ಮಹಾಸನ್ನಿದಿ ಅವರಿಂದ
ಎಸ್ .ಪಿ.ಎಲ್.ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ.
ಗೋಕಾಕ ತಾಲೂಕಿನ ಸಾವಳಗಿ ಗ್ರಾಮದಲ್ಲಿ
SSC ಕಮಿಟಿ ವತಿಯಿಂದ
ಮತ್ತು ಐದನೇ ಬಾರಿಗೆ ಸಾವಳಗಿ ಪ್ರಿಮಿಯರ್ ಲೀಗ್ (SPL)
ಕ್ರೀಡಾ ಪಂದ್ಯಾವಳಿಗೆ ಶ್ರೀ ಮನ್ ನಿರಂಜನ ಜಗದ್ಗುರು ಶ್ರೀ ಶಿವಲಿಂಗೇಶ್ವರ ಕುಮಾರೇಂದ್ರ ಮಹಾಸನ್ನಿದಿ ಅವರಿಂದ
ಚಾಲನೆ ನೀಡಿ
ನಂತರ ಅವರು ಮಾತನಾಡಿ, ಕ್ರೀಡೆ ಎನ್ನುವುದು ಸರ್ವಧರ್ಮ ಸಹಬಾಳ್ವೆಗೆ ಪೂರಕವಾಗಿದೆ
ಕ್ರೀಡೆಯಿಂದ ದೇಶ ಹಾಗೂ ರಾಜ್ಯಗಳ ನಡುವೆ ಬಾಂಧವ್ಯ ಬೆಳೆಯುತ್ತದೆ. ಕ್ರೀಡೆಯಲ್ಲಿ ಸೋಲು ಗೆಲುವು ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು.
ಅಷ್ಟೇ ಅಲ್ಲದೆ ಯುವಕರು ಉತ್ಸುಕತೆಯಿಂದ ಕ್ರೀಡೆಯಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿ ಪ್ರತಿಭೆಯನ್ನು ಹೊರಹೊಮ್ಮಿಸಬೇಕು. ಅಲ್ಲದೇ ಯುವ ಶಕ್ತಿ ಸಂಘಟನಾತ್ಮಕ ಕ್ರೀಡಾ ಮನೋಭಾವ ಮೈಗೂಡಿಸಿಕೊಳ್ಳಬೇಕು. ಐಪಿಎಲ್, ಕೆಪಿಎಲ್, ರಣಜಿ, ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಊರಿನ ಕೀರ್ತಿ ಮತ್ತು ತಂದೆ ತಾಯಿ ಹೆಸರು ಬರುವಂತೆ ಸಾಧನೆ ಮಾಡಬೇಕು ಎಂದು ಆರ್ಶೀವಚನ ನೀಡಿದರು.
ಗ್ರಾಮ ಪಂಚಾಯತಿ ಸದಸ್ಯರಾದ
ಶಾನುಲ್ ಹತ್ತಿವಾಲೆ ಮಾತನಾಡಿ
ಯಾವುದೆ ಕ್ರೀಡೆ ಮೋಜಿಗಾಗಿಯಲ್ಲ. ಕ್ರೀಡೆಯನ್ನು ಪ್ರತಿಯೊಬ್ಬರು ಅಭ್ಯಾಸ ಮಾಡುವುದರಿಂದ ಆರೋಗ್ಯ ಮತ್ತು ಪ್ರತಿಭಾವಂತ ಕ್ರೀಡಾಪಟುಗಳಿಗೆ ಉತ್ತಮ ಭವಿಷ್ಯವಿದೆ ಎಂದು ತಿಳಿಸಿದರು.
ನಿವೃತ್ತ ಕಂದಾಯ ಅಧಿಕಾರಿಗಳಾದ
ಸರ್ದಾರ್ ಪಟೇಲ್ ಮಾತನಾಡಿ, ಎಲ್ಲ ಕ್ರೀಡಾಭಿಮಾನಿಗಳನ್ನು ಕ್ರೀಡಾಂಗಣದಲ್ಲಿ ಹಿಡಿದಿಟ್ಟುಕೊಳ್ಳುವ ಶಕ್ತಿ ಕ್ರಿಕೆಟ್ ಪಂದ್ಯಾವಳಿಗಿದೆ. ಕ್ರೀಡಾಭಿಮಾನಿಗಳಿಗೆ ಹಬ್ಬದ ವಾತಾವರಣವೇ ಸೃಷ್ಟಿಯಾಗಲಿದೆ. ಹಾಗಾಗಿ ಕ್ರಿಡಾಪಟುಗಳು ಕ್ರೀಡಾ ಮನೋಭಾವನೆಯಿಂದ ಭಾಗವಹಿಸಿ ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಬೇಕೆಂದರು.
ಶಿವಲಿಂಗ ಕಬಾಡಗಿ.
ಶಿವಲಿಂಗ ಮಡಿವಾಳ.
ನಿಂಗನಗೌಡ ಪಾಟೀಲ.
ರಮೇಶ್ ಚಿಕ್ಕೋಡಿ.
ದರಪ್ಪಾ ಮಗದುಮ್ಮ.
ಕಾಡಪ್ಪಾ ಪರವಣ್ಣಿ.
ರಾಘು ಅಮ್ಮಣಗಿ.
ಗಂಗರಾಯ ನಾಯಿಕ.
ಮಹಮ್ಮದ್ ಬಾಗಿ ಶಿವಲಿಂಗ ಕೊಟಬಾಗಿ.
ತಂಡದ ಕ್ರೀಡಾಪಟುಗಳು ಗ್ರಾಮದ ಹಿರಿಯರು ಪ್ರಮುಖ ಮುಖಂಡರು ಹಾಜರಿದ್ದರು.