ಬೆಳಗಾವಿ(ಜ.9): ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಇಂದು ಬಿಜೆಪಿ ಶಾಸಕ ಅಭಯ ಪಾಟೀಲ್ ಎಂಇಎಸ್ ಮಾಜಿ ಮೇಯರ್ ಮಧ್ಯೆ ವಾಗ್ವಾದ ನಡೆಯಿತು. ಎಂಇಎಸ್ ಮಾಜಿ ಮೇಯರ್ ಸುಳ್ಳು ಆರೋಪಕ್ಕೆ ಶಾಸಕ ಅಭಯ ಪಾಟೀಲ್ ಫುಲ್ ಗರ್ಂ ಆದರು. ಬೆಳಗಾವಿ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಸಮ್ಮುಖದಲ್ಲಿ ವಾಗ್ವಾದ ನಡೆಯಿತು. ಸ್ಮಾರ್ಟ್ ಸಿಟಿ ಕಾಮಗಾರಿ ಸರಿಯಾಗಿಲ್ಲ ಎಂದು ಮಾಜಿ ಎಂಇಎಸ್ ಮೇಯರ್ ನಾಗೇಶ ಸಾತೇರಿ ಸಚಿವರ ಮುಂದೆ ಆರೋಪ …
Read More »ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ 2020ರ ಜನೆವರಿ 10ರಂದು ಅಧಿಕಾರ ವಹಿಸಿಕೊಂಡ ಘೂಳಪ್ಪ ಹೊಸಮನಿ ಮತ್ತು ಆಯುಕ್ತರಾಗಿ ಕೆಲಸ ನಿರ್ವಹಿಸುತ್ತಿರುವ ಕ್ರಿಯಾಶೀಲ ಅಧಿಕಾರಿ ಪ್ರೀತಂ ನಸ್ಲಾಪುರೆ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಹೊಸ ಸ್ಪರ್ಷ ನೀಡಿದ್ದಾರೆ.
ಬೆಳಗಾವಿ : ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ 2020ರ ಜನೆವರಿ 10ರಂದು ಅಧಿಕಾರ ವಹಿಸಿಕೊಂಡ ಘೂಳಪ್ಪ ಹೊಸಮನಿ ಮತ್ತು ಆಯುಕ್ತರಾಗಿ ಕೆಲಸ ನಿರ್ವಹಿಸುತ್ತಿರುವ ಕ್ರಿಯಾಶೀಲ ಅಧಿಕಾರಿ ಪ್ರೀತಂ ನಸ್ಲಾಪುರೆ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಹೊಸ ಸ್ಪರ್ಷ ನೀಡಿದ್ದಾರೆ. ನಗರಾಭಿವೃದ್ಧಿ ಪ್ರಾಧಿಕಾರದ ಅವಶ್ಯಕತೆ ಏನು? ಕೇವಲ ಸಿಬ್ಬಂದಿಗೆ ವೇತನ ನೀಡುವುದಷ್ಟೇ ಇದರ ಕೆಲಸವೇನೋ ಎನ್ನುವ ಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ ಈ ಇಬ್ಬರ ಜೋಡಿ ಬುಡಾಕ್ಕೆ ಜೀವಕಳೆ ತುಂಬಿದೆ. ಹೊಸ ಬಡಾವಣೆ ನಿರ್ಮಾಣಕ್ಕೆ ಯೋಜನೆ, ಅನೇಕ ಹೊಸ …
Read More »ನವೆಂಬರ್ನಿಂದೀಚೆಗೆ ಎರಡು ಬಾರಿ ವಿದ್ಯುತ್ ದರ ಹೆಚ್ಚಳದಿಂದ ಗ್ರಾಹಕರು ಸಂಕಷ್ಟಕ್ಕೆ
ಬೆಂಗಳೂರು: ನವೆಂಬರ್ನಿಂದೀಚೆಗೆ ಎರಡು ಬಾರಿ ವಿದ್ಯುತ್ ದರ ಹೆಚ್ಚಳದಿಂದ ಗ್ರಾಹಕರು ಸಂಕಷ್ಟಕ್ಕೆ ಸಿಲುಕಿರುವ ಬೆನ್ನಲ್ಲೇ ಎಸ್ಕಾಂಗಳು ದರ ಏರಿಕೆಗೆ ಪ್ರಸ್ತಾವ ಸಂಬಂಧ ಆಕ್ಷೇಪಣೆಗಳನ್ನು ಆಹ್ವಾನಿಸುತ್ತಿದ್ದು, ಏಪ್ರಿಲ್ನಿಂದ ಮತ್ತೆ ವಿದ್ಯುತ್ ದರ ಏರಿಕೆಯಾಗುವ ಆತಂಕ ಮೂಡಿದೆ. ಕೋವಿಡ್ ತಂದೊಡ್ಡಿರುವ ಸಂಕಷ್ಟದ ನಡುವೆಯೂ ನ.1ರಿಂದ ಜಾರಿಗೆ ಬರುವಂತೆ ಪ್ರತಿ ಯೂನಿಟ್ ವಿದ್ಯುತ್ ದರವನ್ನು ಸರಾಸರಿ 40 ಪೈಸೆ ಹೆಚ್ಚಳಕ್ಕೆ ಅನುಮತಿ ನೀಡಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್ಸಿ) ಆದೇಶ ಹೊರಡಿಸಿತ್ತು. ಬಳಿಕ ಪ್ರಸಕ್ತ …
Read More »ಯಶ್ ಅಭಿಮಾನಿಗಳ ಪ್ರೀತಿ ಮತ್ತು ಸಹಕಾರಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.
ಬೆಂಗಳೂರು: ಕೆಜಿಎಫ್-2 ಚಿತ್ರದ ಟೀಸರ್ ನೋಡಿ ಯಶ್ಗೆ ಅಭಿಮಾನಿಗಳೂ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ಚಿತ್ರ ಟೀಸರ್ ನಿಂದಲೇ ದಾಖಲೆ ನಿರ್ಮಿಸಲು ಹೊರಡುತ್ತಿದ್ದಂತೆ ಯಶ್ ಅಭಿಮಾನಿಗಳ ಪ್ರೀತಿ ಮತ್ತು ಸಹಕಾರಕ್ಕೆ ಧನ್ಯವಾದ ಸಲ್ಲಿಸಿದ್ದಾರೆ. ಕೆಜಿಎಫ್-2 ಚಿತ್ರದ ಟೀಸರ್ ಗುರುವಾರ ರಾತ್ರಿ ಬಿಡುಗಡೆ ಗೊಳಿಸಿದ್ದರು. ಈಗಾಗಲೇ ಸುಮಾರು 10 ಕೋಟಿಗೂ ಅಧಿಕ ವ್ಯೂವ್, ಲೈಕ್ ಮತ್ತು ಕಮೆಂಟ್ಗಳನ್ನು ಹಾಕುವ ಮೂಲಕ ಕನ್ನಡ ಚಿತ್ರವೊಂದು ಎಲ್ಲಾ ಯೂಟ್ಯೂಬ್ ದಾಖಲೆಗಳನ್ನು ಪುಡಿಗಟ್ಟಿದೆ. ಈ ಸಂಭ್ರಮವನ್ನು ಇದೀಗ್ ಯಶ್ …
Read More »ಸಿನಿಮಾದಲ್ಲಿ ನಟಿಸಲೆಂದು ಬಂದಿದ್ದ ಪುರುಷ ಮಾಡೆಲ್ ಮೇಲೆ ಗ್ಯಾಂಗ್ರೇಪ್
ಮುಂಬೈ: ಸಿನಿಮಾದಲ್ಲಿ ನಟಿಸಲೆಂದು ಗುಜರಾತ್ನಿಂದ ನಗರಕ್ಕೆ ಬಂದಿದ್ದ ಪುರುಷ ಮಾಡೆಲ್ನ್ನು 4 ಜನ ಯುವಕರು ರೇಪ್ ಮಾಡಿರುವ ಘಟನೆ ವರದಿಯಾಗಿದೆ. ಮಾಡೆಲ್ ಆಗಿದ್ದ 19 ವರ್ಷದ ಯುವಕ ತನ್ನ ಸಂಬಂಧಿಕರೊಂದಿಗೆ ಥಾಣೆಯಲ್ಲಿ ವಾಸಿಸುತ್ತಿದ್ದ. ಆ ಸಂದರ್ಭ ಸಾಮಾಜಿಕ ಜಾಲತಾಣದಲ್ಲಿ ಪುನೀತ್ ಶುಕ್ಲಾ ಎಂಬಾತಾನೊಂದಿಗೆ ಪರಿಚಯವಾಗಿತ್ತು. ಇವನನ್ನು ಭೇಟಿ ಮಾಡಿದ್ದ. ಕೆಲದಿನಗಳ ನಂತರ ಶುಕ್ಲಾ ತನ್ನ ಇತರ ಸ್ನೇಹಿತರನ್ನು ಕರೆದುಕೊಂಡು ಬಂದು ಮಾಡೆಲ್ನ್ನು ಮತ್ತೊಮ್ಮೆ ಕರೆಸಿಕೊಂಡಿದ್ದ ಎಂದು ವರದಿಯಾಗಿತ್ತು. ಶುಕ್ಲಾ ಮತ್ತು …
Read More »ಜನವರಿ 21 ರಿಂದ ಹುಬ್ಬಳ್ಳಿಯಿಂದ ಗೋವಾ ಮತ್ತು ಕೊಚ್ಚಿಗೆ ನೇರ ವಿಮಾನಯಾನ ಆರಂಭ
[ ಹುಬ್ಬಳ್ಳಿ: ಜನವರಿ 21 ರಿಂದ ಹುಬ್ಬಳ್ಳಿಯಿಂದ ಗೋವಾ ಮತ್ತು ಕೊಚ್ಚಿಗೆ ನೇರ ವಿಮಾನಯಾನ ಆರಂಭಗೊಳ್ಳಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ. ಇಂಡಿಗೋ ಸಂಸ್ಥೆ ವಿಮಾನಯಾನದ ಮೂಲಕ ಹುಬ್ಬಳ್ಳಿಯಿಂದ ಮತ್ತೆರಡು ನಗರಗಳ ಜೊತೆ ನೇರ ಸಂಪರ್ಕ ಬೆಳೆಸಲಿದೆ. ಹುಬ್ಬಳ್ಳಿ-ಗೋವಾ ಮತ್ತು ಹುಬ್ಬಳ್ಳಿ-ಕೊಚ್ಚಿ ನಗರಗಳಿಗೆ ನೇರ ವಿಮಾನ ಸೇವೆಯನ್ನು ಜ. 21 ರಿಂದ ಪುನರಾರಂಭಿಸಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಸಮಯ : …
Read More »ಕಪಿಲ ಶರ್ಮಾಗೆ ರಷ್ಮೀಕ್ ನೋಡುವ ಆಸೆಯಂತೆ
ಮುಂಬೈ: ನ್ಯಾಷನಲ್ ಕ್ರಶ್ ಆಗಿರೋ ಕೂರ್ಗದ ಚೆಲುವೆ ರಶ್ಮಿಕಾ ಮಂದಣ್ಣರನ್ನ ನೋಡುವ ಆಸೆಯನ್ನ ಬಾಲಿವುಡ್ ನಟ, ಕಾಮಿಡಿಯನ್ ಕಪಿಲ್ ಶರ್ಮಾ ಹೊರ ಹಾಕಿದ್ದಾರೆ. ದಕ್ಷಿಣ ಭಾರತದ ಬೇಡಿಕೆಯ ನಟಿಯಲ್ಲಿ ಒಬ್ಬರಾಗಿರೋ ರಶ್ಮಿಕಾ ಮಂದಣ್ಣ ಸಾಲು ಸಾಲು ಸೂಪರ್ ಹಿಟ್ ಸಿನಿಮಾ ನೀಡಿ ತಮ್ಮ ಪ್ರತಿಭೆಯನ್ನ ಸಾಬೀತು ಮಾಡಿದ್ದಾರೆ. ಟಾಲಿವುಡ್ ಬಳಿಕ ಬಿಟೌನ್ ನಲ್ಲಿಯೂ ರಶ್ಮಿಕಾ ಸದ್ದು ಮಾಡುತ್ತಿದ್ದಾರೆ. ಮಿಶನ್ ಮಜ್ನು ಮೂಲಕ ಬಾಲಿವುಡ್ ಅಂಗಳಕ್ಕೆ ಪಾದಾರ್ಪಣೆ ಮಾಡಿರೋ ರಶ್ಮಿಕಾ ಮಂದಣ್ಣ …
Read More »ಹೈಡ್ರೋಜನ್ ಪೆರಾಕ್ಸೈಡ್ ಗ್ಯಾಸ್ ತುಂಬಿಕೊಂಡು ಹೋಗುತ್ತಿದ್ದ ಟ್ಯಾಂಕರ್ ಪಲ್ಟಿಯಾಗಿದೆ.
ಕಕ್ಕೇರಿ : ಶನಿವಾರ ಮುಂಬಯಿ -ಬೆಳಗಾವಿ ಕಡೆಯಿಂದ ದಾಂಡೇಲಿಗೆ ಹೈಡ್ರೋಜನ್ ಪೆರಾಕ್ಸೈಡ್ ಗ್ಯಾಸ್ ತುಂಬಿಕೊಂಡು ಹೋಗುತ್ತಿದ್ದ ಟ್ಯಾಂಕರ್ N L 01 RD 4579 ಕಕ್ಕೇರಿ ಗ್ರಾಮದಲ್ಲಿನ ಚಿಕ್ಕ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪಲ್ಟಿಯಾದ ವಾಹನದಿಂದ ಗ್ಯಾಸ್ ಸೋರಿಕೆಯಾಗಿ ಪಕ್ಕದ ಗದ್ದೆಗಳಿಗೆ ಹರಿದು ನೆಲ ಕುದಿಯುತ್ತಿದ್ದು ಅಗ್ನಿ ಶಾಮಕ ದಳದ ಸಿಬ್ಬಂದಿ ಹಾಗೂ ಪೋಲೀಸ್ ಸಿಬ್ಬಂದಿ ಅನಾಹುತ ತಪ್ಪಿಸಲು ಮತ್ತು ರಸ್ತೆ ತೆರವುಗೊಳಿಸುವ ಕಾರ್ಯದಲ್ಲಿ ಹರಸಾಹಸ ಪಟ್ಟಿದ್ದಾರೆ
Read More »ರೈಲು ಡಿಕ್ಕಿ ಹೊಡೆದ ರಭಸಕ್ಕೆ ವ್ಯಕ್ತಿಯ ದೇಹ ಛಿದ್ರ ಛಿದ್ರಗೊಂಡಿದೆ.
ಕಲಬುರ್ಗಿ ಜಿಲ್ಲೆ): ಚಿತ್ತಾಪುರ ಬಳಿಯ ಇಟಗಿ ಗ್ರಾಮದ ಹೊರವಲಯದಲ್ಲಿ ಹಳಿ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ರೈಲು ಡಿಕ್ಕಿ ಹೊಡೆದ ಪರಿಣಾಮ ಗ್ರಾಮದ ಕರಿಬಸಪ್ಪ ಪಾಟೀಲ ಕೂಗನೂರ ಅವರು (64) ಶನಿವಾರ ಮಧ್ಯಾಹ್ನ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ರೈಲು ಡಿಕ್ಕಿ ಹೊಡೆದ ರಭಸಕ್ಕೆ ವ್ಯಕ್ತಿಯ ದೇಹ ಛಿದ್ರ ಛಿದ್ರಗೊಂಡಿದೆ. ದೂರದವರೆಗೂ ದೇಹದ ಅಂಗಗಳು ಬಿದ್ದಿವೆ. ಒಂದು ಕಾಲು ಸುಮಾರು 5 ಕಿ.ಮೀ ದೂರದಲ್ಲಿ ಬಿದ್ದಿದೆ. ಇಟಗಿ ಸಮೀಪದ ರೈಲ್ವೆ ಹಳಿ ಬಳಿಯೇ …
Read More »ಕೃಷಿ ಕಾಯ್ದೆಗೆ ವಿರೋಧ: ಜ.15ರಂದು ಕಾಂಗ್ರೆಸ್ನಿಂದ ರಾಷ್ಟ್ರವ್ಯಾಪಿ ಪ್ರತಿಭಟನೆ
ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷ ಜ. 15ರಂದು ದೇಶದಾದ್ಯಂತ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ’15ರಂದು ರಾಜಭವನಗಳಿಗೆ ಮುತ್ತಿಗೆ ಹಾಕಲಾಗುವುದು. ಮುಂಬರುವ ಬಜೆಟ್ ಅಧಿವೇಶನದ ವೇಳೆ ಸಂಸತ್ ಕಲಾಪಕ್ಕೆ ಅಡ್ಡಿಪಡಿಸಲು ಅಧ್ಯಕ್ಷೆ ಸೋನಿಯಾ ಗಾಂಧಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ಸಿಂಗ್ ಸುರ್ಜೇವಾಲಾ ತಿಳಿಸಿದರು. ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು, ಎಲ್ಲಾ ರಾಜ್ಯಗಳ ಉಸ್ತುವಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
Read More »