ಗೋಕಾಕ : ತಾಲೂಕಿನ ದುಂಡಾನಟ್ಟಿ ಗ್ರಾಮದ ಹಳ್ಳದ ದಂಡೆಯಲ್ಲಿ ಕಳ್ಳತನವಾಗಿದ್ದ ನೀರಿನ ಕರೆಂಟ್ ಮೋಟರ್ ಗಳನ್ನು ಪತ್ತೆ ಹಚ್ಚಿ, ಕಳ್ಳರನ ಬಂಧಿಸಲಾಗಿದೆ.
ಗೋಕಾಕ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಬರುವ ದುಂಡಾನಟ್ಟಿ ಹಳ್ಳದ ದಂಡೆಯಲ್ಲಿ ಕೂಡ್ರಿಸಿದ ಒಟ್ಟು 86500/- ರೂ. ಕಿಮ್ಮತ್ತಿನ ಮೋನೊಬ್ಲಾಕ ಸಿಆರ್ಐ ಕಂಪನಿಯ 5 ಎಚ್ಪಿ ಎರಡು ಕರೆಂಟ್ ಮೋಟರ & 10 ಎಚ್.ಪಿ ಒಂದು ಕರೆಂಟ್ ಮೋಟರನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಪ್ರಕರಣ ದಾಖಲಾಗಿರುತ್ತದೆ.
ಸದರಿ ಕರೆಂಟ ಮೋಟರ(ಪಂಪಸೆಟ್)ಗಳ ಪತ್ತೆ ಹಚ್ಚಲು ಬೆಳಗಾವಿ ಎಸ್ಪಿ ಡಾ: ಭೀಮಾಶಂಕರ ಎಸ್.ಗುಳೇದ ಗೋಕಾಕ ಸಿಪಿಐ ಸುರೇಶಬಾಬು ಆರ್ ಬಿ ರವರ ನೇತೃತ್ವದಲ್ಲಿ ತಂಡವನ್ನು ರಚಿಸಿದರು.
ತನಿಖಾ ತಂಡವು ಹೆಚ್ಚುವರಿ ಎಸ್ಪಿಗಳಾದ ಶೃತಿ ಎನ್ ಎಸ್, ಹೆಚ್ಚುವರಿ ರಾಮಗೊಂಡ ಬಿ ಬಸರಗಿ , ಗೋಕಾಕ ಡಿವೈಎಸ್ಪಿ ಡಿ ಎಚ್ ಮುಲ್ಲಾ ಮಾರ್ಗದರ್ಶನದಲ್ಲಿ ಕರೆಂಟ ಮೋಟರ(ಪಂಪಸೆಟ್) ಕಳ್ಳತನ ಪ್ರಕರಣಗಳಲ್ಲಿ ತನಿಖೆ ಕೈಕೊಂಡು 04 ಜನರನ್ನು ಬಂಧಿಸಿದ್ದಾರೆ.
ಕರೆಂಟ ಮೋಟರ(ಪಂಪಸೆಟ್)ಗಳನ್ನು ದುಂಡಾನಟ್ಟಿ ಹಳ್ಳದ ದಂಡೆಯಲ್ಲಿಂದ ಕಳ್ಳತನ ಮಾಡಿದ್ದು, ಸದರಿ ಕರೆಂಟ್ ಮೋಟರಗಳನ್ನು ಮಾರಿ ಬಂದ 86000/ ರೂ ಹಣವನ್ನು ಮತ್ತು ಕೃತ್ಯಕ್ಕೆ ಬಳಸಿದ 04 ಲಕ್ಷ ರೂ ಕಿಮ್ಮತ್ತಿನ 01 ಗೂಡ್ಸ್ ಗಾಡಿ ಮತ್ತು 80 ಸಾವಿರ ರೂ ಕಿಮ್ಮತ್ತಿನ 02 ಮೋಟಾರ್ ಸೈಕಲಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸದರ ಪ್ರಕರಣದಲ್ಲಿ ಕಳ್ಳರನ್ನು ಬಂಧಿಸುವಲ್ಲಿ ಸಿಪಿಐ ಸುರೇಶಬಾಬು ಆರ್.ಬಿ, ಪಿಎಸ್ಐ ಕಿರಣ ಎಸ್ ಮೋಹಿತೆ, ಸಿಬ್ಬಂದಿ ಜನರಾದ ಬಿ.ವಿ ನೆರ್ಲಿ, ಜಗದೀಶ ಗುಡ್ಲಿ, ಮಾರುತಿ ವಾಯ್ ಪಡದಲ್ಲಿ, ಡಿ ಬಿ ಅಂತರಗಟ್ಟಿ, ಡಿ ಜಿ ಕೊಣ್ಣೂರ, ಎಚ್ ಡಿ ಗೌಡಿ, ಎನ್ ಎಲ್ ಮಂಗಿ, ವಿ.ಎಲ್. ನಾಯ್ಕವಾಡಿ, ಎನ್ ಜಿ ದುರದುಂಡಿ ಹಾಗೂ ಬೆಳಗಾವಿಯ ಟೆಕ್ನಿಕಲ್ ಸೆಲ್ನ ಸಚೀನ ಪಾಟೀಲ ಮತ್ತು ವಿನೋದ ಠಕ್ಕನ್ನವರ ಇವರು ಯಶಸ್ವಿಯಾಗಿದ್ದಾರೆ.