Breaking News

ಬೆಂಗಳೂರಿನ ತಮ್ಮ ಕಚೇರಿಯಲ್ಲೂಸವದಿ ವಿರುದ್ಧ ಮತ್ತೇ ಹರಿಹಾಯ್ದ ಸತೀಶ್ ಜಾರಕಿಹೊಳಿ

Spread the love

ಬೆಳಗಾವಿ: . ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವಿಧಾನಸಭಾ ಸೆಗ್ಮೆಂಟ್ ಗಳಾಗಿರುವ ಅಥಣಿ ಮತ್ತು ಕುಡಚಿಯಲ್ಲಿ ಅವರ ಮಗಳು ಮತ್ತು ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಚಾರಕಿಹೊಳಿಗೆ (Priyanka Jarkiholi) ಲೀಡ್ ಸಿಕ್ಕಿಲ್ಲ ಅನ್ನೋದು. ನಿನ್ನೆ ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿ ಎರಡೆರಡು ಬಾರಿ ಅಥಣಿ ಶಾಸಕ ಲಕ್ಷ್ಮಣ    ಸವದಿ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಇವತ್ತು ಬೆಂಗಳೂರಿನ ತಮ್ಮ ಕಚೇರಿಯಲ್ಲೂ ಅವರು ಮತ್ತೊಮ್ಮೆ ಅದೇ ವಿಷಯದ ಬಗ್ಗೆ ಮಾತಾಡಿ ಅಸಮಾಧಾನವನನ್ನು ಹೊರಹಾಕಿದರು. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆಥಣಿಯಲ್ಲಿ 76,000 ಲೀಡ್ ಸಿಕ್ಕಿತ್ತು, ಆದರೆ ಲೊಕಸಭಾ ಚುನಾವಣೆಯಲ್ಲಿ ವೋಟುಗಳು 8,000 ಮೈನಸ್ ಆಗಿವೆ.

ಯಾಕೆ ಹೀಗಾಯ್ತು? ಸವದಿಯವರು ಬೇರೆ ಕ್ಷೇತ್ರಗಳಲ್ಲಿ ಪ್ರಚಾರದಲ್ಲಿ ತೊಡಗಿದ್ದರೇ? ಕಾರ್ಯಕರ್ತರು ಕೆಲಸ ಮಾಡಲಿಲ್ಲವೇ? ಇದು ನಡೆದಿದ್ದು ಉದ್ದೇಶಪೂರ್ವಕಾವಾಗಿಯೋ ಇಲ್ಲವೋ ಅಂತ ಸವದಿಯವರೇ ಸ್ಪಷ್ಟೀಕರಣ ನೀಡಬೇಕು ಎಂದು ಸತೀಶ್ ಹೇಳಿದರು. ಕುಡಚಿಯಲ್ಲಂತೂ ಶಾಸಕ ಮಹೇಂದ್ರ ಕೆ ತಮ್ಮಣ್ಣನವರ್ ತಮ್ಮ ಮೊಬೈಲ್ ಸ್ವಿಚ್ಚಾಫ್ ಮಾಡಿ ಎಲ್ಲೋ ಮಲಗಿದ್ದರು ಎಂದು ಹೇಳಿದರು


Spread the love

About Laxminews 24x7

Check Also

ಬಿಜೆಪಿ-ಜೆಡಿಎಸನಲ್ಲಿ ಅಸಮಾಧಾನಗೊಂಡ ಕಾರ್ಯಕರ್ತರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಗೃಹ ಸಚಿವ ಜಿ. ಪರಮೇಶ್ವರ ಏನಂದ್ರು??

Spread the loveಜ್ಯಾತ್ಯಾತೀತವಾಗಿ ಕಾಂಗ್ರೆಸ್ ಸಿದ್ಧಾಂತಗಳನ್ನು ಒಪ್ಪಿ ಬರುವ ಕಾರ್ಯಕರ್ತರಿಗೆ ಪಕ್ಷದಲ್ಲಿ ಸ್ವಾಗತವಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ