ಯಾಗ್ ಓಪನ್ ಆಗಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.