Breaking News

ರಮೇಶ್ ಜಾರಕಿಹೊಳಿಯವರಿಂದ ತೆರವಾದ ಸ್ಥಾನವನ್ನ ಅವರ ಕುಟುಂಬಸ್ಥರಿಗೆ ಕೊಡಬೇಕು,: ಮಹೇಶ್ ಕುಮಟಳ್ಳಿ

Spread the love

ಬೆಂಗಳೂರು : ರಮೇಶ್ ಜಾರಕಿಹೊಳಿ ದೈವ ಭಕ್ತರು, ಆದ್ರೆ ಯಾಕೆ ಹೀಗೆ ಆಗಿದೆ ಗೊತ್ತಾಗ್ತಿಲ್ಲ ಎಂದು ಶಾಸಕ ಮಹೇಶ್ ಕುಮಟಳ್ಳಿ ಹೇಳಿಕೆ ನೀಡಿದ್ದಾರೆ.

ವಿಡಿಯೋದಲ್ಲಿನ ದೃಶ್ಯಾವಳಿಗಳನ್ನ ನೋಡಿದ್ರೆ ಎಲ್ಲೂ ಬಲತ್ಕಾರದ ರೀತಿ ಗೊತ್ತಾಗ್ತಿಲ್ಲ. ಇದು ಪ್ರೀ ಪ್ಲಾನ್ ಅನ್ನೋದು ಗೊತ್ತಾಗ್ತಿದೆ. ಸಿಡಿ ಫೇಕ್ ಆಗಿರಲಿ ಅಥವಾ ಅವರಿಬ್ಬರು ಪ್ರಬುದ್ಧರಿದ್ದು ನಡೆದಿದ್ದೇ ಇರಲಿ, ಅದು ಸ್ವಯಂ ಪ್ರೇರಣೆ ಅನ್ನೋದನ್ನ ನಾವೂ ಗಮನಿಸಿದ್ದೇವೆ. ಹೀಗಾಗಿ ಇದು ಹನಿಟ್ರ್ಯಾಪ್ ಎಂದು ಹೇಳಿದ್ದಾರೆ.

ಇನ್ನು ರಮೇಶ್ ಜಾರಕಿಹೊಳಿಯಿಂದ ತೆರವಾದ ಸಚಿವ ಸ್ಥಾನದ ಭರ್ತಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಮಹೇಶ್, ರಮೇಶ್ ಜಾರಕಿಹೊಳಿಯವರಿಂದ ತೆರವಾದ ಸ್ಥಾನವನ್ನ ಅವರ ಕುಟುಂಬಸ್ಥರಿಗೆ ಕೊಡಬೇಕು, ಬೇರೆ ಯಾರು ಕೂಡ ಕೇಳುವುದು ಸೂಕ್ತ ಅಲ್ಲ, ಬಾಲಚಂದ್ರ ಜಾರಕಿಹೊಳಿಗೆ ನೀಡುವುದು ಸೂಕ್ತ ಎಂದು ಹೇಳಿದ್ದಾರೆ.


Spread the love

About Laxminews 24x7

Check Also

ಪ್ರತಿ ಟನ್ ಕಬ್ಬಿಗೆ​​ ಹೆಚ್ಚುವರಿ 50 ರೂ. ಕೊಡಲು ಸಾಧ್ಯವಿಲ್ಲ: ಸಕ್ಕರೆ ಮಿಲ್ಸ್ ಸಂಘಟನೆ ಅಧ್ಯಕ್ಷ

Spread the loveಬೆಂಗಳೂರು: ಪ್ರತಿ ಟನ್ ಕಬ್ಬಿಗೆ 3,200 ರೂ.‌ ಕೊಡಲು ಮಾತ್ರ ಸಾಧ್ಯ. 3,250 ರೂ. ಕೊಡುವುದು ಸಾಧ್ಯವಿಲ್ಲ ಎಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ