Breaking News

ಜಿಬಿಎ ಚುನಾವಣೆ ನಡೆಸುವಂತೆ ರಾಜ್ಯಪಾಲರಿಗೆ ಜೆಡಿಎಸ್ ನಿಯೋಗ ದೂರು

ಬೆಂಗಳೂರು: ಜಿಬಿಎ  ಚುನಾವಣೆ ನಡೆಸುವಂತೆ ರಾಜ್ಯಪಾಲರಿಗೆ ಜೆಡಿಎಸ್  ಕಾನೂನು ಘಟಕದಿಂದ ದೂರು ನೀಡಲಾಗಿದೆ. ಜೆಡಿಎಸ್ ಕಾನೂನು ಘಟಕದ ಅಧ್ಯಕ್ಷ ಎ.ಪಿ ರಂಗನಾಥ್ ನೇತೃತ್ವದಲ್ಲಿ ದೂರು ಸಲ್ಲಿಕೆ ಮಾಡಲಾಗಿದ್ದು, ಜಿಬಿಎ ಚುನಾವಣೆ ನಡೆಸಲು ಸರ್ಕಾರಕ್ಕೆ ಸೂಚನೆ ನೀಡುವಂತೆ ರಾಜ್ಯಪಾರಿಗೆ ಮನವಿ ಮಾಡಿದ್ದಾರೆ. ಬಳಿಕ ಮಾತನಾಡಿದ ರಂಗನಾಥ್, ಕೋರ್ಟ್ ಆದೇಶ ಇದ್ದರೂ ಕೂಡಾ ರಾಜ್ಯ ಸರ್ಕಾರ ಉದ್ದೇಶ ಪೂರ್ವಕವಾಗಿ ಜಿಬಿಎ ಚುನಾವಣೆ ಮುಂದೂಡಿಕೆ ಮಾಡುತ್ತಿದೆ. ಬೆಂಗಳೂರು ಜನರ ಕಷ್ಟ ಕೇಳುವವರಿಲ್ಲ. ಸ್ಥಳೀಯ ಸಂಸ್ಥೆಯಲ್ಲಿ …

Read More »

ನೇಮಕಾತಿಗಳಲ್ಲಿ ಒಳಮೀಸಲಾತಿ ಜಾರಿಗೊಳಿಸಿ ಸರ್ಕಾರ ಆದೇಶ

ಬೆಂಗಳೂರು: ನೇಮಕಾತಿಗಳಲ್ಲಿ ಒಳಮೀಸಲಾತಿ ಜಾರಿಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಶೇ.17ರಿಂದ ಶೇ.15ಕ್ಕೆ ಸೀಮಿತಗೊಳಿಸಿ ಒಳಮೀಸಲಾತಿ ಜಾರಿಗೊಳಿಸಲಾಗಿದೆ. ಮೊನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಎಸ್‌ಸಿ 101 ಉಪಜಾತಿಗಳಿಗೆ ಸರ್ಕಾರ ಒಳಮೀಸಲಾತಿ ಹಂಚಿಕೆ ಮಾಡಿತ್ತು. ಈ ಕೂಡಲೇ 56,432 ಹುದ್ದೆಗಳಿಗೆ ನೇರ ನೇಮಕಾತಿ ಕೈಗೊಳ್ಳಲು ಕ್ರಮ ವಹಿಸುವಂತೆ ನೇಮಕಾತಿ ಪ್ರಾಧಿಕಾರ, ಇಲಾಖೆಗಳಿಗೆ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಈ ಹಿಂದೆ ಹೊರಡಿಸಿದ ನೇಮಕಾತಿ ಆದೇಶಗಳನ್ನು ಹಿಂಪಡೆದು ಹೊಸ ಅಧಿಸೂಚನೆಗಳನ್ನು …

Read More »

ಬಾಗಲಕೋಟೆ: ಬಾವಿಗೆ ಬಿದ್ದು ವ್ಯಕ್ತಿ ದಾರುಣ ಸಾವು – ಗಿಡ ಕತ್ತರಿಸುವಾಗ ತಪ್ಪಿದ ಆಯ

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನಲ್ಲಿ ದುರದೃಷ್ಟಕರ ಘಟನೆಯೊಂದು ನಡೆದಿದೆ. ಬಾವಿಯ ಪಕ್ಕದಲ್ಲಿದ್ದ ಗಿಡವನ್ನು ಕತ್ತರಿಸುತ್ತಿದ್ದ ವ್ಯಕ್ತಿಯೊಬ್ಬ ಆಯತಪ್ಪಿ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ. ಅಗ್ನಿಶಾಮಕ ದಳದವರು ಮೃತದೇಹವನ್ನು ಹೊರತೆಗೆದಿದ್ದು, ಸ್ಥಳದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಬಾದಾಮಿ ತಾಲೂಕಿನ ಮುಷ್ಠಿಗೇರಿ ಗ್ರಾಮದಲ್ಲಿ ಸೋಮಲಿಂಗಪ್ಪ ದ್ಯಾಮಣ್ಣವರ್ (50) ಎಂಬವರು ಬಾವಿಗೆ ಬಿದ್ದು ಸಾವನ್ನಪ್ಪಿದ ದುರ್ದೈವಿ. ಸೋಮಲಿಂಗಪ್ಪ ಅವರು ಆಳವಾದ ಬಾವಿಯ ಪಕ್ಕದಲ್ಲಿದ್ದ ಗಿಡವನ್ನು ಕತ್ತರಿಸಲು ಪ್ರಯತ್ನಿಸುತ್ತಿದ್ದಾಗ, ಆಯತಪ್ಪಿ ಬಾವಿಯೊಳಗೆ ಬಿದ್ದಿದ್ದಾರೆ ಎಂದು ಶಂಕಿಸಲಾಗಿದೆ. ವಿಷಯ …

Read More »

ಇಂಗಳೇಶ್ವರದಿಂದ ಬಿಸನಾಳಕ್ಕೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಹಾಳು; ಎಚ್ಚರಿಕೆ ನೀಡಿದ ರೈತರು

ವಿಶ್ವಗುರು ಬಸವಣ್ಣನವರ ಜನ್ಮಭೂಮಿ ಇಂಗಳೇಶ್ವರದಿಂದ ಬಿಸನಾಳಕ್ಕೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಸಾರ್ವಜನಿಕರು ಹಾಗೂ ರೈತರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಆರೋಪಿಸಿದರು. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅಖಂಡ ಕರ್ನಾಟಕ ರೈತಸಂಘದ ವತಿಯಿಂದ ಪತ್ರಿಕಾಗೋಷ್ಠಿ ಯಲ್ಲಿ‌ ಮಾತನನಾಡಿದ ಅವರು ಮಳೆಗಾಲದಲ್ಲಿ ರಸ್ತೆ ಕೆಸರು ಗದ್ದೆಯಾಗಿ ಮಾರ್ಪಡುವುದರಿಂದ ರೈತರು, ವಾಹನ ಸವಾರರು ಹಾಗೂ ಗ್ರಾಮಸ್ಥರು …

Read More »

ಚಲಿಸುವ ರೈಲಿನಿಂದ ಬಿದ್ದ ಮಗು: ಚೈನ್ ಎಳೆದರೂ ನಿಲ್ಲದ ರೈಲು, ರೈಲ್ವೆ ಇಲಾಖೆ ವಿರುದ್ಧ ಪ್ರಯಾಣಿಕರ ತೀವ್ರ ಆಕ್ರೋಶ!

​ಕೋಲ್ಕತಾ: ಭಾರತೀಯ ರೈಲ್ವೆಯ ಭದ್ರತೆ ಮತ್ತು ತುರ್ತು ಸೇವೆಗಳ ಕಾರ್ಯಕ್ಷಮತೆಯನ್ನು ಪ್ರಶ್ನಿಸುವಂತಹ ಆಘಾತಕಾರಿ ಘಟನೆಯೊಂದು ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಚಲಿಸುತ್ತಿದ್ದ ರೈಲಿನಿಂದ ಮಗುವೊಂದು ಕೆಳಗೆ ಬಿದ್ದರೂ, ಪ್ರಯಾಣಿಕರು ಎಷ್ಟೇ ಬಾರಿ ತುರ್ತು ಚೈನ್ ಎಳೆದರೂ ರೈಲು ನಿಲ್ಲದೆ ಕಿಲೋಮೀಟರ್‌ಗಟ್ಟಲೆ ಮುಂದೆ ಸಾಗಿದ ಘಟನೆ ಜಲ್ಪೈಗುರಿ-ರಾಮನಗರ ಮಾರ್ಗದಲ್ಲಿ ಸಂಭವಿಸಿದೆ. ​ಘಟನೆಯ ವಿವರ: ​ಪಶ್ಚಿಮ ಬಂಗಾಳದ ಜಲ್ಪೈಗುರಿ ಮತ್ತು ರಾಮನಗರ ನಡುವೆ ರೈಲು ಸಂಚರಿಸುತ್ತಿದ್ದಾಗ, ತಾಯಿಯ ಕೈಯಲ್ಲಿದ್ದ ಮಗು ಆಕಸ್ಮಿಕವಾಗಿ ಜಾರಿ ಕೆಳಗೆ …

Read More »

ಟ್ಯಾಂಕ‌ರ್ ಮೂಲಕ ನೀರು ಪೂರೈಸಿ,ಅಧಿಕಾರಿಗಳಿಗೆ ಶಾಸಕ ಐಹೊಳೆ ಸೂಚನೆ

ಚಿಕ್ಕೋಡಿ: ನಾಗರಮುನ್ನೋಳಿ ಹೋಬಳಿಯ ವ್ಯಾಪ್ತಿಯ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಅವಶ್ಯವಿದ್ದಲ್ಲಿ ಕೊಳವೆಬಾವಿ ಇನ್ನುಳಿದೆಡೆ ಟ್ಯಾಂಕ‌ರ್ ಮೂಲಕ ಜನರಿಗೆ ನೀರು ಪೂರೈಸಬೇಕು ಎಂದು ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಅಧಿಕಾರಿಗಳಿಗೆ ಸೂಚಿಸಿದರು. ಚಿಕ್ಕೋಡಿ ಪಟ್ಟಣದ ಮಿನಿವಿಧಾನಸೌಧದ ಸಭಾಭವನದಲ್ಲಿ ತಾಲ್ಲೂಕಿನ‌ ನಾಗರಮುನ್ನೋಳಿ ಹೋಬಳಿ ವ್ಯಾಪ್ತಿಯ ಕುಡಿಯುವ ನೀರು, ಮೇವು ಪೂರೈಕೆ ಹಾಗೂ ಹವಾಮಾನ ವೈಪರಿತ್ಯ ಕುರಿತು ಕರೆದ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹೋಬಳಿ ವ್ಯಾಪ್ತಿಯ ಜೈನಾಪೂರ …

Read More »

ಮಾನವೀಯತೆ ಮೆರೆದ ಸಿಪಿಐ ಜಾವೀದ್ ಮುಶಾಪುರೆ: ವೃದ್ಧನಿಗೆ ಮತ್ತೆ ಆಸರೆಯಾದ ವೃದ್ಧಾಪ್ಯ ವೇತನ!

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಮೋದಗಾ ಗ್ರಾಮದ 80 ವರ್ಷದ ವೃದ್ಧನೊಬ್ಬನ ಕಣ್ಣೀರ ಕಥೆಗೆ ಯಮಕನಮರ್ಡಿ ಸಿಪಿಐ ಜಾವೀದ್ ಮುಶಾಪುರೆ ಅವರು ಆಸರೆಯಾಗಿದ್ದಾರೆ. ಕಳೆದ ಐದು ವರ್ಷಗಳಿಂದ ಸ್ಥಗಿತಗೊಂಡಿದ್ದ ಪಿಂಚಣಿ ಹಣವನ್ನು ಪೋಲಿಸ್ ಅಧಿಕಾರಿಗಳ ಮುತುವರ್ಜಿಯಿಂದಾಗಿ ಮತ್ತೆ ದೊರೆಯುವಂತಾಗಿದ್ದು, ಇಲಾಖೆಯ ಈ ಮಾನವೀಯ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಮೋದಗಾ ಗ್ರಾಮದ ನಿವಾಸಿ 80 ವರ್ಷದ ಪುಂಡಲಿಕ ಜೋತೆಪ್ಪ ಲೋಹಾರ್ ಎಂಬುವವರು ಕಳೆದ ಹಲವು …

Read More »

ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ವ್ಯಕ್ತಿ ಸಾವು; ಬಿಸಿಲಿಗೆ ಕುಸಿದು ಬಿದ್ದಿರುವ ಶಂಕೆ

ರಾಯಚೂರು: ಉದ್ಯೋಗ ಖಾತ್ರಿ ಕೆಲಸಕ್ಕೆ ಹೋಗಿ ಮನೆಗೆ ಮರಳುವ ವೇಳೆ ವ್ಯಕ್ತಿಯೊಬ್ಬರು ದಾರಿಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ರಾಯಚೂರು ತಾಲೂಕಿನ ಯಾಪಲದಿನ್ನಿ ಗ್ರಾಮದಲ್ಲಿ ನಡೆದಿದೆ. ಹುಸೇನಪ್ಪ ಮಡಿವಾಳ್ (45) ಮೃತ ವ್ಯಕ್ತಿ. ಬಿಸಿಲಿನ ತಾಪಮಾನಕ್ಕೆ ದಣಿದು, ವಿಶ್ರಾಂತಿ ಸಿಗದೆ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಯಾಪಲದಿನ್ನಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಉದ್ಯೋಗ ಖಾತ್ರಿ ಕೆಲಸಕ್ಕೆ ಹೋಗಿದ್ದ ಹುಸೇನಪ್ಪ ಕೆಲಸ ಮುಗಿಸಿ ಮಧ್ಯಾಹ್ನ ಮನೆಗೆ ಬರುವಾಗ ದಾರಿಯಲ್ಲಿ ಕುಸಿದು ಬಿದ್ದಿದ್ದಾರೆ. …

Read More »

ಪೊಲೀಸ್ ಪೇದೆ ಮದುವೆಗೆ ಮುಧೋಳಕ್ಕೆ ಓಡೋಡಿ ಬಂದ ರಾಜ್ಯಪಾಲ ಗೆಹ್ಲೋಟ್…!

ಬೆಳಗಾವಿ : ಸದಾಕಾಲವೂ ತಮ್ಮ ಬೆನ್ನೆಲುಬಾಗಿ ನಿಂತು‌ ಭದ್ರತೆ ಒದಗಿಸುವ ಸಿಬ್ಬಂದಿ ಮದುವೆಗೆ ರಾಜ್ಯಪಾಲರು ಓಡೋಡಿ ಬಂದು ಆಶಿರ್ವದಿಸಿದ ಅಪರೂಪದ ಘಟನೆ ನಡೆದಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಭದ್ರತಾ ಸಿಬ್ಬಂದಿ ಪೊಲೀಸ್ ಕಾನ್ಸ್ಟೇಬಲ್ ಪರಮಾನಂದ ‌ಮಂಟೂರ್ ಮದುವೆ ಕಾರ್ಯಕ್ರಮಕ್ಕೆ ಸ್ವತಃ ರಾಜ್ಯಪಾಲರೇ ಆಗಮಿಸಿ ಶುಭಾಶಯ ತಿಳಿಸಿದ ಅಪರೂಪದ ‌ಘಟನೆ ಕಳೆದ ಶನಿವಾರ ನಡೆದಿದೆ. ಮುಧೋಳ ‌ಪಟ್ಟಣದಲ್ಲಿ ನಡೆದ ಪರಮಾನಂದ ಮಂಟೂರ್ ಅವರ ಮದುವೆ ಸಮಾರಂಭಕ್ಕೆ ಬೆಂಗಳೂನಿಂದ ಬೆಳಗಾವಿಗೆ …

Read More »

ಟಿಳಕವಾಡಿ ರೈಲ್ವೆ ಗೇಟ್ ಬಳಿಯ ಬ್ಯಾರಿಕೇಡ್ ತೆರವಿಗೆ ಗೃಹಸಚಿವರಿಗೆ ಮನವಿ

ಬೆಳಗಾವಿಯ ಟಿಳಕವಾಡಿಯ ಮೊದಲ ರೈಲ್ವೆ ಗೇಟ್ ಬಳಿ ಅಳವಡಿಸಲಾಗಿರುವ ಬ್ಯಾರಿಕೇಡ್‌ಗಳಿಂದ ಉಂಟಾಗುತ್ತಿರುವ ಸಮಸ್ಯೆಗಳ ಕುರಿತು ‘ಬ್ಯಾರಿಕೇಡ್ ಹಠಾವೊ ಸಂಘಟನೆ’ಯು ಗೃಹಸಚಿವ ಡಾ. ಜಿ. ಪರಮೇಶ್ವರ್ ಅವರಿಗೆ ಮನವಿ ಸಲ್ಲಿಸಿತು. ಗೃಹಸಚಿವರು ಬೆಳಗಾವಿ ಪ್ರವಾಸದಲ್ಲಿದ್ದ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷರಾದ ಸುಭಾಷ್ ಘೋಲಪ್ ಅವರು ಸಚಿವರನ್ನು ಭೇಟಿ ಮಾಡಿದರು. ಈ ಪ್ರದೇಶದ ಬ್ಯಾರಿಕೇಡ್‌ಗಳನ್ನು ಕೂಡಲೇ ತೆರವುಗೊಳಿಸಿ, ಇಬ್ಬರು ಪೊಲೀಸರನ್ನು ನಿಯೋಜಿಸಬೇಕು ಹಾಗೂ ಖಾಸಗಿ ಸಂಕೀರ್ಣದ ಮುಂದಿರುವ ಅಡೆತಡೆಗಳನ್ನು ನಿವಾರಿಸಬೇಕು ಎಂದು ಸುಭಾಷ್ ಘೋಲಪ್ …

Read More »