ಬೆಂಗಳೂರು(ಡಿ.24): ರಾಜ್ಯದಲ್ಲಿ ಇಂದಿನಿಂದ ಜನವರಿ 2ರವರೆಗೆ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆ ಹಿನ್ನೆಲೆ, ಕೊರೋನಾ ನಿಯಂತ್ರಣಕ್ಕಾಗಿ ಸರ್ಕಾರ ಈ ಕ್ರಮ ಕೈಗೊಂಡಿದೆ. ಹೊಸ ವರ್ಷಾಚರಣೆ ವೇಳೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೊಲೀಸ್ ಬಿಗಿ ಭದ್ರತೆ ಹೇಗಿರುತ್ತೆ ಎಂಬುದರ ಬಗ್ಗೆ ಪೊಲೀಸ್ ಕಮೀಷನರ್ ಕಮಲ್ ಪಂಥ್ ಮಾಹಿತಿ ನೀಡಿದ್ದಾರೆ. ಬೆಂಗಳೂರಿನಲ್ಲಿ ಇಂದಿನಿಂದ ಜನವರಿ 2 ರ ವರೆಗೆ ರಾತ್ರಿ 11 ರಿಂದ ಬೆಳಗ್ಗೆ 5 ಗಂಟೆವರೆಗೆ ಕರ್ಪ್ಯೂ ಇರುತ್ತೆ. ರಾತ್ರಿ ಪಾಳಿಯಲ್ಲಿ ಯಾರಿರುತ್ತಾರೋ ಅವರು ಕೋವಿಡ್ ಪ್ರೋಟೋಕಾಲ್ ಅನುಸರಿಸಬೇಕು. ಕೆಲಸ ಮಾಡುವವರ ಬಳಿ ಐಡಿ ಕಾರ್ಡ್ ಕಡ್ಡಾಯವಾಗಿರಬೇಕೆಂದು ಹೇಳಿದರು.
ಇನ್ನು, ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಯಾವುದೇ ನಿಬಂಧನೆಗಳು ಇಲ್ಲ. ಟ್ಯಾಕ್ಸಿ ವ್ಯವಸ್ಥೆ ಇರುತ್ತೆ. ಸ್ಥಳೀಯ ಪೊಲೀಸರು ನಾಕಾಬಂಧಿ ಹಾಕಲಿದ್ದು, ಪರಿಶೀಲನೆ ನಡೆಸುತ್ತಾರೆ. ಕ್ರಿಸ್ ಮಸ್ ಗೆ ವಿನಾಯಿತಿ ಇರಲಿದೆ. ಬೆಂಗಳೂರಿನ ಜನರಲ್ಲಿ ಮನವಿ ಮಾಡ್ತೀವಿ ಎಲ್ಲರೂ ಸಹಕರಿಸಬೇಕು. ಯಾರೂ ರಾತ್ರಿ 11 ಗಂಟೆ ಮೇಲೆ ಹೊರ ಬರುವಂತಿಲ್ಲ. ತಪಾಸಣೆ ಇರುತ್ತೆ, ಬ್ಯಾರಿಕೇಡ್ ಇರುತ್ತೆ. ರಾತ್ರಿ ಚಟುಚಟಿಕೆಗಳಿಗೆಅವಕಾಶ ಇರಲ್ಲ ಎಂದು ತಿಳಿಸಿದರು.
ಫ್ಲೈ ಓವರ್ಸ್ ಕ್ಲೋಸ್ ಮಾಡ್ತೀವಿ, ಎಲ್ಲೆಲ್ಲಿ ಓಡಾಟ ಹೆಚ್ಚಿರುತ್ತೆ ಅಲ್ಲಿ ನಾಕಾಬಂಧಿ ಹಾಕ್ತೀವಿ. ಇಡೀ ಸಿಟಿ ಸುತ್ತಾಡಿ ಅನಾವಶ್ಯಕವಾಗಿ ಓಡಾಡುವರಿಗೆ ಬಿಸಿ ಮುಟ್ಟಿಸುತ್ತೇವೆ. ಹೊಸ ವರ್ಷ ಆಚರಣೆ ಬಗ್ಗೆ ಸರ್ಕಾರದ ಆದೇಶ ಈಗಾಗಲೇ ಬಂದಿದೆ. ಈಗ ಏನೇ ಇರಲಿ 11 ಗಂಟೆ ಮೇಲೆ ಜನರು ಹೊಸ ವರ್ಷಾಚರಣೆಗೆ ಎಲ್ಲಿಯೂ ಸೇರುವಂತಿಲ್ಲ. 11 ಗಂಟೆ ಆದಮೇಲೆ ಯಾವ ಚಟುವಟಿಕೆಗೂ ಅವಕಾಶ ಇಲ್ಲ. ಏನೇ ಶಿಫ್ಟ್ ಸಮಸ್ಯೆ ಇದ್ರೂ ಬಗೆಹರಿಸಿಕೊಳ್ಳಬೇಕು. ರಾತ್ರಿ 10.30 ಕ್ಕೆ ಕ್ಲೋಸ್ ಮಾಡಿಕೊಂಡು ಹೋಗಲು ಕೆಲವರು ಸಿದ್ದತೆ ಮಾಡಿಕೊಂಡಿದ್ದಾರೆ ಎಂದು ಹೇಳಿದರು.
Laxmi News 24×7