Breaking News

ಶ್ರೀರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವಕ್ಕೆ ಚಾಲನೆ

ರಾಯಚೂರು: ಮಂತ್ರಾಲಯದಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ ಶ್ರೀ ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವಕ್ಕೆ ಶುಕ್ರವಾರ ಅದ್ಧೂರಿಯಾಗಿ ಚಾಲನೆ ನೀಡಲಾಯಿತು. ಶ್ರೀಮಠದ ಮುಂಭಾಗದಲ್ಲಿ ಸಾಂಪ್ರದಾಯಿಕ ಧ್ವಜಾರೋಹಣ ಸಮಾರಂಭವು ಅಪಾರ ಭಕ್ತಿ ಮತ್ತು ಭವ್ಯತೆಯಿಂದ ನಡೆಯಿತು. ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಯವರು ಗೋ ಪೂಜೆ ಮತ್ತು ಅಶ್ವ ಪೂಜೆ ನೆರವೇರಿಸಿದರು. ನಂತರ ಆರಾಧನಾ ಆಚರಣೆಗಳ ಆರಂಭವನ್ನು ಸೂಚಿಸುವ ವಿಧ್ಯುಕ್ತ ಧ್ವಜಾರೋಹಣವು ವೇದ ಪಠಣ ಹಾಗೂ ಮಂಗಳವಾದ್ಯಗಳೊಂದಿಗೆ ನಡೆಯಿತು. ಈ ಕ್ಷಣಕ್ಕೆ ಅಪಾರ …

Read More »

ಯಲ್ಲಮ್ಮನಗುಡ್ಡದಲ್ಲಿ ಮಳೆರಾಯನ ಆರ್ಭಟ

ಬೆಳಗಾವಿ: ಶುಕ್ರವಾರ ಸಂಜೆ ಸುರಿದ ಧಾರಾಕಾರ ಮಳೆಯಿಂದಾಗಿ ಸವದತ್ತಿ ತಾಲೂಕಿನ ಉಗರಗೋಳ–ಯಲ್ಲಮ್ಮನಗುಡ್ಡ ಮಾರ್ಗದಲ್ಲಿನ ಹಳ್ಳ ಉಕ್ಕಿ ಹರಿದ ಪರಿಣಾಮ ಯಲ್ಲಮ್ಮದೇವಿ ದೇವಸ್ಥಾನಕ್ಕೆ ಜಲದಿಗ್ಬಂಧನವಾಗಿದೆ. ದೇವಿ ದರ್ಶನಕ್ಕೆ ಬಂದಿದ್ದ ಭಕ್ತರು ಪರದಾಡಿದ್ದಾರೆ. ಹೌದು, ಆಗಸ್ಟ್‌ 9ರಂದು ಯಲ್ಲಮ್ಮನಗುಡ್ಡದಲ್ಲಿ ನೂಲು ಹುಣ್ಣಿಮೆ ಹಿನ್ನೆಲೆ ಜಾತ್ರೆ ನಡೆಯಲಿದ್ದು, ದೇವಿ ದರ್ಶನಕ್ಕೆ ಶುಕ್ರವಾರ ಸಂಜೆಯಿಂದಲೇ ಗದಗ, ಕೊಪ್ಪಳ, ಬಾಗಲಕೋಟೆ, ವಿಜಯಪುರ ಸೇರಿ ವಿವಿಧ ಜಿಲ್ಲೆಗಳಿಂದ ಉಗರಗೋಳ ಮಾರ್ಗವಾಗಿ ಗುಡ್ಡಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಿದ್ದರು. ಶುಕ್ರವಾರ ಮಧ್ಯಾಹ್ನ 3 …

Read More »

ಗೋಕಾಕ ಉಗ್ರಾಣದಲ್ಲಿ 98 ಲಕ್ಷ ರೂ ಮೌಲ್ಯದ ಅವಧಿ ಮೀರಿದ ಔಷಧಿ ಪತ್ತೆ: ನ್ಯಾ.ಬಿ.ಎಸ್.ಪಾಟೀಲ

ಬೆಳಗಾವಿ: ಗೋಕಾಕ್​ ಉಗ್ರಾಣದಲ್ಲಿ 98 ಲಕ್ಷ ರೂಪಾಯಿ ಮೌಲ್ಯದ ಔಷಧ ಅವಧಿ ಮೀರಿದೆ. ಜನವರಿಯಿಂದ ಈವರೆಗೆ 6 ಲಕ್ಷ ರೂ. ಮೌಲ್ಯದ ಔಷಧ ಅವಧಿ ಮೀರಿದ್ದು ಕಂಡು ಬಂದಿದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌.ಪಾಟೀಲ ತಿಳಿಸಿದರು. ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಲ್ಲಿಂದ ಐದಾರು ತಾಲೂಕುಗಳ ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಔಷಧ ಸರಬರಾಜು ಆಗುತ್ತದೆ. ಆ ಔಷಧ ಉಪಯೋಗ ಮಾಡಿಲ್ಲ. …

Read More »

ಈ ಬಾರಿಯೂ ಅಂಬಾರಿ ಹೊರಲಿರುವ ಅಭಿಮನ್ಯು: ಆದರೂ ಈ ಆನೆಗಳಿಗೆ ನಡೆಯಲಿದೆ ತಾಲೀಮು

ಮೈಸೂರು: ವಿಶ್ವವಿಖ್ಯಾತ ಜಂಬೂಸವಾರಿ ಮೆರವಣಿಗೆಯಲ್ಲಿ ಗಜಪಡೆಯ ಕ್ಯಾಪ್ಟನ್ ಅಭಿಮನ್ಯುವೇ ಆಗಲಿದ್ದು, ಈ ಬಾರಿಯೂ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗುವ ಚಾಮುಂಡೇಶ್ವರಿ ದೇವಿಯನ್ನು ಹೊತ್ತು ಸಾಗಲಿದ್ದಾನೆ. ಆರನೇ ಬಾರಿ ಅಂಬಾರಿ ಹೊರಲು ಅಭಿಮನ್ಯು ಸನ್ನದ್ಧ: 2025ರ ದಸರಾ ಮಹೋತ್ಸವದ ವಿಜಯ ದಶಮಿಯಲ್ಲಿ ಅಭಿಮನ್ಯು 750 ಕೆ‌.ಜಿ. ತೂಕದ ಚಿನ್ನದ ಅಂಬಾರಿಯನ್ನು ಹೊತ್ತು ಸಾಗಿದರೆ, ಒಟ್ಟು 6 ಬಾರಿ ಅಂಬಾರಿ ಹೊತ್ತಂತಾಗುತ್ತದೆ. ಅಭಿಮನ್ಯುವಿಗೆ ಅಂಬಾರಿ ತಾಲೀಮು ನಡೆಸುವಂತೆ ಉಳಿದ ಆನೆಗಳಾದ ಮಹೇಂದ್ರ, ಧನಂಜಯ, ಏಕಲವ್ಯ, ಪ್ರಶಾಂತ ಆನೆಗಳಿಗೂ …

Read More »

ಬಿಡಾದಿ ದನಗಳನ್ನು ಗೋಶಾಲೆಗೆ ಕಳುಹಿಸಿ…ಶ್ರೀರಾಮಸೇನೆ ಹಿಂದೂಸ್ಥಾನ ಕಮಿಷ್ನರ್’ಗೆ ಮನವಿ

ಬಿಡಾದಿ ದನಗಳನ್ನು ಗೋಶಾಲೆಗೆ ಕಳುಹಿಸಿ…ಶ್ರೀರಾಮಸೇನೆ ಹಿಂದೂಸ್ಥಾನ ಕಮಿಷ್ನರ್’ಗೆ ಮನವಿ ಬೆಳಗಾವಿ ಮಹಾನಗರದಲ್ಲಿ ಹೆಚ್ಚುತ್ತಿರುವ ಬಿಡಾದಿ ದನಗಳನ್ನು ಗೋಶಾಲೆಗೆ ಕಳುಹಿಸಿ ಕೊಡಬೇಕೆಂದು ಆಗ್ರಹಿಸಿ, ಗ್ರಾಮೀಣ ಶ್ರೀರಾಮಸೇನೆ ಹಿಂದೂಸ್ಥಾನ ಆಗ್ರಹಿಸಿದೆ. ಇಂದು ಈ ಕುರಿತಾದ ಮನವಿಯನ್ನು ಗ್ರಾಮೀಣ ಶ್ರೀರಾಮಸೇನೆ ಹಿಂದೂಸ್ಥಾನನ ಪದಾಧಿಕಾರಿಗಳು ನಗರ ಪೊಲೀಸ್ ಆಯುಕ್ತರಾದ ಭೂಷಣ್ ಬೋರಸೆ ಅವರಿಗೆ ನೀಡಿದರು. ಬೀದಿಯಲ್ಲಿ ದನಗಳು ರಸ್ತೆಯ ಮೇಲೆ ಕುಳಿತುಕೊಳ್ಳುತ್ತಿದ್ದು, ಇದರಿಂದಾಗಿ ಒಂದೆಡೇ ಸಂಚಾರ ದಟ್ಟಣೆಯಾದರೇ, ಇನ್ನೊಂದೆಡೇ ದನಕರುಗಳಿಗೆ ವಾಹನಗಳು ಗುದ್ದಿ ಗಾಯಗೊಳ್ಳುವ ಉದಾಹರಣೆಗಳಿವೆ. …

Read More »

ಚಿಕ್ಕೋಡಿಯಲ್ಲಿ ಸರಣಿ ಕಳ್ಳತನ, ಕಾ‌ರ್ ಹಾಗೂ ಮನೆಗಳ್ಳತನ ಮಾಡಿ ಕಳ್ಳರು ಪರಾರಿ

ಚಿಕ್ಕೋಡಿಯಲ್ಲಿ ಸರಣಿ ಕಳ್ಳತನ, ಕಾ‌ರ್ ಹಾಗೂ ಮನೆಗಳ್ಳತನ ಮಾಡಿ ಕಳ್ಳರು ಪರಾರಿ ಚಿಕ್ಕೋಡಿ: ಒಂದು ಮನೆ ಹಾಗೂ ಕಾರ ದರೋಡೆ ಮಾಡಿ ಕಳ್ಳರು ಪರಾರಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಮೆಹಬೂಬ್ ನಗರದಲ್ಲಿ ನಡೆದಿದೆ. ಕಾರ್ ಗಾಜು ಒಡೆದು ಬ್ಯಾಗನಲ್ಲಿದ್ದ 6 ಸಾವಿರ ರೂ ಕಳ್ಳತನ ಮಾಡಲಾಗಿದೆ. ಒಬ್ಬರಿಗೆ ಸೇರಿದ ಕಾರಿನ ಗಾಜು ಒಡೆದು ಕಳ್ಳತನ ಮಾಡಿ ಅಲ್ಲಿಂದ ಸ್ವಲ್ಪ ಅಂತರದಲ್ಲಿದ್ದ ಮನೆಯಲ್ಲಿ ಕಳ್ಳತನ ಮಾಡಿ ಮನೆಯಲ್ಲಿದ್ದ 5 …

Read More »

ರೇಖಾ ಬಡಿಗೇರ್ ಬರೆದಿರುವ ಉಧೋ ಉದೋ ಪುಸ್ತಕ ಲೋಕಾರ್ಪಣೆ

ರೇಖಾ ಬಡಿಗೇರ್ ಬರೆದಿರುವ ಉಧೋ ಉದೋ ಪುಸ್ತಕ ಲೋಕಾರ್ಪಣೆ ಸವದತ್ತಿ:ರಾಯಚೂರಿನ ಕನ್ನಡ ಉಪನ್ಯಾಸಕಿ ಶ್ರೀಮತಿ ರೇಖಾ ಬಡಿಗೇರ್ ಅವರು ಬರೆದಿರುವ ಎಲ್ಲಮ್ಮನ ಜೀವನ ಚರಿತ್ರೆ ಕುರಿತು ಉಧೋ ಉದೋ ಪುಸ್ತಕವನ್ನು ಇಂದು ಎಲ್ಲಮ್ಮನ ದೇವಸ್ಥಾನದ ಸನ್ನಿಧಿಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತರು ಹಾಗೂ ಶ್ರೀ ರೇಣುಕಾ ಎಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ಅಶೋಕ್ ಬಿ ದುಡಗುಂಟಿ ಲೋಕಾರ್ಪಣೆ ಮಾಡಿದರು. ಎಲ್ಲಮ್ಮ ದೇವಸ್ಥಾನದ ಶ್ರೀ ರೇಣುಕಾದೇವಿಯ ಜೀವನ ಚರಿತ್ರೆಯನ್ನು ಬರೆದಿರುವ …

Read More »

ಜಮಖಂಡಿಯಲ್ಲಿ ಚಿರತೆ ಪತ್ತೆ!!! ಗ್ರಾಮಸ್ಥರಲ್ಲಿ ಮೂಡಿದ ಆತಂಕ

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಕೆಡಿ ಜಂಬಗಿ ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆಯ ಓಡಾಟ ಗ್ರಾಮಸ್ಥರಲ್ಲಿ ಆತಂಕವನ್ನು ಸೃಷ್ಠಿಸಿದೆ. ಕಳೆದ ಎರಡು ದಿನಗಳಲ್ಲಿ ಗ್ರಾಮದ ಹಲವೆಡೆ ಮೇಕೆ, ನಾಯಿ ಗಳ ಮೇಲೆ ದಾಳಿ ನಡೆಸಿದ ಈ ಚಿರತೆ, ಕೆಲವನ್ನು ಎಳೆದೊಯ್ದು, ಅರ್ದಂಮರ್ದಾ ತಿಂದ ಘಟನೆಗಳು ಗ್ರಾಮದಲ್ಲಿ ಭಯದ ವಾತಾವರಣವನ್ನು ನಿರ್ಮಿಸಿವೆ. ಬಿರಾದಾರ್ ವಸ್ತಿಯ ತೋಟದ ಸುತ್ತಲಿನ ಭಾಗದಲ್ಲಿ ಮೇಕೆಗಳ ಕಳೆಬರಹಗಳು ಪತ್ತೆಯಾಗಿದ್ದು, ಇದುವರೆಗೆ ನಾಲ್ಕು ಮೇಕೆಗಳ ಮೇಲೆ ದಾಳಿ …

Read More »

ಕಾಲು ಜಾರಿ ಬಾವಿಗೆ ಬಿದ್ದು ಯುವಕನ ಸಾವು…!!!

ಕಾಲು ಜಾರಿ ಬಾವಿಗೆ ಬಿದ್ದು ಯುವಕನ ಸಾವು…!!! ಕಾಲು ಜಾರಿ ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಖಾನಾಪೂರಾ ತಾಲೂಕಿನ ಇದ್ದಲಹೊಂಡ ಗ್ರಾಮದಲ್ಲಿ ನಡೆದಿದೆ. ಖಾನಾಪೂರ ತಾಲೂಕಿನ ಇದ್ದಲಹೊಂಡ ಗ್ರಾಮದಲ್ಲಿ ದಿಗ್ವಿಜಯ ಮನೋಹರ್ ಜಾಧವ (36) ಎಂಬ ಯುವಕ ತನ್ನ ಹೊಲದ ಬಾವಿಯಲ್ಲಿ ಕಾಲುಜಾರಿ ಬಿದ್ದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ನಡೆದಿದೆ ನಿನ್ನೆ ಬೆಳಿಗ್ಗೆ ದಿಗ್ವಿಜಯ “ಹೊಲದ ಕಡೆಗೆ ಹೋಗುತ್ತೇನೆ” ಎಂದು ಹೇಳಿ ಮನೆಯಿಂದ ಹೊರಟಿದ್ದ. ಆದರೆ ಬಹಳ …

Read More »

ಗಣೇಶೋತ್ಸವ ಸಂಭ್ರಮ ವೇಳೆ ಸುಪ್ರೀಂಕೋರ್ಟ್ ಆದೇಶ ಪಾಲಿಸಬೇಕು, ಇಲ್ಲವಾದಲ್ಲಿ ಕಾನೂನು ಕ್ರಮ- ಎನ್ ಶಶಿಕುಮಾರ್.

ಗಣೇಶೋತ್ಸವ ಸಂಭ್ರಮ ವೇಳೆ ಸುಪ್ರೀಂಕೋರ್ಟ್ ಆದೇಶ ಪಾಲಿಸಬೇಕು, ಇಲ್ಲವಾದಲ್ಲಿ ಕಾನೂನು ಕ್ರಮ- ಎನ್ ಶಶಿಕುಮಾರ್. ಇನ್ನೇನು ಕೆಲವೇ ದಿನಗಳಲ್ಲಿ ಗಣೇಶೋತ್ಸವ ಬರಲಿದ್ದು, ಈ ವೇಳೆ ಗಣೇಶೋತ್ಸವದ ಸಂಭ್ರಮದ ವೇಳೆ ಡಿಜೆ ಸಿಸ್ಟಮ್ ಸೇರಿ ಎಲ್ಲ ವಿಚಾರದಲ್ಲೂ ಸುಪ್ರೀಂ ಕೋರ್ಟ್ ಆದೇಶ ಎಲ್ಲರು ಪಾಲಿಸಬೇಕು, ಇಲ್ಲಾವಾದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹು-ಧಾ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ ಖಡಕ್ ಎಚ್ಚರಿಕೆ ನೀಡಿದ್ದಾರೆ. ಈ ವಿಚಾರವಾಗಿ ಧಾರವಾಡದಲ್ಲಿ ಮಾತನಾಡಿದ ಅವರು, ಯಾವುದೇ …

Read More »