ಧಾರವಾಡದಕ್ಲಿ ಸಾರ್ವಜನಿಕ ಗಣೇಶನ ಮೂರ್ತಿಗಳ ದರ್ಶನ ಪಡೆದ ಕೇಂದ್ರ ಸಚಿವ ಜೋಶಿ…. ವಿಘ್ನ ನಿವಾರಕ ಮೂರ್ತಿಗೆ ಆರತಿ ಬೆಳಗಿ ಪೂಜೆ ಸಲ್ಲಿಸಿದ ಜೋಶಿ.
– ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಭಾನುವಾರ ತಡ ಸಂಜೆ ಧಾರವಾಡ ನಗರದ ಐದಕ್ಕೂ ಹೆಚ್ಚು ಸಾರ್ವಜನಿಕ ಗಣೇಶನ ದರ್ಶನ ಪಡೆದುಕೊಂಡು, ವಿಶೇಷ ಪೂಜೆ ಸಲ್ಲಿಸಿ ವಿಘ್ನ ನಿವಾರಕನ ಕೃಪೆಗೆ ಪಾತ್ರರಾದರು.
ವೈ- ಧಾರವಾಡದ ಟಿಕಾರೆ ರೋಡ್ ಗಣಪತಿ, ಸುಭಾಸ್ ರಸ್ತೆ, ಹೆಬ್ಬಳ್ಳಿ ಅಗಸಿ ಸೇರಿ ಹಲವು ಕಡೆಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ, ಗಣೇಶನ ದರ್ಶನ ಪಡೆದ ಅವರು, ಎಲ್ಲ ಕಡೆ ಮಂಗಳಾರತಿ ಕೂಡ ಮಾಡಿದರು.
ಈ ವೇಳೆ ಗಣಪತಿ ಮಂಡಳಿಗಳ ಸದಸ್ಯರನ್ನೂ ಅವರು ಭೇಟಿ ಮಾಡಿದರು.
ಈ ವೇಳೆ ಜೋಶಿ ಅವರಿಗೆ ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ಮೇಯರ್ ಜ್ಯೋತಿ ಪಾಟೀಲ್ ಸೇರಿ ಹಲವು ಬಿಜೆಪಿ ಮುಖಂಡರು ಸಾಥ್ ನೀಡಿದರು.
Laxmi News 24×7