ಉತ್ತರ ಕನ್ನಡ, ಜೂನ್ 29: ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿ (Sirasi-Kumata National Highway) ನಿರ್ಮಾಣ ಕಾಮಗಾರಿ ವಿಳಂಬವಾಗುತ್ತಿರುವುದಕ್ಕೆ ಸಾರ್ವಜನಿಕರೊಬ್ಬರು ಬರೆದ ಪತ್ರಕ್ಕೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಉತ್ತರ ನೀಡಿದ್ದು, ಕಾಮಗಾರಿ 2025ರ ಡಿಸೆಂಬರ್ 31 ರಂದು ಪೂರ್ಣಗೊಳ್ಳಲಿದೆ ಎಂದು ತಿಳಿಸಿದೆ.
ಸಾರ್ವಜನಿಕರೊಬ್ಬರು ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಅವರಿಗೆ ಪತ್ರ ಬರೆದು, ತಮ್ಮ ಕಾರಿನಲ್ಲಿ ಶಿರಸಿ-ಕುಮಟಾ ಪ್ರಯಾಣಿಸಲು ಆಹ್ವಾನ ನೀಡಿದ್ದರು.ಆದರೆ, ಇವರ ಆಹ್ವಾನಕ್ಕೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಪ್ರತಿಕ್ರಿಯೆ ನೀಡಿದ್ದು, “ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳುವ ಹೊಸ ಗಡುವಿನ ದಿನಾಂಕವನ್ನು 2025ರ ಡಿಸೆಂಬರ್ 31 ಅಂತ ನಿರ್ಧರಿಸಲಾಗಿದೆ” ಎಂದು ಉತ್ತರ ನೀಡಲಾಗಿದೆ.
“ನಾನು ಬರೆದ ಪತ್ರಕ್ಕೆ ಮಂತ್ರಿಗಳ ಕಾರ್ಯಾಲಯ ಪ್ರತಿಕ್ರಿಯಿಸದೆ, ರಾಷ್ಟ್ರೀಯ ಹೆದ್ದಾರಿ ಇಲಾಖೆ (PIU-Honnavar) ಉತ್ತರ ನೀಡಿರುವುದು ಏಕೆ ಎಂಬುದು ಪ್ರಶ್ನೆಯಾಗಿದೆ” ಎಂದು ಪ್ರಶ್ನಿಸಿದ್ದಾರೆ.