ಅಧಿಕಾರಿಗಳು ಕುಳಿತುಕೊಳ್ಳುವ ಕುರ್ಚಿ ಕಾಲಿಗೆ ಪಾದ ಪೂಜೆ ಮಾಡಿ ವಿನೂತನವಾಗಿ ಪ್ರತಿಭಟನೆ

Spread the love

ಜಮಖಂಡಿ:   ಭ್ರಷ್ಟಚಾರ ವಿರೋಧಿಸಿ ನಗರದ ಸಹಾಯಕ  ಪ್ರದೇಶಿಕ ಸಾರಿಗೆ ಇಲಾಖೆ ಕಚೇರಿಯಲ್ಲಿ ವ್ಯಕ್ತಿಯೊಬ್ಬ ಅಧಿಕಾರಿಗಳು ಕುಳಿತುಕೊಳ್ಳುವ ಕುರ್ಚಿ ಕಾಲಿಗೆ ಪಾದ ಪೂಜೆ ಮಾಡಿ ವಿನೂತನವಾಗಿ ಪ್ರತಿಭಟನೆ ಮಾಡಿದ ಘಟನೆ  ಬುಧವಾರ ನಡೆದಿದೆ.

ನಗರದ ಆರ್​ಟಿಒ ಕಚೇರಿಯಲ್ಲಿ ವ್ಯಾಪಕವಾಗಿ ಭ್ರಷ್ಟಾಚಾರ  ನಡೆಯುತ್ತಿದೆ ಎಂಬ ಆರೋಪ ಕೇಳಿ ಬರುತ್ತಿರುವ ಹಿನ್ನೆಲೆ ಸಂತೋಷ ಚನಾಳ ಎಂಬಾತ ಹಲವು ಬಾರಿ ಪ್ರತಿಭಟನೆ ನಡೆಸಿದ್ದ,  ಆತನ ಹೋರಾಟಕ್ಕೆ ಫಲ ಸಿಗದರಿಂದ ವಿನೂತನವಾಗಿ ಪ್ರತಿಭಟನೆ ನಡೆಸಿ ಅಧಿಕಾರಿಗಳ ಗಮನ ಸೆಳೆದಿದ್ದಾನೆ.

 ಬೈಕ್ ಶೋರೂಮ್​​​ಗಳಲ್ಲಿ ತಾತ್ಕಾಲಿಕ ನೀಡುವ ಪರವಾನಿಗೆಗೆ ಸರ್ಕಾರದಿಂದ 160 ರೂ.ಶುಲ್ಕ. ಇದೆ. ಆದ್ರೆ ಶೋರೂಮ್ ಇದಕ್ಕೆ 1,050 ರೂಪಾಯಿ ಪಡೆದುಕೊಳ್ಳುತ್ತಿದೆ.   ಪ್ರಾದೇಶಿಕ ಸಹಾಯಕ ಸಾರಿಗೆ ಇಲಾಖೆಯ ಅಧಿಕಾರಿ ಸೇರಿ ಸಿಬ್ಬಂದಿ  ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಅಂತಾ ಸಂತೋಷ ಆರೋಪಿಸಿದ್ದಾರೆ.

ಇಂದು ಅಧಿಕಾರಿ ಗೈರಾಗಿದ್ದ ಹಿನ್ನೆಲೆ.  ಅಧಿಕಾರಿ ಕುಳಿತುಕೊಳ್ಳುವ ಕುರ್ಚಿಗೆ ವಿಶೇಷ ರೀತಿಯ  ಪಾದಪೂಜೆ ಮಾಡಿ ಭ್ರಷ್ಟಾಚಾರದ ವಿರುದ್ದ ಪ್ರತಿಭಟನೆ ನಡೆಸಿ ಸಂತೋಷ ಗಮನ ಸೆಳೆದಿದ್ದಾರೆ.


Spread the love

About Laxminews 24x7

Check Also

ಉದ್ಯೋಗ ಭೇಟೆಗೆ ಸ್ಪರ್ಧಾತ್ಮಕ ತಯಾರಿ ಅಸ್ತ್ರವಿದ್ದಂತೆ

Spread the loveಬಾಗಲಕೋಟೆ : ಇವತ್ತಿನ ವಿದ್ಯಾರ್ಥಿ ನಾಳಿನ ಸ್ಪರ್ಧಾರ್ಥಿ ಮುಂದಿನ ಅಧಿಕಾರಿಗಳಾಗಲು ಸ್ಪರ್ಧಾತ್ಮಕ ಪರೀಕ್ಷೆ ಅಗತ್ಯ. ಪರೀಕ್ಷೆಯಲ್ಲಿ ಭೂಗೋಳಶಾಸ್ತ್ರಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ