Breaking News

ಬಸವನಗೌಡ ತುರುವೀಹಾಳಗೆ ಗೆಲುವಿನ ಮಾಲೆ ಹಾಕಿದ ಮಸ್ಕಿ ಮತದಾರ : ಬಿವೈ.ವಿಜಯೇಂದ್ರಗೆ ಭಾರಿ ಮುಖಭಂಗ

Spread the love

ಮಸ್ಕಿ : ಇಂದು ನಡೆಯುತ್ತಿರುವಂತ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತಏಣಿಕೆ ಕಾರ್ಯ ನಡೆಯುತ್ತಿದೆ. ಇದುವರೆಗೆ ನಡೆದಂತ ಮತಏಣಿಕೆ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರುವಿಗಾಳ್ ಗೆಲುವಿನತ್ತ ಸಾಗಿದ್ದಾರೆ. ಈ ಮೂಲಕ ಮಸ್ಕಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗೆಲವು ಖಚಿತಗೊಂಡಂತೆ ಆಗಿದೆ.

ಇಂದು ಮಸ್ಕಿ ಉಪ ಚುನಾವಣೆಗೆ ನಡೆದಂತ ಚುನಾವಣೆಯ ಮತಏಣಿಕೆ ಕಾರ್ಯ ನಡೆಯುತ್ತಿದೆ. ಇಂತಹ ಮತಏಣಿಕೆಯಲ್ಲಿ ಮಸ್ಕಿಯ ಮತದಾರರು ಬಸವನಗೌಡ ತುರುವೀಹಾಳಗೆ ಗೆಲುವಿನ ಮಾಲೆ ಹಾಕಿದ್ದಾರೆ. 26,000 ಮತಗಳ ಅಂತರದಲ್ಲಿ ಬಸವನಗೌಡ ತುರುವೀಹಾಳಗೆ ಗೆಲುವು ಬಹುತೇಕ ಖಚಿತವಾಗಿದೆ. ಈ ಮೂಲಕ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಗೆ ಭಾರೀ ಮುಖಭಂಗ ಉಂಟಾಗಿದೆ.

ಅಂದಹಾಗೇ, ಮಸ್ಕಿ ಉಪ ಚುನಾವಣೆಯಲ್ಲಿ ಬಿಜೆಪಿ ಯುವ ಚಾಣಕ್ಯ ಎಂದು ಬಿಂಬಿತವಾಗಿದ್ದ ಬಿ.ವೈ. ವಿಜಯೇಂದ್ರ ಮುಂಚೂಣಿಯಲ್ಲಿ ಹೊಣೆಗಾರಿಕೆ ಹೊತ್ತು ಮತಭೇಟೆ ನಡೆಸಿದ್ದರು. ಬಿಜೆಪಿಯ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಪರವಾಗಿ ಮತಯಾಚನೆ ಮಾಡಿದ್ದರು. ಈ ಹಿಂದಿನ ಉಪ ಚುನಾವಣೆಯಂತೆ, ಬಿಜೆಪಿಗೆ ಗೆಲುವಿನ ನಗೆ ಬೀರಲು ಶ್ರಮವಹಿಸಿದ್ದರು. ಆದ್ರೇ ಬಿಜೆಪಿಯ ಯುವ ಚಾಣಕ್ಯ ಎಂದೇ ಬಿಂಬಿತವಾಗಿದ್ದಂತ ಬಿವೈ ವಿಜಯೇಂದ್ರಗೆ ಬಿಜೆಪಿ ಅಭ್ಯರ್ಥಿ ಸೋಲಿನತ್ತ ಸಾಗುವ ಮೂಲಕ ಭಾರೀ ಮುಖಭಂಗ ಉಂಟಾಗುತ್ತಿದೆ.


Spread the love

About Laxminews 24x7

Check Also

ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಇಲ್ಲಿನ ತಾಲೂಕು ಆಡಳಿತಗಳು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿವೆ.

Spread the loveಶಿವಮೊಗ್ಗ/ಉತ್ತರಕನ್ನಡ: ರಾಜ್ಯದ ಮಲೆನಾಡು ಭಾಗದ ಹಲವೆಡೆ ಮತ್ತೆ ಮಳೆಯ ಆರ್ಭಟ ಮುಂದುವರೆದಿದೆ. ಭಾರಿ ವರ್ಷಧಾರೆ ಹಿನ್ನೆಲೆಯಲ್ಲಿ ಶಿವಮೊಗ್ಗ ಹಾಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ