Breaking News

ಕುಂದಾನಗರಿ ಬೆಳಗಾವಿ ಜಿಲ್ಲೆಯಲ್ಲಿ ನಡೆದ ಅದ್ದೂರಿ ರೊಟ್ಟಿ ಜಾತ್ರೆ

Spread the love

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಗ್ರಾಮದ ಯಲ್ಲಾಲಿಂಗೇಶ್ವರ ಮಠದ ಆವರಣದಲ್ಲಿ ಹತ್ತೂರು ಗ್ರಾಮದ ಸಾವಿರಾರು ಮಹಿಳೆಯರು ಎರಡು ವಾರಗಳ ಕಾಲ ರೊಟ್ಟಿ ಮಾಡಿ, ಬಳಿಕ ಮಠವೊಂದಕ್ಕೆ ಸಮರ್ಪಣೆ ಮಾಡಿದ್ದರು. ತಲೆ ಮೇಲಿನ ಬುತ್ತಿ ಗಂಟಿಗೆ ತಿರಂಗಾ ಧ್ವಜವನ್ನು ಹಾಕಿದ್ದು ವಿಶೇಷವಾಗಿತ್ತು.

ಅಷ್ಟಕ್ಕೂ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ರೊಟ್ಟಿ ಬುತ್ತಿ ಜಾತ್ರೆ ಮಾಡೋದ್ಯಾಕೆ? ಈ ರೊಟ್ಟಿ ಬುತ್ತಿ ಜಾತ್ರೆ ಸ್ಟೋರಿ ಇಲ್ಲಿದೆ.ತಲೆ ಮೇಲೆ ಬುತ್ತಿ ಹೊತ್ತು ಸಾಗುತ್ತಿರುವ ಮಹಿಳೆಯರು, ತ್ರಿವರ್ಣ ಧ್ವಜದ ಬಣ್ಣಗಳನ್ನೇ ರೊಟ್ಟಿ ಬುತ್ತಿಗೆ ಹಾಕಿ ರಾಷ್ಟ್ರ ಧ್ವಜದ ಮೆರವಣಿಗೆ ಮಾದರಿಯಲ್ಲಿ ಸಾಗಿದ ಯಲ್ಲಾಲಿಂಗೇಶ್ವರ ಭಕ್ತರ ಮೆರವಣಿಗೆ. ಜಾತಿ ಧರ್ಮದ ಬೇಧಭಾವ ಬಿಟ್ಟು ಅದ್ದೂರಿ ಜಾತ್ರೆಯಲ್ಲಿ ಹತ್ತೂರ ಜನರು ಭಾಗಿಯಾಗಿದ್ದರು.

 ಅಷ್ಟಕ್ಕೂ ಈ ಎಲ್ಲ ದೃಶ್ಯ ಕಂಡು ಬಂದಿದ್ದು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಗ್ರಾಮದ ಯಲ್ಲಾಲಿಂಗೇಶ್ವರ ಮಠದ ಆವರಣದಲ್ಲಿ. ಹೌದು, ಪ್ರತಿವರ್ಷದಂತೆ ಈ ವರ್ಷವೂ ಅದ್ದೂರಿಯಾಗಿ ಯಲ್ಲಾಲಿಂಗ ದೇವರ ಜಾತ್ರೆ ನೆರವೇರಿದೆ.

 ಈ ಬಾರಿ ವಿಶೇಷ ಅಂದ್ರೇ ಹತ್ತು ಸಾವಿರ ಮಹಿಳೆಯರು ಹೊತ್ತು ತರ್ತಿದ್ದ ರೊಟ್ಟಿ ಬುತ್ತಿಯನ್ನ ತ್ರಿವರ್ಣ ಧ್ವಜದ ಬಣ್ಣದಲ್ಲಿನ ಬಟ್ಟೆ ಕಟ್ಟಿಕೊಂಡು ಸಾಲಾಗಿ ಬಂದು ದೇವರಿಗೆ ಅರ್ಪಣೆ ಮಾಡಿರುವುದು. ಈ ಮೂಲಕ ಹೊಸ ಸಾಧನೆಯನ್ನೂ ಯಲ್ಲಾಲಿಂಗ ಮಹರಾಜರ ಭಕ್ತರು ಮಾಡಿದ್ದಾರೆ.


Spread the love

About Laxminews 24x7

Check Also

5 ಹುಲಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅರಣ್ಯಾಧಿಕಾರಿಗಳಿಗೆ ಕಡ್ಡಾಯ ರಜೆ ನೀಡಿ ಪಿಸಿಸಿಎಫ್ ಆದೇಶಿಸಿದ್ದಾರೆ.

Spread the loveಚಾಮರಾಜನಗರ: ಮಲೆಮಹದೇಶ್ವರ ವನ್ಯಜೀವಿಧಾಮದ ಮೀಣ್ಯಂ ಅರಣ್ಯದಲ್ಲಿ 5 ಹುಲಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅರಣ್ಯಾಧಿಕಾರಿಗಳಿಗೆ ಕಡ್ಡಾಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ