Breaking News

ದಸರಾ ಆನೆಯೊಂದಿಗೆ ರೀಲ್ಸ್​ ಪ್ರಕರಣ: ಕಾರಣ ಕೇಳಿ ಸಿಬ್ಬಂದಿಗೆ ನೋಟಿಸ್​ ನೀಡಲು ಸಚಿವ ಈಶ್ವರ್​ ಖಂಡ್ರೆ ಸೂಚನೆ

ಮೈಸೂರು: ಅರಮನೆ ಆವರಣದಲ್ಲಿ ಇದ್ದ ಗಜಪಡೆ ವಾಸ್ತವ್ಯ ತಳಕ್ಕೆ ಯುವತಿಯೋರ್ವಳು ಅಕ್ರಮವಾಗಿ ಪ್ರವೇಶ ಮಾಡಿ ದಸರಾ ಆನೆಯೊಂದಿಗೆ ರೀಲ್ಸ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆನೆ ನೋಡಿಕೊಳ್ಳುವ ಸಿಬ್ಬಂದಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ಅರಣ್ಯ ಸಚಿವ ಈಶ್ವರ್ ಬಿ. ಖಂಡ್ರೆ ಅರಣ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ. ಸೂಚನೆಯಲ್ಲೇನಿದೆ: ‘ಮೈಸೂರು ದಸರಾದಲ್ಲಿ ಪಾಲ್ಗೊಳ್ಳುವ ಅಭಿಮನ್ಯು, ಭೀಮ ಸೇರಿದಂತೆ ಸಾಕಾನೆಗಳ ಜೊತೆ ಫೋಟೋ, ವಿಡಿಯೋ, ರೀಲ್ಸ್ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಕಳೆದ 18ರಂದು ಯುವತಿಯೊಬ್ಬರು ರೀಲ್ಸ್ ಮಾಡಿರುವ …

Read More »

ರಾಜಧಾನಿಯಲ್ಲಿ ರಸ್ತೆಗಳ ಸ್ಥಿತಿಗತಿ ಅರಿಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏಕಾಏಕಿ ನಗರ ಪ್ರದಕ್ಷಿಣೆ

ಬೆಂಗಳೂರು: ರಾಜಧಾನಿಯಲ್ಲಿ ರಸ್ತೆಗಳ ಸ್ಥಿತಿಗತಿ ಅರಿಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏಕಾಏಕಿ ನಗರ ಪ್ರದಕ್ಷಿಣೆ ಕೈಗೊಂಡು ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ನಗರದಲ್ಲಿ ರಸ್ತೆಗುಂಡಿಗಳಿಂದ ರಸ್ತೆಗಳು ಹಾಳಾಗಿವೆ. ಘನ ತ್ಯಾಜ್ಯಗಳ ಸಮರ್ಪಕ ನಿರ್ವಹಣೆ ಕೊರತೆ ಹಾಗೂ ಮಳೆಪೀಡಿತ ಪ್ರದೇಶಗಳಲ್ಲಿ ಉಂಟಾಗುತ್ತಿರುವ ಸಮಸ್ಯೆ ಅರಿಯಲು ಸಿದ್ದರಾಮಯ್ಯ ಅವರು ಸಿಟಿ ರೌಂಡ್ಸ್ ಕೈಗೊಂಡರು. ರಸ್ತೆ ಗುಂಡಿ ಮುಚ್ಚದಿರುವುದು, ರಸ್ತೆ ಬದಿಯಲ್ಲಿ ಘನತ್ಯಾಜ್ಯ ಇರುವುದು ಹಾಗೂ ವೈಟ್ ಟಾಪಿಂಗ್ ರಸ್ತೆ ಸಮರ್ಪಕವಾಗಿ ನಿರ್ವಹಣೆ ಕಂಡು ಬರದ ಹಿನ್ನೆಲೆಯಲ್ಲಿ …

Read More »

ನೀಟ್​ ಪರೀಕ್ಷೆಯ ಫಲಿತಾಂಶದ ಬಳಿಕ ಜಾತಿ ಬದಲಾಯಿಸಲು ಅವಕಾಶವಿಲ್ಲ: ಹೈಕೋರ್ಟ್ ಸ್ಪಷ್ಟನೆ

ಬೆಂಗಳೂರು: ವೈದ್ಯಕೀಯ ಸ್ನಾತಕ ಅಥವಾ ಸ್ನಾತಕೋತ್ತರ ಪದವಿಯ ಪ್ರವೇಶಕ್ಕೆ ನಡೆಯುವ ನೀಟ್​​​​ ಪರೀಕ್ಷೆಗೆ ಸಲ್ಲಿಸುವ ಅರ್ಜಿಗಳಲ್ಲಿ ಜಾತಿ ಸೇರಿದಂತೆ ಇತರೆ ಗೊಂದಲಗಳ ತಿದ್ದುಪಡಿಗೆ ಅವಕಾಶ ಕಲ್ಪಿಸಿದ್ದ ಸಂದರ್ಭದಲ್ಲಿ ಸರಿಪಡಿಸಿಕೊಳ್ಳದೆ, ಫಲಿತಾಂಶದ ಬಳಿಕ ಮೀಸಲು ವರ್ಗ ಬದಲಾಯಿಸಲು ಕೋರುವುದಕ್ಕೆ ಅವಕಾಶ ಇರುವುದಿಲ್ಲ ಎಂದು ಹೈಕೋರ್ಟ್​ ಸ್ಪಷ್ಟಪಡಿಸಿದೆ. ನೇಕಾರ ಸಮುದಾಯಕ್ಕೆ ಸೇರಿದ್ದು ಅರ್ಜಿಯಲ್ಲಿ ಸಾಮಾನ್ಯ ವರ್ಗ ಎಂಬುದಾಗಿ ನಮೂದಿಸಲಾಗಿದೆ. ತನ್ನನ್ನು ಹಿಂದುಳಿದ ವರ್ಗಗಳ ಪಟ್ಟಿಯಡಿ ಪರಿಗಣಿಸಬೇಕು ಎಂದು ಕೋರಿ ವೈದ್ಯಕೀಯ ಸ್ನಾತಕೋತ್ತರ ಪದವಿಯ ಆಕಾಂಕ್ಷಿ …

Read More »

ಶೋಗೆ ಕರೆಯದಿದ್ದರೆ ಬಿಗ್​ ಬಾಸ್​ ಮನೆಗೆ ಬಾಂಬ್ ಇಟ್ಟು ಸ್ಫೋಟಿಸ್ತೀನಿ ಎಂದ ಯುವಕ!

ಬೆಂಗಳೂರು: ಕನ್ನಡದ ಪ್ರಖ್ಯಾತ ರಿಯಾಲಿಟಿ ಶೋ ಆಗಿರುವ ಬಿಗ್​​ ಬಾಸ್​ನ 12ನೇ ಆವೃತ್ತಿಯು ಭಾನುವಾರದಿಂದ ಆರಂಭವಾಗುತ್ತಿದೆ. ಕಿರುತೆರೆ ಹಾಗೂ ಬೆಳ್ಳಿತೆರೆ ಸೇರಿದಂತೆ ವಿವಿಧ ರಂಗಗಳಲ್ಲಿ ಇರುವ ಯಾರೆಲ್ಲಾ ಗಣ್ಯರು ಸ್ಪರ್ಧಿಗಳಾಗಿ ಮನೆಯೊಳಗೆ ಬರಲಿದ್ದಾರೆ ಎಂಬ ಕುತೂಹಲ ಗರಿಗೆದರಿದೆ. ಹೇಗಾದರೂ ಮಾಡಿ ಬಿಗ್​ ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಗಳಾಗಲು ಹಲವು ಮಂದಿ ಆಕಾಂಕ್ಷಿಗಳು ಇನ್ನಿಲದ ಕಸರತ್ತಿನಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನೂ ಕೆಲವರು ಅವಹೇಳನಕಾರಿ ಅಥವಾ ಬೆದರಿಕೆ ರೀತಿ ಹುಚ್ಚು ಹೇಳಿಕೆಗಳನ್ನು ನೀಡಿ ಸಾಮಾಜಿಕ ಜಾಲತಾಣದವಾದ …

Read More »

ನಕಲಿ ಚಿನ್ನವನ್ನೇ ಅಸಲಿ ಚಿನ್ನವೆಂದು ಮಾರಾಟ ಮಾಡ್ತಿದ್ದ ಗ್ಯಾಂಗ್ ಅರೆಸ್ಟ್

ಹೊಸಕೋಟೆ: ರಾಜರ ಕಾಲದ ಚಿನ್ನದ ಸರ ಎಂದು ಜನರನ್ನು ಮರುಳು ಮಾಡಿ, ನಕಲಿ ಚಿನ್ನವನ್ನೇ ಅಸಲಿ ಚಿನ್ನವೆಂದು ಮಾರಾಟ ಮಾಡುತ್ತಿದ್ದ ಗ್ಯಾಂಗ್ ಅನ್ನು ಹೊಸಕೋಟೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 63 ಲಕ್ಷ ನಗದು, ಸುಮಾರು 8 ಕೆ.ಜಿ ನಕಲಿ ಚಿನ್ನ, ಕೃತ್ಯಕ್ಕೆ ಬಳಸಿದ ಕಾರು ಮತ್ತು 2 ಲಾಂಗ್ ಮಚ್ಚುಗಳನ್ನ ಹೊಸಕೋಟೆ ಪೊಲೀಸರು ಜಪ್ತಿ ಮಾಡಿದ್ದಾರೆ. ಘಟನೆ ಹಿನ್ನೆಲೆ: ಇತ್ತೀಚೆಗೆ ಹೊಸಕೋಟೆ ಠಾಣಾ ವ್ಯಾಪ್ತಿಯ ಚಿಂತಾಮಣಿ ರಸ್ತೆಯ ಬಳಿ ಬಳ್ಳಾರಿ ಮೂಲದ ಸಂತೋಷ …

Read More »

ಬೆಳಗಾವಿಗರ ಕಿಚನ್ಸ್’ಗೆ ಆಧುನಿಕ ಸೌಲಭ್ಯ ನೀಡಲು ಮುಂದಾದ ಶ್ರೀರಾಮ ಇನ್ನೋವ್ಹೇಷನ್….

ಬೆಳಗಾವಿಗರ ಕಿಚನ್ಸ್’ಗೆ ಆಧುನಿಕ ಸೌಲಭ್ಯ ನೀಡಲು ಮುಂದಾದ ಶ್ರೀರಾಮ ಇನ್ನೋವ್ಹೇಷನ್…. ಗ್ಲೇನ್ ಲೈವ್ ಬೇಟರ್ ಮತ್ತು ಸರ್ವಿಟಿ ಇಟಾಲಿಯಾ ಕಂಪನಿಯ ಕಿಚನ್ ಅಪ್ಲಾಯನ್ಸ್ ಈ ಬೆಳಗಾವಿಯಲ್ಲಿಯೇ ಲಭ್ಯ… ಶ್ರೀರಾಮ ಇನ್ನೋವ್ಹೇಷನ್’ನ ಹೊಸ ಹೆಜ್ಜೆ ಬೆಳಗಾವಿಗರ ಕಿಚನ್ಸ್’ಗೆ ಆಧುನಿಕ ಸೌಲಭ್ಯ ನೀಡಲು ಉಪಕ್ರಮ ಗ್ಲೇನ್ ಲೈವ್ ಬೇಟರ್ ಮತ್ತು ಸರ್ವಿಟಿ ಇಟಾಲಿಯಾ ಕಂಪನಿಯ ಕಿಚನ್ ಅಪ್ಲಾಯನ್ಸ್ ಬೆಳಗಾವಿಯಲ್ಲಿಯೇ ಲಭ್ಯ… ಬೆಳಗಾವಿಗರಿಗೆ ಕಳೆದ ಹಲವಾರು ವರ್ಷಗಳಿಂದ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಹೊಸ ಹೊಸ …

Read More »

ಕನ್ನಡಾಭಿಮಾನಿಗಳು ಸಾಥ್ ನೀಡಿದ್ರೇ ಬೆಳಗಾವಿಯಲ್ಲಿ ಮೈಸೂರು ಮಾದರಿಯಲ್ಲಿ ನಾಡಹಬ್ಬ; ಶ್ರೀ ಶಿವಸಿದ್ಧ ಸೋಮೇಶ್ವರ ಮಹಾಸ್ವಾಮಿಜೀ

ಕನ್ನಡಾಭಿಮಾನಿಗಳು ಸಾಥ್ ನೀಡಿದ್ರೇ ಬೆಳಗಾವಿಯಲ್ಲಿ ಮೈಸೂರು ಮಾದರಿಯಲ್ಲಿ ನಾಡಹಬ್ಬ; ಶ್ರೀ ಶಿವಸಿದ್ಧ ಸೋಮೇಶ್ವರ ಮಹಾಸ್ವಾಮಿಜೀ98ನೇ ನಾಡಹಬ್ಬ ಉತ್ಸವ ಶುಕ್ರವಾರ ಸಂಜೆ ಕವಿಗೋಷ್ಟಿ ಆಯೋಜನೆ ಕನ್ನಡಾಭಿಮಾನಿಗಳು ಸಾಥ್ ನೀಡಿದ್ರೇ ಬೆಳಗಾವಿಯಲ್ಲಿ ಮೈಸೂರು ಮಾದರಿಯಲ್ಲಿ ನಾಡಹಬ್ಬ ಶ್ರೀ ಶಿವಸಿದ್ಧ ಸೋಮೇಶ್ವರ ಮಹಾಸ್ವಾಮಿಜೀ ಅಭಿಪ್ರಾಯ ಕನ್ನಡಾಭಿಮಾನಿಗಳು ಕೈ ಜೋಡಿಸಿದರೇ ಬೆಳಗಾವಿಯ 98 ವರ್ಷಗಳ ಇತಿಹಾಸವಿರುವ ನಾಡಹಬ್ಬ ಉತ್ಸವವನ್ನು ಮೈಸೂರು ದಸರಾ ಮಾದರಿಯಲ್ಲಿ ಆಚರಿಸಲು ಎರಡು ಮಾತಿಲ್ಲವೆಂದು ಮುಕ್ತಿಮಠದ ಶ್ರೀ ಶಿವಸಿದ್ಧ ಸೋಮೇಶ್ವರ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು. …

Read More »

ಲಿಂಗಾಯತರು ‘ಲಿಂಗಾಯತ ಧರ್ಮ’ ಎಂದು ಬರೆಸಿರಿ

ಲಿಂಗಾಯತರು ‘ಲಿಂಗಾಯತ ಧರ್ಮ’ ಎಂದು ಬರೆಸಿರಿ ರಾಜ್ಯದಲ್ಲಿ ಸರ್ಕಾರ ಜಾತಿಗಣತಿ ಪ್ರಾರಂಭಿಸಿದ್ದು, ಜನರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿಗಳನ್ನು ಸಮೀಕ್ಷೆ ಮಾಡುವುದು ಇದರ ಉದ್ದೇಶವಾಗಿದೆ. ತರಾತುರಿಯಲ್ಲಿ ನಡೆಯುತ್ತಿರುವ ಈ ಸಮೀಕ್ಷೆಯಿಂದಾಗಿ ಜನರಲ್ಲಿ, ಅದರಲ್ಲೂ ವಿಶೇಷವಾಗಿ ಲಿಂಗಾಯತರಲ್ಲಿ ಸಾಕಷ್ಟು ಗೊಂದಲವುಂಟಾಗಿದೆ. ಸಣ್ಣ ಸಣ್ಣ ಸಮುದಾಯಗಳು ಲಿಂಗಾಯತ ಧರ್ಮದಿಂದ ದೂರ ಸರಿಯುತ್ತಿರುವ ಈ ಸಂದರ್ಭದಲ್ಲಿ ಅಖಂಡ ಲಿಂಗಾಯತ ಸಮಾಜವನ್ನು ಗಟ್ಟಿಯಾಗಿ ಉಳಿಸಿಕೊಳ್ಳಲು ಎಲ್ಲರೂ ತಮ್ಮ ಪ್ರತಿಷ್ಠೆಯನ್ನು ಬದಿಗಿರಿಸಿ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕಾಗಿದೆ. ಸಂವಿಧಾನದ ಕಲಂ …

Read More »

ವಿದ್ಯಾರ್ಥಿಗಳು ಕೃತಜ್ಞತಾ ಮನೋಭಾವನೆ ರೂಡಿಸಿಕೊಳ್ಳಿ. ಪೊಲೀಸ್ ಕಮಿಷನರ್ ಏನ್. ಶಶಿಕುಮಾರ್

ವಿದ್ಯಾರ್ಥಿಗಳು ಕೃತಜ್ಞತಾ ಮನೋಭಾವನೆ ರೂಡಿಸಿಕೊಳ್ಳಿ. ಪೊಲೀಸ್ ಕಮಿಷನರ್ ಏನ್. ಶಶಿಕುಮಾರ್. ಧಾರವಾಡ- ಸಮಯದ ಕುರಿತು ಅರಿವಿರಲಿ, ಸಮಯವನ್ನು ಗೌರವಿಸಿದರೆ, ಅದು ನಿಮ್ಮನು ಗೌರವಿಸುತ್ತದೆ. ಸಮಯ ನಿರ್ವಹಣೆ ಮಾಡಿ. ಚೆನ್ನಾಗಿ ಓದಿ, ಜೀವನದಲ್ಲಿ ನಿರಂತರ ಪ್ರಯತ್ನ ವಿರಲಿ. ಕಲಿಸಿದ ಗುರು ಗಳು,ತಂದೆ -ತಾಯಿಗೆ ಕೀರ್ತಿ ತನ್ನಿ. ಜತೆಗೆ ವಿದ್ಯಾರ್ಥಿಗಳು ಕೃತಜ್ಞತಾ ಮನೋಭಾನೆ ಬೆಳಸಿಕೊಳ್ಳಬೇಕು ಎಂದು ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಆಯಕ್ತರಾದ ಎನ್ ಶಶಿಕುಮಾರವರು ತಿಳಿಸಿದರು. ಧಾರವಾಡದ ಎಸ್ ಜೆ ಎಮ್ …

Read More »

ಮಾಜಿ ಸೈನಿಕರಿಗೆ ಉಚಿತ ಹಾಗೂ ಸಮರ್ಥ ಕಾನೂನು ಸೇವೆ

ಮಾಜಿ ಸೈನಿಕರಿಗೆ ಉಚಿತ ಹಾಗೂ ಸಮರ್ಥ ಕಾನೂನು ಸೇವೆ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಅಡಿಯಲ್ಲಿ ಸೈನಿಕರು ಹಾಗೂ ಮಾಜಿ ಸೈನಿಕರು, ವೀರನಾರಿಯರಿಗೆ ಉಚಿತ ಮತ್ತು ಸಮರ್ಥ ಕಾನೂನು ಸೇವೆಯನ್ನು ಒದಗಿಸಲು ವೀರ ಪರಿವಾರ್ ಸಹಾಯಕ ಯೋಜನೆ 2025 ರ ಹೆಸರಿನಲ್ಲಿ ಪ್ರಾರಂಭವಾಗಿರುವ ಸೇವೆಯ ಸದುಪಯೋಗವನ್ನು ಜಿಲ್ಲೆಯ ಸಮಸ್ತ ಸೈನಿಕರು, ಮಾಜಿ ಸೈನಿಕರು ವೀರನಾರಿಯರು ಪಡೆದುಕೊಳ್ಳಬೇಕೆಂದು ಮಹಾಒಕ್ಕೂಟದ ಜಿಲ್ಲಾಧ್ಯಕ್ಷ ಜಗದೀಶ ಪೂಜೇರಿ ತಿಳಿಸಿದ್ದಾರೆ. ಇತ್ತೀಚಿಗೆ ಈ ಸೇವೆಗೆ ಬೆಳಗಾವಿಯ ಸೈನಿಕ …

Read More »