Breaking News

ಬೆಳಗಾವಿಯಲ್ಲಿ ಒಟ್ಟು ಮೌಲ್ಯ ರೂ. 6.83 ಲಕ್ಷ ರೂ ಮದ್ಯ ವಶ

Spread the love

ಬೆಳಗಾವಿ – ಮಹಾನಗರ ಪಾಲಿಕೆ ಚುನಾವಣೆಗೆ ಕೆಲವೇ ಗಂಟೆ ಬಾಕಿ ಇರುವಾಗ ಬೆಳಗಾವಿಯಲ್ಲಿ ಅಪಾರ ಪ್ರಮಾಣದಲ್ಲಿ ಗೋವಾ ಮದ್ಯ ವಶಪಡಿಸಿಕೊಳ್ಳಲಾಗಿದೆ.

ಬುಧವಾರ ಬೆಳಿಗ್ಗೆ 5 ಗಂಟೆಯ ಸುಮಾರಿಗೆ ಅಬಕಾರಿ ನಿರೀಕ್ಷಕರು ಹಾಗೂ ಅವರ ಸಿಬ್ಬಂದಿ ಸೇರಿ ಮಜಗಾಂವ ಕ್ರಾಸ್ ಹತ್ತಿರ ರಸ್ತೆಯಲ್ಲಿ ಖಚಿತ ಮಾಹಿತಿ ಮೇರೆಗೆ ರಸ್ತೆಗಾವಲು ಹಾಗೂ ವಾಹನ ತಪಾಸಣೆ ಮಾಡುತ್ತಿರುವಾಗ ಒಂದು ಹುಂಡೈ ಐ-೨೦ ಕಾರ್ (ಸಂಖ್ಯೆ ಜಿಎ-೦೩ ಎಚ್-೮೬೪೪)    ತಪಾಸಣೆ ಮಾಡಿದಾಗ ವಾಹನದಲ್ಲಿ ಅಪಾರ ಪ್ರಮಾಣದಲ್ಲಿ ಮದ್ಯ ಪತ್ತೆಯಾಗಿದೆ.

ಮೂರು ಚೀಲಗಳಲ್ಲಿ ೬೦ ಎಂ.ಎಲ್ ಅಳತೆಯ ಗೋವಾ ರಾಜ್ಯದಲ್ಲಿ ಮಾರಾಟಕ್ಕೆ ಎಂದು ನಮೂದಿರುವ ೯೧೫ ವ್ಯಾಟ-೬೯ ವಿಸ್ಕಿ ಪ್ಲ್ಯಾಸ್ಟಿಕ್ ಬಾಟಲಿಗಳು ಒಟ್ಟು ೫೪.೯೦೦ ಲೀಟರ್ ಗೋವಾ ಮದ್ಯವನ್ನು  ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿರುವಾಗ ಪತ್ತೆಯಾಗಿದೆ.

ಆರೋಪಿತರಾದ  ಸಲೀಮ ಅಬುಬಕರ ಶೇಖ (ವಯ:೩೯ ವರ್ಷ ಜಾತಿ:ಮುಸ್ಲೀಂ ಉದ್ಯೋಗ: ಡ್ರೈವರ ಸಾ: ಪ್ಲಾಟ್.ನಂ:೨, ಗುಲಮೊಹರ ಸೊಸೈಟಿ, ದಂಗಟ ವಸ್ತಿ, ವಿಕಾಸ ನಗರ, ಕಿವಾಳೆ ದೇಹೂ ರೋಡ, ಕಿವಾಳೆ, ಪೂಣೆ ಮಹಾರಾಷ್ಟ್ರ ರಾಜ್ಯ-೪೧೨೧೦೧) ಮತ್ತು ಪೃಥ್ವಿರಾಜ ವಿನಾಯಕ ಚವ್ಹಾಣ (ವಯ:೩೧ ವರ್ಷ ಜಾತಿ:ಹಿಂದೂ ಬೌದ್ದ ಉದ್ಯೋಗ:ಡ್ರೈವರ ಸಾದ್ದಿಂದ್ರಾಯಣ ದರ್ಶನ, ೫೮೫/೧೫, ಸೇಂಟ್ ಜ್ಯೂಡ್ ಶಾಲೆ ಹಿಂದೆ, ದೇಹೂ ರೋಡ, ಪೂಣೆ, ಮಹಾರಾಷ್ಟ್ರ ರಾಜ್ಯ) ಇವರುಗಳನ್ನು ಸ್ಥಳದಲ್ಲಿಯೇ ಬಂಧಿಸಲಾಗಿದೆ.  ಹುಂಡೈ ಐ-೨೦ ಕಾರ್ ಮಾಲೀಕನನ್ನು ಪತ್ತೆ ಹಚ್ಚಿ ಬಂಧಿಸಬೇಕಾಗಿದೆ.

ದಾಳಿಯನ್ನು ಅಬಕಾರಿ ಅಪರ ಆಯುಕ್ತ ಡಾ:ವೈ ಮಂಜುನಾಥ,   ಅಬಕಾರಿ ಉಪ ಆಯುಕ್ತ ಜಯರಾಮೇಗೌಡ,  ಹಾಗೂ  ಅಬಕಾರಿ ಉಪ ಅಧೀಕ್ಷಕ ಚನಗೌಡ ಎಸ್ ಪಾಟೀಲ ಮಾರ್ಗದರ್ಶನದಲ್ಲಿ  ಅಬಕಾರಿ ನಿರೀಕ್ಷಕ ಆರ್.ಬಿ.ಹೊಸಳ್ಳಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.


Spread the love

About Laxminews 24x7

Check Also

ತಮ್ಮ ವಿರುದ್ದ ದಾಖಲಾಗಿರುವ ಎಫ್​ಐಆರ್ ಕುರಿತು ಪ್ರತಿಕ್ರಿಯಿಸಿದಚಿದಾನಂದ ಸವದಿ

Spread the loveಚಿಕ್ಕೋಡಿ (ಬೆಳಗಾವಿ) : ಕಳೆದ ಮೂರು ದಿನಗಳ ಹಿಂದೆ ನಡೆದಿರುವ ಷಡ್ಯಂತ್ರದ ವಿರುದ್ಧ ಅಥಣಿ ಮತಕ್ಷೇತ್ರದ ರೈತಬಾಂಧವರು ಹಾಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ