ಘಟಪ್ರಭಾ: ಮೊಹರಂ ಹಬ್ಬವನ್ನು ಶಾಂತಿ-ಸೌಹಾರ್ದದಿಂದ ಆಚರಿಸುವಂತೆ ಡಿ.ವೈ.ಎಸ್.ಪಿ ದೂದಫೀರ ಮುಲ್ಲಾ ಹೇಳಿದರು.
ಇಲ್ಲಿಯ ಪೊಲೀಸ್ ಠಾಣೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು. ಭಾವೈಕ್ಯದ ಸಂಕೇತವಾದ ಮೊಹರಂ ಆಚರಣೆ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈಭವೀಕರಿಸಿ ಸಮಾಜದ ಸ್ವಾಸ್ಥ್ಯ ಕೆಡಿಸುವ ಕೆಲಸ ಮಾಡದಂತೆ ನಿಗಾ ವಹಿಸಿ ಈ ಬಗ್ಗೆ ಜಾಗೃತರಾಗಿರಬೇಕೆಂದು ಹೇಳಿದರು.
ಪಿ.ಐ ಬಸವರಾಜ ಕಾಮನಬೈಲು ಮಾತನಾಡಿ, ಮೊಹರಂ ತಾಬೂತು ಮತ್ತು ಪಂಜಾಗಳನ್ನು ಕೂಡ್ರಿಸುವ ಕಮೀಟಿಯವರು ನಿರ್ವಹಣೆ ಮತ್ತು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂದರು.
ಪಿಎಸ್ಐಗಳಾದ ಕಣವಿ, ಎನ್.ಆರ್ ನರಳೆ, ಮುಸ್ಲಿಂ ಸಮುದಾಯದ ಹಿರಿಯರಾದ ಶೌಕತ್ ಕಬ್ಬೂರ, ಕುತಬುದ್ದೀನ ತಟಗಾರ, ಪ.ಪಂ ಮಾಜಿ ಸದಸ್ಯರಾದ ಸಲೀಮ ಕಬ್ಬೂರ, ಇಮ್ರಾನ್ ಬಟಕುರ್ಕಿ, ರಫೀಕ್ ಸಯ್ಯದ್, ಹಜರತಸಾಬ ಕಬ್ಬೂರ, ಮೋದಿನಸಾಬ ಕಬ್ಬೂರ, ಸೇರಿದಂತೆ ಘಟಪ್ರಭಾ, ಶಿಂಧಿಕುರಬೇಟ, ಸಂಗನಕೇರಿ ಗ್ರಾಮಗಳ ಹಿರಿಯರು ಇದ್ದರು.