Breaking News

ಆಗಸ್ಟ್​ 3ರವರೆಗೆ ಅಮರನಾಥ ಯಾತ್ರೆ ಸ್ಥಗಿತ

Spread the love

ಜಮ್ಮು: ಭಾರಿ ಮಳೆಯಿಂದ ಸಂಚಾರಕ್ಕೆ ಅಡಚಣೆಯಾಗಿದ್ದು, ತುರ್ತು ದುರಸ್ತಿ ಮತ್ತು ನಿರ್ವಹಣೆ ಅಗತ್ಯವಿರುವ ಹಿನ್ನೆಲೆಯಲ್ಲಿ ಆಗಸ್ಟ್​ 3ರವರೆಗೆ ಪವಿತ್ರ ಅಮರನಾಥ ಯಾತ್ರೆಯನ್ನು ಎರಡೂ ಮಾರ್ಗದಲ್ಲೂ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶುಕ್ರವಾರ ಪಹಲ್ಗಾಮ್​ ಮಾರ್ಗದಿಂದ ಯಾವುದೇ ಹೊಸ ಯಾತ್ರಿಕರ ತಂಡ ಪ್ರಯಾಣ ಕೈಗೊಂಡಿಲ್ಲ. ಆದರೆ, ಬಾಲ್ಟಾಲ್​ ಮಾರ್ಗವಾಗಿ ಗುಹಾಂತರ ದೇಗುಲಕ್ಕೆ ಯಾತ್ರಿಕರು ತೆರಳಿದ್ದಾರೆ. ಬಳಿಕ ಭಾರಿ ಮಳೆಯಿಂದಾಗಿ ಬಲ್ಟಾಲಾ ಮಾರ್ಗದಲ್ಲೂ ಯಾತ್ರೆಯನ್ನು ಸ್ಥಗಿತಗೊಳಿಸಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಕಳೆದೆರಡು ದಿನದಿಂದ ಧಾರಾಕಾರ ಮಳೆಯಿಂದಾಗಿ ಭಗವತಿ ನಗರ್​ ಬೇಸ್​ ಕ್ಯಾಂಪ್​ನಲ್ಲಿ ಯಾತ್ರೆಯನ್ನು ಮೊಟಕುಗೊಳಿಸಲಾಗಿದೆ. ಇದೀಗ ಮತ್ತೆರಡು ದಿನಗಳ ಕಾಲ ಯಾತ್ರೆ ನಿಲ್ಲಿಸಲಾಗಿದ್ದು, ಈ ಕುರಿತು ಮಾಹಿತಿ ನೀಡಿದ ಕಾಶ್ಮೀರ ವಲಯದ ಆಯುಕ್ತ ವಿಜಯ್​ ಕುಮಾರ್​ ಬಿಧುರಿ ಅವರು, ಮಳೆಯಿಂದಾಗಿ ಅಮರನಾಥ ಯಾತ್ರೆ ಸಾಗುವ ಬಾಲ್ಟಾಲ್​ ಮಾರ್ಗದಲ್ಲಿ ದುರಸ್ತಿ ಮತ್ತು ನಿರ್ವಹಣೆ ಕೆಲಸ ನಡೆಯಬೇಕಿದೆ. ಯಾತ್ರಿಕರ ಭದ್ರತಾ ಹಿತಾಸಕ್ತಿಗಾಗಿ ಬಾಲ್ಟಾಲ್​ ಮಾರ್ಗದಲ್ಲಿ ಆಗಸ್ಟ್​ 3ರವರೆಗೆ ಯಾವುದೇ ಯಾತ್ರೆ ಸಾಗುವುದಿಲ್ಲ. ಈ ಕುರಿತು ಮತ್ತಷ್ಟು ಮಾಹಿತಿ ನೀಡಲಾಗುವುದು ಎಂದರು.

ಮಳೆಯಿಂದಾಗಿ ರಸ್ತೆಗಳು ಅಸುರಕ್ಷಿತವಾಗಿದ್ದು, ಬುಧವಾರವೂ ಕೂಡ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು. ಈಗಾಗಲೇ ಪಹಲ್ಗಾಮ್​ ಮಾರ್ಗದಲ್ಲಿ ದುರಸ್ತಿ ಮತ್ತು ನಿರ್ವಹಣಾ ಕಾರ್ಯ ಸಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಇದಕ್ಕೆ ಮುನ್ನ, ಜುಲೈ 17ರಂದು ಕೂಡ ಮಳೆಯಿಂದಾಗಿ ಯಾತ್ರೆಯನ್ನು ಒಂದು ದಿನದ ಮಟ್ಟಿಗೆ ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು.


Spread the love

About Laxminews 24x7

Check Also

ಮಿರಜ್‌ನಲ್ಲಿ 1 ಕೋಟಿ ರೂಪಾಯಿ ಮೌಲ್ಯದ ನಕಲಿ ನೋಟುಗಳ ಜಪ್ತಿ

Spread the love ಚಿಕ್ಕೋಡಿ:ಮಹಾರಾಷ್ಟ್ರ- ಕರ್ನಾಟಕ ಗಡಿ ಭಾಗದಲ್ಲಿ ಇತ್ತಿಚಿಗೆ ವಿಶೇಷ ಕಾರ್ಯಾಚರಣೆ ನಡೆಸಿದ ಮಹಾರಾಷ್ಟ್ರ ಪೊಲೀಸರು, ಬರೋಬ್ಬರಿ 1 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ