Breaking News

Daily Archives: ಜೂನ್ 23, 2022

ಪ್ರತ್ಯೇಕ ರಾಜ್ಯ ವಿಚಾರವಾಗಿ ಗೋವಿಂದ ಕಾರಜೋಳ ಬೆಳಗಾವಿಯಲ್ಲಿ ಹೇಳಿದ್ದೇನು..?

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಸಚಿವ ಉಮೇಶ ಕತ್ತಿ ಅವರ ಹೇಳಿಕೆ ಅದು ವೈಯಕ್ತಿಕವಾದದ್ದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ್ ಕಾರಜೋಳ ಹೇಳಿದರು. ಗುರುವಾರ ನಗರದಲ್ಲಿ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಲೋಕಸಭಾ ಚುನಾವಣೆಯ ಬಳಿಕ ದೇಶದಲ್ಲಿ 50 ರಾಜ್ಯಗಳನ್ನು ಮೋದಿ ಮಾಡಲಿದ್ದಾರೆ. ಇದರಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗುತ್ತದೆ. ಇದು ಚಿಂತನೆ ನಡೆಯುತ್ತಿದೆ ಎಂದು ಉಮೇಶ ಕತ್ತಿ ಹೇಳಿಕೆ ವೈಯಕ್ತಿಕ. ಇಂಥ ಚಿಂತನೆಗಳು ನಡೆದಿಲ್ಲ ಎಂದರು.

Read More »

ಪ್ರತ್ಯೇಕ ರಾಜ್ಯ ವಿಚಾರವಾಗಿ ನೀವು ಕತ್ತಿಯವರನ್ನೇ ಕೇಳಬೇಕು.: ಬಸವರಾಜ್ ಬೊಮ್ಮಾಯಿ

ಉಮೇಶ್ ಕತ್ತಿ ಹೇಳಿಕೆ ಕುರಿತಂತೆ ದೆಹಲಿಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಪ್ರತ್ಯೇಕ ರಾಜ್ಯ ವಿಚಾರವಾಗಿ ನೀವು ಕತ್ತಿಯವರನ್ನೇ ಕೇಳಬೇಕು. ಅವರು ಹೀಗೆ ಹೇಳುತ್ತಿರುವುದು ಹೊಸದೇನೂ ಅಲ್ಲ ಎಂದಿದ್ದಾರೆ. ರಾಷ್ಟ್ರಪತಿ ಚುನಾವಣೆಗೆ ನಾಳೆ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ದೆಹಲಿಗೆ ತೆರಳಿರುವ ಸಿಎಂ ಮಾಧ್ಯಮಗಳೊಂದಿಗೆ ಮಾತನಾಡಿದರು. ಸಚಿವ ಉಮೇಶ್ ಕತ್ತಿರವರ ಹೇಳಿಕೆಯನ್ನು ಅವರನ್ನೇ ಕೇಳಬೇಕು. ಇದನ್ನು ಅವರು ಸುಮಾರು ೧೦ ಹಲವಾರು ಬಾರಿ ಹೇಳಿಕೆ ನೀಡಿದ್ದಾರೆ. ಇನ್ನು ಸರಕಾರದ ಮಟ್ಟದಲ್ಲಿ …

Read More »

ಹದಗೆಟ್ಟ ರಸ್ತೆಗಳನ್ನು ನಿರ್ಮಿಸಿಕೊಟ್ಟು ಸಾರ್ವಜನಿಕ ಸಂಚಾರಕ್ಕೆ ಅನುವು ಮಾಡಿಕೊಡುತ್ತಿರುವ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ : ಹದಗೆಟ್ಟ ರಸ್ತೆಗಳನ್ನು ನಿರ್ಮಿಸಿಕೊಟ್ಟು ಸಾರ್ವಜನಿಕ ಸಂಚಾರಕ್ಕೆ ಅನುವು ಮಾಡಿಕೊಡುತ್ತಿರುವ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಕಾರ್ಯ ಶ್ಲಾಘನೀಯವಾದದ್ದು ಎಂದು ಯಾದವಾಡ ಜಿಪಂ ಮಾಜಿ ಸದಸ್ಯ ರಂಗಪ್ಪ ಇಟ್ಟನ್ನವರ ತಿಳಿಸಿದರು.   ತಾಲೂಕಿನ ಯಾದವಾಡದಲ್ಲಿ ಇತ್ತೀಚೆಗೆ ಜರುಗಿದ ಗುಲಗಂಜಿಕೊಪ್ಪ-ಯಾದವಾಡ ರಸ್ತೆ ಕಾಮಗಾರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯಾದವಾಡ-ಗುಲಗಂಜಿಕೊಪ್ಪ ರಸ್ತೆಯ ಅಭಿವೃದ್ಧಿಗೆ 3 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ. ಅವರಿಗೆ ಸಮಸ್ತ ಸಾರ್ವಜನಿಕರ ಪರವಾಗಿ ಕೃತಜ್ಞತೆ …

Read More »

ಚಿತ್ರರಂಗಕ್ಕೆ ಪೈರಸಿ ದೊಡ್ಡ ಪಿಡುಗು : ಶೀತಲ್ ಶೆಟ್ಟಿ

ಪೈರಸಿ ಎಂಬುದು ಚಿತ್ರರಂಗಕ್ಕೆ ಪಿಡುಗು ಆಗಿದ್ದು ಇಡೀ ಚಿತ್ರರಂಗವೇ ಇದರ ವಿರುದ್ಧ ಹೋರಾಟ ಮಾಡುವ ಅವಶ್ಯಕತೆ ಇದೆ ಎಂದು ಯುವ ನಿರ್ದೇಶಕಿ ಶೀತಲ್ ಶೆಟ್ಟಿ ಹೇಳಿದರು. ನಗರದಲ್ಲಿ ಇಂದು ಮಾದ್ಯಮ ವರದಿಗಾರರೊಂದಿಗೆ ಮಾತನಾಡಿದ ಅವರು ಒಂದು ಸಿನಿಮಾಗೆ ಪೈರಸಿಯಾಗುತ್ತಿದ್ದಾಗ ಯಾರದ್ದೋ ಸಿನಿಮಾ ಎನ್ನದೆ ಎಲ್ಲರೂ ಇದು ನಮ್ಮ ಕನ್ನಡ ಸಿನಿಮಾ ನಮ್ಮ ಚಿತ್ರರಂಗಕ್ಕೆ ಸಂಬಂಧಿಸಿದ್ದು ಎಂದು ಎಲ್ಲರೂ ಒಗ್ಗಟ್ಟಾಗಿ ಪೈರಸಿ ವಿರುದ್ಧ ಹೋರಾಟ ಮಾಡಬೇಕು ಎಂದರು ಪೈರಸಿ ಸಿನಿಮಾಗಳ ಲಿಂಕ್ …

Read More »

ಜಮೀನಿನಲ್ಲಿ ಮರಾಠಾ ಸಮಾಜದವರು ಬಂದು ಬೆಳೆಹಾನಿ ಮಾಡುತ್ತಿದ್ದಾರೆ: ನ್ಯಾಯಕ್ಕಾಗಿ ಕಮಿಶನರ್ ಮೊರೆಹೋದ ದಲಿತರು

ಬೆಳಗಾವಿ ತಾಲೂಕಿನ ಬೆಳಗುಂದಿ ಗ್ರಾಮದಲ್ಲಿ ಪರಿಶಿಷ್ಠ ಜಾತಿಗೆ ಸೇರಿದವರಿಗೆ ಸೇರಿದ ಜಮೀನಿನಲ್ಲಿ ಮರಾಠಾ ಸಮಾಜದವರು ಬಂದು ಬೆಳೆಹಾನಿ ಮಾಡುತ್ತಿದ್ದಾರೆ. ಈ ಕುರಿತು ನ್ಯಾಯಾಲಯದಲ್ಲಿ ವ್ಯಾಜ್ಯವಿದ್ದು ತಮಗೆ ನ್ಯಾಯ ಕೊಡಿಸಬೇಕೆಂದು ದಲಿತ ಸಂಘರ್ಷ ಸಮಿತಿಯ ಭೀಮವಾದ ಸಂಘಟನೆ ವತಿಯಿಂದ ಬೆಳಗಾವಿ ಎಸ್‍ಪಿ ಹಾಗೂ ಕಮಿಶನರ್‍ರವರಿಗೆ ಮನವಿಯನ್ನು ಸಲ್ಲಿಸಲಾಯಿತು. ಬೆಳಗಾವಿ ತಾಲೂಕಿನ ಬೆಳಗುಂದಿ ಗ್ರಾಮದಲ್ಲಿ ದಲಿತ ಸಮುದಾಯದವರಿಗೆ ಸೇರಿದ 300/285 ರಿಜಿಸ್ಟರ್ ಸರ್ವೆ ನಂಬರ್‍ನಲ್ಲಿ ಒಟ್ಟು 25 ಎಕರೆ ಜಮೀನಿದೆ. ಇದನ್ನು ನಮ್ಮ …

Read More »

ಅಯೋಧ್ಯೆಯ ನದಿಯಲ್ಲಿ ಸ್ನಾನ ಮಾಡ್ತಿದ್ದಾಗ ದಂಪತಿ ಕಿಸ್ಸಿಂಗ್;

ಅಯೋಧ್ಯೆಯಲ್ಲಿ ಗಂಡ-ಹೆಂಡತಿ ಸ್ನಾನ ಮಾಡುವ ವೇಳೆ ಕಿಸ್ ಮಾಡಿಕೊಂಡಿದ್ಕೆ ಕೋಪಿತಗೊಂಡ ಜನಸಮೂಹ, ವ್ಯಕ್ತಿಗೆ ಹಲ್ಲೆ ಮಾಡಿದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ವಿಡಿಯೋದಲ್ಲಿ ಏನಿದೆ..? ಸರಯೂ ನದಿಯಲ್ಲಿ ಸಾರ್ವಜನಿಕರ ಮಧ್ಯೆ ದಂಪತಿಯೊಂದು ಸ್ನಾನ ಮಾಡುತ್ತ ಇರುತ್ತದೆ. ಈ ವೇಳೆ ತನ್ನ ಪತಿಗೆ ಮಹಿಳೆ ಕಿಸ್ ಮಾಡುತ್ತಾಳೆ. ಇದನ್ನ ಗಮನಿಸಿದ ಅಲ್ಲಿದ್ದವರೊಬ್ಬರು, ಆ ವ್ಯಕ್ತಿ ಕೈಹಿಡಿದು ಎಳೆದು ಹೊಡೆಯುತ್ತಾರೆ. ನಂತರ ನದಿಯಿಂದ ಮೇಲಕ್ಕೆ ಕರೆದುಕೊಂಡು ಬಂದು ಎಲ್ಲರೂ …

Read More »

ದಿಢೀರ್ ಅಂತಾ ಕಾಂಗ್ರೆಸ್ ನಾಯಕರ ಬಗ್ಗೆ ಕುಮಾರಸ್ವಾಮಿ ಸಾಫ್ಟ್ ಕಾರ್ನರ್

ಕಾಂಗ್ರೆಸ್ ನಾಯಕರ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಆಗಾಗ ಕಿಡಿಕಾರುತ್ತಲೇ ಇರ್ತಾರೆ. ಅದರಲ್ಲೂ ಮೊನ್ನ ನಡೆದ ರಾಜ್ಯಸಭೆ ಚುನಾವಣೆ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ರು. ಆದ್ರೀಗ ಕುಮಾರಸ್ವಾಮಿ ತಮ್ಮ ವರಸೆಯನ್ನ ಕೊಂಚ ಬದಲಿಸಿದಂತೆ ಕಾಣ್ತಿದೆ. ದಿಢೀರ್ ಅಂತಾ ಕಾಂಗ್ರೆಸ್ ನಾಯಕರ ಬಗ್ಗೆ ಕುಮಾರಸ್ವಾಮಿ ಸಾಫ್ಟ್ ಕಾರ್ನರ್ ತೋರಿಸಿದ್ದಾರೆ. ಕಾಂಗ್ರೆಸ್ ನಾಯಕರ ಬಗ್ಗೆ ಹೆಚ್‌ಡಿಕೆ ಸಾಫ್ಟ್ ಕಾರ್ನರ್! ಕಾಂಗ್ರೆಸ್ ಬಗ್ಗೆ ದಳಪತಿ ಸಾಫ್ಟ್ ಆಗಿದ್ದಾರೆ ಅನ್ನೋಕು …

Read More »

ಬಸವಕಲ್ಯಾಣದಲ್ಲಿ ಮಟಕಾ ಬರೆದುಕೊಳ್ಳುತಿದ್ದ ದಂಪತಿಗೆ 4 ತಿಂಗಳ ಸಾದಾ ಶಿಕ್ಷೆ, ಬಸ್ ನಿಲ್ದಾಣದಲ್ಲಿ ವೃದ್ದೆಯ ಚಿನ್ನದ ಸರ ಕಳ್ಳತನ

ಕೊಪ್ಪಳ: ಕೊಪ್ಪಳ ಜಿಲ್ಲೆ ಗಂಗಾವತಿ ಬಸ್ ನಿಲ್ದಾಣದಲ್ಲಿ ಹಾಡುಹಗಲೆ ವೃದ್ದೆಯೊಬ್ಬರ ಕೊರಳಿಂದ ಮೂರು ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ಕದ್ದು ಕಳ್ಳರು ಪರಾರಿಯಾಗಿದ್ದಾರೆ. ಗಂಗಾವತಿ ತಾಲೂಕಿನ ಬಾಪಿರೆಡ್ಡಿ ಕ್ಯಾಂಪ್ ನಿವಾಸಿ ಕನಕರತ್ನ ಎಂಬ ವೃದ್ದೆ ಚಿನ್ನದ ಸರ ಕಳೆದುಕೊಂಡವರು. ಅದು ಸುಮಾರು ಮೂರು ಲಕ್ಷ ಮೌಲ್ಯದ ಚಿನ್ನದ ಸರವಾಗಿದೆ. ಗಂಗಾವತಿ ಇಂದ ಬಾಪಿರೆಡ್ಡಿ ಕ್ಯಾಂಪ್ ಗೆ ಹೊರಟಿದ್ದಾಗ, ಬಸ್ ನಿಲ್ದಾಣದಲ್ಲಿ ಕನಕರತ್ನ ಅವರ ಚಿನ್ನದ ಸರವನ್ನು ಕಳ್ಳರು ಎಗುರಿಸಿದ್ದಾರೆ. ಗಂಗಾವತಿ …

Read More »

ಮೃತ ಸತೀಶ್ ಪಾಟೀಲ್ ಮನೆಗೆ ಸತೀಶ್ ಜಾರಕಿಹೊಳಿ ಭೇಟಿ

ಬೆಳಗಾವಿ: ಗೌಂಡವಾಡ ಗ್ರಾಮದಲ್ಲಿ ಗುಂಪು ಘರ್ಷಣೆ ವೇಳೆ ಸತೀಶ್ ಪಾಟೀಲ್(Satish Patil)ಹತ್ಯೆ ಪ್ರಕರಣ ಹಿನ್ನೆಲೆ ಕೊಲೆಯಾದ ಸತೀಶ್ ಪಾಟೀಲ್ ಮನೆಗೆ ಸ್ಥಳೀಯ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಭೇಟಿ ನೀಡಿ, ಸತೀಶ್ ಪತ್ನಿ, ತಾಯಿಗೆ ಸಾಂತ್ವನ ಹೇಳಿದರು. ಕುಟುಂಬಸ್ಥರ ಭೇಟಿ ಬಳಿಕ ಗ್ರಾಮದ ಮಹಿಳೆಯರ ಅಹವಾಲು ಆಲಿಸಿದ ಸತೀಶ್, ಕೊಲೆ ಆರೋಪಿಗಳಿಗೆ ಶಿಕ್ಷೆ ನೀಡಿಸುವಂತೆ ಮನವಿ ಮಾಡಿದರು. ಗ್ರಾಮದಲ್ಲಿ ಕೊಲೆ ಆರೋಪಿಗಳ ದಬ್ಬಾಳಿಕೆ ಬಗ್ಗೆಯೂ ಮಹಿಳೆಯರು ಹೇಳಿದ್ದು, ಕೋರ್ಟ್ …

Read More »

ಶಿವಸೇನೆಯ 42ಶಾಸಕರು ಗುವಾಹತಿ ತಲುಪಿದ್ದು, ಏಕನಾಥ ಶಿಂಧೆ ಪಾಳಯ ಸೇರಿದ್ದಾರೆ.

ಮುಂಬೈ: ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್​ಸಿಪಿ ಮತ್ತು ಕಾಂಗ್ರೆಸ್​ ಮೈತ್ರಿಯ ಮಹಾ ವಿಕಾಸ್ ಅಘಾಡಿ (Maha Vikas Aghadi – MVA) ಸರ್ಕಾರದ ಪತನ ಬಹುತೇಕ ಸನ್ನಿಹಿತವಾಗಿದೆ. ಶಿವಸೇನೆಯ 42 ಶಾಸಕರು ಏಕನಾಥ ಶಿಂಧೆ (Eknath Shinde) ನೇತೃತ್ವದ ಬಂಡುಕೋರರ ಬಣಕ್ಕೆ ನಿಷ್ಠೆ ವ್ಯಕ್ತಪಡಿಸಿದ್ದು, ಮುಖ್ಯಮಂತ್ರಿ ಉದ್ದವ್ ಠಾಕ್ರೆ (CM Uddhav Thackeray) ಬೆಂಬಲಕ್ಕೆ ನಿಂತ ಶಾಸಕರ ಸಂಖ್ಯೆ ಕೇವಲ‌ 13ಕ್ಕೆ ಇಳಿದಿದೆ. ಶಿವಸೇನೆಯ ಮತ್ತಷ್ಟು ಶಾಸಕರು ಗುವಾಹತಿ ತಲುಪಿದ್ದು, ಏಕನಾಥ ಶಿಂಧೆ …

Read More »