Breaking News

ಮಚ್ಚು ಹಿಡಿದು ಅಡುಗೆ ಭಟ್ಟನನ್ನ ಅಟ್ಟಾಡಿಸಿದ ಹೊಟೇಲ್ ಮ್ಯಾನೇಜರ್

ಬೆಂಗಳೂರು, ಮಾರ್ಚ್​ 06: ಹೋಟೆಲ್​​ನಲ್ಲಿ ಮಚ್ಚು ಹಿಡಿದು ಅಡಿಗೆ ಭಟ್ಟನನ್ನ ಮ್ಯಾನೇಜರ್ (manager)​ ಅಟ್ಟಾಡಿಸಿ ಮಾರಣಾಂತಿಕವಾಗಿ ಹಲ್ಲೆ  (Attack) ಮಾಡಿರುವಂತಹ ಘಟನೆ ಆರ್​​ಟಿ ನಗರದ 80 ಅಡಿ ರಸ್ತೆಯಲ್ಲಿನ ಹೋಟೆಲ್ ಒಂದರಲ್ಲಿ ನಡೆದಿದೆ. ಮಟನ್ ಕಡಿಯುವ ಮಚ್ಚಿನಿಂದ ಸಿಬ್ಬಂದಿ ಅಡುಗೆ ಭಟ್ಟನ ಗುರುಮೂರ್ತಿ ಮೇಲೆ ಮ್ಯಾನೇಜರ್ ಶಜಾದ್ ಅಲಿ ಹಲ್ಲೆ ಮಾಡಿರುವ ಆರೋಪ ಮಾಡಲಾಗಿದೆ. ಸದ್ಯ ಘಟನೆ ಬಗ್ಗೆ ಪೊಲೀಸರು (police) ಮಾಹಿತಿ ಪಡೆದುಕೊಂಡಿದ್ದಾರೆ. ಹುಡುಗಿ ವಿಚಾರಕ್ಕೆ ಗಲಾಟೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಆರ್​​ಟಿ ನಗರ ಠಾಣೆಯಲ್ಲಿ …

Read More »

ಜಾರಿ ನಿರ್ದೇಶನಾಲಯ ಅಧಿಕಾರಿಗಳು ದೇಶಾದ್ಯಂತ ಎಸ್ ಡಿಪಿಐ (ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ) ಕಚೇರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.

ಜಾರಿ ನಿರ್ದೇಶನಾಲಯ ಅಧಿಕಾರಿಗಳು ದೇಶಾದ್ಯಂತ ಎಸ್ ಡಿಪಿಐ (ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ) ಕಚೇರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ನಂಟು ಹೊಂದಿರುವ SDPI ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ದೇಶಾದ್ಯಂತ ಎಸ್ ಡಿಪಿ ಐ ಕಚೇರಿ ಮೇಲೆ ಇಡಿ ದಾಳಿ ನಡೆದಿದೆ. ರಾಜ್ಯ ರಾಜಧಾನಿ ಬೆಂಗಳೂರು, ರಾಷ್ಟ್ರ ರಾಜಧಾನಿ ದೆಹಲಿ, ಮಹಾರಾಷ್ಟ್ರ, ಮುಂಬೈ, ಥಾಣೆ, ಕೇರಳ, …

Read More »

ಯಾವುದೇ ಕಾರಣಕ್ಕೂ ನಗರಸೇವಕ ಶಂಕರ ಪಾಟೀಲಗೆ ಖಾಟಿಕ ಸಮಾಜದ ಜಾಗೆಯನ್ನು ನೀಡಲ್ಲ

ಯಾವುದೇ ಕಾರಣಕ್ಕೂ ನಗರಸೇವಕ ಶಂಕರ ಪಾಟೀಲಗೆ ಖಾಟಿಕ ಸಮಾಜದ ಜಾಗೆಯನ್ನು ನೀಡಲ್ಲ ಸಮುದಾಯ ಭವನ ನಿರ್ಮಿಸದಂತೆ ಗಣಾಚಾರಿ ಗಲ್ಲಿಯ ರಹಿವಾಸಿಗಳಿಂದ ಬೆಳಗಾವಿ ಡಿಸಿಗೆ ಮನವಿ ಬೆಳಗಾವಿ ನಗರದ ಗಣಾಚಾರಿ ಗಲ್ಲಿಯಲ್ಲಿ ಸಮುದಾಯಭವನ ನಿರ್ಮಿಸಲು ಮುಂದಾದ ನಗರಸೇವಕ ಶಂಕರ ಪಾಟೀಲ್ ಅವರ ಧೋರಣೆಯನ್ನು ಖಂಡಿಸಿ ಖಾಟಿಕ ಸಮಾಜದ ಬಕ್ರಿ ಮಂಡಯಿಯ ರಹಿವಾಸಿಗಳು ಇಂದು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು. ಬೆಳಗಾವಿ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಆಗಮಿಸಿದ ಗಣಾಚಾರಿ ಗಲ್ಲಿಯ ಬಕ್ರಿ ಮಂಡಯಿ, ಖಾಟಿಕ …

Read More »

ನಿಪ್ಪಾಣಿಯಲ್ಲಿ 100 ಬೆಡ್’ಗಳ ತಾಲೂಕಾಸ್ಪತ್ರೆ ನಿರ್ಮಿಸಿ…

ನಿಪ್ಪಾಣಿಯಲ್ಲಿ 100 ಬೆಡ್’ಗಳ ತಾಲೂಕಾಸ್ಪತ್ರೆ ನಿರ್ಮಿಸಿ… ಬೆಳಗಾವಿ ಜಿಲ್ಲೆಯ ನೂತನ ತಾಲೂಕು ನಿಪ್ಪಾಣಿಯಲ್ಲಿರುವ ಸಮುದಾಯ ಆರೋಗ್ಯ ಕೇಂದ್ರವನ್ನ ಮೇಲ್ದರ್ಜೆಗೆರಿಸಿ, 100 ಬೆಡ್’ಗಳ ತಾಲೂಕಾ ಆಸ್ಪತ್ರೆಯನ್ನಾಗಿ ಪರಿವರ್ತಿಸಬೇಕೆಂದು ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಅವರು ಸದನದಲ್ಲಿ ಇಂದು ಧ್ವನಿ ಎತ್ತಿದರು. ಇದಕ್ಕೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವರಾದ ಡಾ. ದಿನೇಶ್ ಗುಂಡುರಾವ್ ಆದ್ಯತೆ ಮೇರೆಗೆ ಕ್ರಮಕೈಗೊಳ್ಳಲಾಗುವುದೆಂದು ಭರವಸೆಯನ್ನು ನೀಡಿದರು. ನೂತನ ತಾಲೂಕಾ ರಚನೆಯಾದ ನಿಪ್ಪಾಣಿಯಲ್ಲಿರುವ 30 ಬೆಡ್’ಗಳ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೇಗೆರಿಸಿ …

Read More »

ಖಾನಾಪೂರ ತಾಲೂಕಿನಲ್ಲಿ ಸರಣಿ ಮನೆಗಳ್ಳತನದಿಂದಾಗಿ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.

ಖಾನಾಪೂರ ತಾಲೂಕಿನಲ್ಲಿ ಸರಣಿ ಮನೆಗಳ್ಳತನಬೆಚ್ಚಿ ಬಿದ್ದ ಗ್ರಾಮಸ್ಥರು ಖಾನಾಪೂರ ತಾಲೂಕಿನಲ್ಲಿ ಸರಣಿ ಮನೆಗಳ್ಳತನದಿಂದಾಗಿ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಖಾನಾಪೂರ ತಾಲೂಕಿನ ಭಂಡರಗಾಳಿ,ಬರಗಾಂವ, ಸಣ್ಣ ಹೊಸೂರು, ಗರ್ಲಗುಂಜಿ, ಶೇಡೆಗಾಳಿಯಲ್ಲಿ ಕಳ್ಳರು ಮನೆಗಳ ಬೀಗ್ ಮುರಿದು ತನ್ನ ಕೈಚಳಕ ತೋರಿಸಿ ಬೆಲೆ ಬಾಳುವ ವಸ್ತುಗಳನ್ನು ಕದ್ದೋಯ್ದ ಘಟನೆ ನಡೆದಿದೆ. ಬರಗಾಂವದಲ್ಲಿ ನಾಲ್ಕು ಮನೆಗಳ ಬೀಗಗಳನ್ನು ಮುರಿದ ಕಳ್ಳರು, ಭಂಡರಗಾಳಿಯಲ್ಲಿ ಒಂದು ಮನೆ, ಸಣ್ಣ ಹೊಸೂರಿನಲ್ಲಿ ಎರಡು ಮನೆಗಳನ್ನು ಕಳ್ಳತನ ಮಾಡಿದ್ದಾರೆ. ಆಯಾ ಮನೆಗಳಲ್ಲಿ …

Read More »

ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆ

ಅಪಘಾತಗಳ ತಡೆಗೆ ಸುರಕ್ಷತಾ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ.. ಬೆಳಗಾವಿ: ಜಿಲ್ಲೆಯಲ್ಲಿ ಅಪಘಾತಗಳ ಪ್ರಮಾಣವನ್ನು ತಗ್ಗಿಸಲು ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ನಗರದಲ್ಲಿ ಸಂಚರಿಸುವ ಆಟೋರಿಕ್ಷಾ-ವಾಹನಗಳಿಗೆ ಕಡ್ಡಾಯವಾಗಿ ಬಾಡಿಗೆ ದರ ನಿಗದಿಪಡಿಸಬೇಕು. ಜಿಲ್ಲಾ ಮುಖ್ಯ ರಸ್ತೆಗಳಲ್ಲಿ ಅವೈಜ್ಞಾನಿಕವಾಗಿ ಅಳವಡಿಸಲಾಗಿರುವ ತಡೆಗಳನ್ನು ಕೂಡಲೇ ತೆರವುಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಗುರುವಾರ (ಮಾ.6) ಜರುಗಿದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ …

Read More »

ರಾಜ್ಯ ಸರ್ಕಾರದ ಆಡಳಿತ ವೈಫಲ್ಯ ಖಂಡಿಸಿ ಜೆಡಿಎಸ್‌‌ನಿಂದ ಪ್ರತಿಭಟನೆ

ರಾಜ್ಯ ಸರ್ಕಾರದ ಆಡಳಿತ ವೈಫಲ್ಯ ಖಂಡಿಸಿ ಜೆಡಿಎಸ್‌‌ನಿಂದ ಪ್ರತಿಭಟನೆ ರಾಜ್ಯ ಸರ್ಕಾರದ ಆಡಳಿತ ವೈಫಲ್ಯ ಖಂಡಿಸಿ ಜೆಡಿಎಸ್‌ ಪಕ್ಷದಿಂದ ವಿಜಯಪುರ ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಇಂದು ಜೆಡಿಎಸ್‌ ರಾಜ್ಯವ್ಯಾಪಿ ಪ್ರತಿಭಟನೆ ನಡೆಸುತ್ತಿದ್ದು, ವಿಜಯಪುರ ದಲ್ಲೂ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗೆ ಬಸವೇಶ್ವರ ವೃತ್ತದಿಂದ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಮುಖಂಡರು ಗ್ಯಾರಂಟಿಗಳ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈಗ ಹಣವಿಲ್ಲದೆ …

Read More »

ವಿದ್ಯುತ್ ಕೂಡ ಪ್ರಿಪೇಯ್ಡ್, ಪೋಸ್ಟ್ ಪೇಯ್ಡ್: ಡಿಜಿಟಲ್ ಮೀಟರ್​ಗೆ ಹಣ ಭರಿಸಿದ್ರೆ ಮಾತ್ರ ವಿದ್ಯುತ್ ಪೂರೈಕೆ

ದಾವಣಗೆರೆ: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಸೇರಿದಂತೆ ಆಯಾಯ ವಿದ್ಯುತ್ ಕಂಪನಿಗಳು ಇದೀಗ ಹೊಸ ಡಿಜಿಟಲ್ ವಿದ್ಯುತ್ ಮೀಟರ್ ಜಾರಿ ಮಾಡಲು ಮುಂದಾಗಿವೆ. ಈ ಮೀಟರ್ ಹಳೇ ಮೀಟರ್​ಗಿಂತ ಸ್ವಲ್ಪ ಡಿಫರೆಂಟ್ ಎಂಬಂತೆ ಹಣ ಭರಿಸಿದ್ರೆ ಮಾತ್ರ ಜನರಿಗೆ ವಿದ್ಯುತ್ ಲಭ್ಯವಾಗಲಿದೆ. ಮೊಬೈಲ್​ಗೆ ಯಾವ ರೀತಿ ಹಣ ಭರಿಸುತ್ತೇವೋ ಅದೇ ರೀತಿ ವಿದ್ಯುತ್ ಕೂಡ ಪ್ರಿಪೇಯ್ಡ್, ಪೋಸ್ಟ್ ಪೇಯ್ಡ್ ಮಾದರಿಯಲ್ಲಿ ಹಣ ಭರಿಸಿದ್ರೆ ಮಾತ್ರ ವಿದ್ಯುತ್ ಪೂರೈಕೆ ಆಗಲಿದೆ. ಈಗಾಗಲೇ ಡಿಜಿಟಲ್ …

Read More »

ಸಂಚಾರಿ‌ ನಿಯಮ ಉಲ್ಲಂಘಿಸಿದವರಿಂದ 1,01,23,100 ರೂಪಾಯಿ ದಂಡ ವಸೂಲಿ

ಹುಬ್ಬಳ್ಳಿ: ಸಂಚಾರಿ ನಿಯಮ ಉಲ್ಲಂಘನೆಗೆ ಕಡಿವಾಣ ಹಾಕಲು ದೊಡ್ಡ ಮಟ್ಟದ ದಂಡ ವಿಧಿಸಲಾಗುತ್ತಿದೆ. ಆದ್ರೂ ಕೂಡಾ ವಾಹನ ಸವಾರರು ಎಚ್ಚೆತ್ತುಕೊಳ್ಳುತ್ತಿಲ್ಲ. ಒಂದಿಲ್ಲೊಂದು ಕಾರಣದಿಂದ ನಿಯಮ ಉಲ್ಲಂಘಿಸುವ ಸವಾರರಿಂದ ಎರಡು ತಿಂಗಳಲ್ಲಿ ಕೋಟಿಗಟ್ಟಲೆ ದಂಡವನ್ನು ಹುಬ್ಬಳ್ಳಿ-ಧಾರವಾಡ ಸಂಚಾರಿ ಪೊಲೀಸರು ವಸೂಲಿ ಮಾಡಿದ್ದಾರೆ. ಕಳೆದ ಜನವರಿ ಹಾಗೂ ಫೆಬ್ರವರಿ ತಿಂಗಳಲ್ಲಿ ಅವಳಿ ನಗರದ ಪೊಲೀಸರು, ಸಂಚಾರಿ‌ ನಿಯಮ ಉಲ್ಲಂಘನೆಯಿಂದ 1,01,23,100 ರೂಪಾಯಿ ದಂಡ ವಸೂಲಿ ಮಾಡಿದ್ದಾರೆ. ಮದ್ಯ ಸೇವಿಸಿ ವಾಹನ ಚಾಲನೆ, ಏಕಮುಖ ಸಂಚಾರ …

Read More »

ಕೇಂದ್ರ ಸರ್ಕಾರವು ಬದ್ಧತೆ ತೋರಿದರೆ ರಾಜ್ಯದಲ್ಲಿ ವಯೋ ವಂದನ ಯೋಜನೆಯನ್ನು ಜಾರಿಗೊಳಿಸುತ್ತೇವೆ.:ದಿನೇಶ್ ಗುಂಡೂರಾವ್

ಬೆಂಗಳೂರು: ಹಣ ರಾಜ್ಯ ಸರ್ಕಾರದ್ದು, ಹೆಸರು ಕೇಂದ್ರ ಸರ್ಕಾರದ್ದು ಎಂದಾದರೆ ಆರೋಗ್ಯ ಯೋಜನೆಗಳನ್ನು ಅನುಷ್ಠಾನಗೊಳಿಸುವುದಕ್ಕೆ ನಮ್ಮ ಒಪ್ಪಿಗೆ ಇಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿಧಾನಸಭೆಯಲ್ಲಿ ತಿಳಿಸಿದರು. ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಆಯುಷ್ಮಾನ್ ಭಾರತ – ಕರ್ನಾಟಕ ಯೋಜನೆಯ ಕೇಂದ್ರದ ಪಾಲು ಹೆಸರಿಗಷ್ಟೇ ಎಂಬಂತಾಗಿದೆ. ಕರ್ನಾಟಕವು ಶೇ.75ರಷ್ಟು ಪಾಲನ್ನು ಕೊಡುತ್ತಿದ್ದರೆ ಕೇಂದ್ರ ಕೇವಲ ಶೇ.25ರಷ್ಟನ್ನು ಮಾತ್ರ ಭರಿಸುತ್ತಿದೆ. ಕೇಂದ್ರವು ತನ್ನ ಪಾಲಿನ ಶೇ.60ರಷ್ಟು …

Read More »