Breaking News

ಬಾಗಲಕೋಟೆ: ಅಶ್ವತ್ಥ ಮರದ ಕೆಳಗೆ ಮಂತ್ರ ಮಾಂಗಲ್ಯ ಪದ್ಧತಿಯಂತೆ ವಿವಾಹವಾದ ಜೋಡಿ!

Spread the love

ಬಾಗಲಕೋಟೆ: ದೊಡ್ಡ ಮದುವೆ ಮಂಟಪದಲ್ಲಿ ನೂರಾರು ಬಂಧು ಮಿತ್ರರ ಮುಂದೆ ಸಂಭ್ರಮ ಸಡಗರದೊಂದಿಗೆ ಅದ್ಧೂರಿಯಾಗಿ ತಮ್ಮ ವಿವಾಹ ಜರುಗಬೇಕೆಂದು ಪ್ರಸ್ತುತ ಯುವಜನತೆಯ ಬಯಕೆಯಾಗಿದೆ. ಅದರಂತೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೃಹತ್​ ಮದುವೆ ಮಂಟಪದಲ್ಲಿ ವಿವಾಹವಾಗುತ್ತಿರುವ ಅನೇಕ ಜೋಡಿಗಳನ್ನು ನೋಡಿದ್ದೇವೆ. ಆದರೆ ಇಲ್ಲೊಂದು ಜೋಡಿ ಯಾವುದೇ ಆಡಂಬರವಿಲ್ಲದೇ ಅಶ್ವತ್ಥ ಮರದ ಕೆಳಗೆ ಮದುವೆಯಾಗಿ ಗಮನ ಸೆಳೆದಿದೆ.

ಹೌದು, ಐತಿಹಾಸಿಕ ಹಿನ್ನೆಲೆ ಹೊಂದಿರುವ ಬಾದಾಮಿ ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾಗಿರುವ ಹಳೆಯ ಮಹಾಕೂಟದಲ್ಲಿ ಅಶ್ವತ್ಥ ಮರದ ಕೆಳಗೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ತದ್ದೇವಾಡಿ ಗ್ರಾಮದ ಅರಣ್ಯ ಇಲಾಖೆ ಸಿಬ್ಬಂದಿ ಸಿದ್ದರಾಮ ಗೌಡ ಅವರು ಇಂಡಿ ತಾಲೂಕು ಅಂಜುಟಗಿ ಗ್ರಾಮದ ಶ್ರೇಯಾ ಹೊನಗೊಂಡ ಅವರನ್ನು ಮಂತ್ರ ಮಾಂಗಲ್ಯ ಮೂಲಕ ವರಿಸಿದ್ದಾರೆ.


Spread the love

About Laxminews 24x7

Check Also

ಅರಭಾವಿ ಆಂಜನೇಯ ದೇವರ ಕಾರ್ತೀಕೋತ್ಸವದಲ್ಲಿ ಪಾಲ್ಗೊಂಡ ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love  ಮೂಡಲಗಿ- ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಅರಭಾವಿ ಆಂಜನೇಯ ದೇವಸ್ಥಾನಕ್ಕೆ ತೆರಳಿ ಶಾಸಕ ಮತ್ತು ಬೆಮುಲ್ ಅಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ