Breaking News

ಕೊನೆಯ ಬಾರಿ ಮಗನ ಮುಖ ನೋಡಲಾಗದೆ, ಸುರೇಶ್​​ ಅಂಗಡಿ ತಾಯಿಯ ಆಕ್ರಂದನ

Spread the love

ಬೆಳಗಾವಿ: ಕೇಂದ್ರ ಸಚಿವ ಸುರೇಶ್​ ಅಂಗಡಿ ನಿನ್ನೆ ಕೊರೊನಾದಿಂದ ನಿಧನರಾಗಿದ್ದು, ಮೃತರ ಕುಟುಂಬಕ್ಕೆ ದೊಡ್ಡ ಆಘಾತವಾಗಿದೆ. ಸುರೇಶ್​ ಸಂಗಡಿ ತಾಯಿ ಸೋಮವ್ವ ಅವರ ಆಕ್ರಂದನ ಮುಗಿಲು ಮುಟ್ಟಿದ್ದು ಕೊನೆಯ ಬಾರಿ ಮಗನ ಮುಖ ನೋಡಲು ಅವಕಾಶ ಸಿಗದೆ ತೀವ್ರ ದುಃಖ ಅನುಭವಿಸುತ್ತಿದ್ದಾರೆ.

ಸೋಮವ್ವ ಮಗನ ಸಾವಿನ ಸುದ್ದಿ ಕೇಳಿ ನಿನ್ನೆಯೇ ಕೆ.ಕೆ ಕೊಪ್ಪದಿಂದ ಬೆಳಗಾವಿ ನಿವಾಸಕ್ಕೆ ಆಗಮಿಸಿದ್ದಾರೆ. ಆದ್ರೆ ಏಮ್ಸ್​ ಆಸ್ಪತ್ರೆಯಲ್ಲಿರುವ ಅಂಗಡಿ ಅವರ ಪಾರ್ಥಿವ ಶರೀರವನ್ನು ಬೆಳಗಾವಿಗೆ ತರುವುದು ಅನುಮಾನವಾಗಿದೆ. ಕೊರೊನಾ ಗೈಡ್​​ಲೈನ್ಸ್​ನಂತೆ ಅವರ ಅಂತ್ಯಕ್ರಿಯೆಯನ್ನು ದೆಹಲಿಯಲ್ಲೇ ನಡೆಸಲು ನಿರ್ಧರಿಸಲಾಗಿದೆ. ಹೀಗಾಗಿ ಕುಟುಂಬಸ್ಥರು ಇಂದು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಆದ್ರೆ ಸೋಮವ್ವ ಅವರಿಗೆ ವಯಸ್ಸಾಗಿರುವುದರಿಂದ ದೆಹಲಿಗೆ ಕರೆದುಕೊಂಡು ಹೋಗುತ್ತಿಲ್ಲ.

ಮಗನ ಅಕಾಲಿಕ ನಿಧನದ ನೋವು ಒಂದೆಡೆಯಾದ್ರೆ,ಕೊನೆಯದಾಗಿ ಮಗನ ಮುಖ ನೋಡುವ ಅವಕಾಶ ಸಿಗದ್ದಕ್ಕೆ ಸೋಮವ್ವ ಅತೀವವಾಗಿ ದುಃಖಿಸುತ್ತಿದ್ದಾರೆ.


Spread the love

About Laxminews 24x7

Check Also

ಶಿಕ್ಷಿಸುವುದಕ್ಕಿಂತ ಸರಿಯಾದ ದಾರಿಗೆ ತರೋದೇ ನಮ್ಮ ಧರ್ಮ: ನಿಂದಿಸಿದ ಮಕ್ಕಳನ್ನು ಕ್ಷಮಿಸಿದ ಮೋದಿ

Spread the loveನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಘಟನೆ ಮತ್ತು ತಮ್ಮ ಹಾಗೂ ತಮ್ಮ ದಿವಂಗತ ತಾಯಿಯವರ ವಿರುದ್ಧ ವ್ಯಕ್ತವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ