ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಶೆಡಬಾಳ, ಲೊಕುರ, ಉಗಾರ ಹಾಗೂ ಕೌಲಗುಡ್ಡ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಅಕ್ರಮ ಮಣ್ಣು ಹಾಗೂ ಕಲ್ಲು ಗಣಿಗಾರಿಕೆ ದಂದೇಗಿಳಿದ ದಂದೇಕೊರರು ಸರ್ಕಾರಿ ಜಮಿನನ್ನು ಅಗೆದು ದುಭಾರಿ ಹಣಕ್ಕೆ ಮಾರಾಟ ಮಾಡಿ ಹಣಗಳಿಕೆ ಮಾಡುತ್ತಿದ್ದಾರೆ
ಕೋರೊನ ಲಾಕ್ ಡೌನ್ ಇರುವ ಕಾರಣಕ್ಕೆ ಪೋಲಿಸ್ ಹಾಗೂ ತಾಲ್ಲೂಕು ಆಡಳಿತಾಧಿಕಾರಿಗಳು ರೋಗ ನಿಯಂತ್ರಣ ಮಾಡುವಲ್ಲಿ ಶ್ರಮಪಡುತ್ತಿದ್ದರೆ ಇಲ್ಲಿ ದಂದೇಕೊರರು ಇತ ಕಡೆ ಯಾರು ಬಾರದೇ ಇರುವ ಲಕ್ಷಣಗಳು ಕಂಡಕೊಡಲೇ ದಿನಾಲು ಫಲವತ್ತಾದ ಜಮೀನಿನಲ್ಲಿ ಮಣ್ಣು ಮತ್ತು ಕಲ್ಲು ಲೂಟಿ ಮಾಫಿಯಾ ನಡೆದಿದೆ. ಗ್ರಾಮಸ್ಥರು ಸ್ಥಳಿಯ ಗ್ರಾಮ ಲೇಕ್ಕಾಧಿಕಾರಿಗಳ ಗಮನಕ್ಕೆ ಇದ್ದರೂ ಕೊಡ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಕಾರಣ ಇವರ ಕುಮಕು ಇದ್ದಂತೆ ಮೇಲನೊಟಕ್ಕೆ ಎದ್ದು ಕಾಣುತ್ತಿದೆ, ಇನ್ನಾದರೂ ತಾಲ್ಲೂಕು ಆಡಳಿತ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಇತ ಕಡೆ ಗಮನಹರಿಸಿ ಸರ್ಕಾರದ ಬೊಕಸವನ್ನು ಲೂಟಿ ಮಾಡುತ್ತಿರುವ ಮಣ್ಣು ಮತ್ತು ಕಲ್ಲು ಮಾಪಿಯಾ ದಂಧೆಕೋರರನ್ನು ಮಟ್ಟ ಹಾಕೆ ಬೇಕೆಂದು ಸ್ಥಳಿಯರು ಒತ್ತಾಯಿಸಿದ್ದಾರೆ.
ಬೈಟ್: ಚಂದ್ರಕಾಂತ ಹುಕ್ಕೇರಿ, ಸಮಾಜ ಕಾರ್ಯಕರ್ತ
Laxmi News 24×7