ನಾಗಾಲ್ಯಾಂಡ್ : ರಾಮಲಲ್ಲಾ(Ramlalla) ಪ್ರಾಣ ಪ್ರತಿಷ್ಟಾಪನಾ ಕಾರ್ಯಕ್ರಮ ಮೋದಿ(Modi centered event) ಕೇಂದ್ರೀಕೃತ ‘ರಾಜಕೀಯ ಕಾರ್ಯಕ್ರಮ’ವಾಗಿ ಹೀಗಾಗಿ ರಾಮ ಮಂದಿರ ಉದ್ಘಾಟನೆಯಲ್ಲಿ ಪಾಲ್ಗೊಳ್ಳಲು ಕಾಂಗ್ರೆಸ್ ಪಕ್ಷಕ್ಕೆ ಕಷ್ಟವಾಗುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಭಾರತದ ಜೋಡೊ ನ್ಯಾಯ ಯಾತ್ರೆ ನಾಗಾಲ್ಯಾಂಡ್ ತಲುಪಿದ್ದು, ಈ ವೇಳೆ ಮಾಧ್ಯಮದ ಜೊತೆ ಮಾತನಾಡಿದ ಸಂಸದ ರಾಹುಲ್ ಗಾಂಧಿ ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಬಿಜೆಪಿ ಮತ್ತು ಆರ್ಎಸ್ಎಸ್ ಚುನಾವಣೆಯ ಬಣ್ಣ ನೀಡಿದ್ದಾರೆ . ನಮ್ಮ ಸಿದ್ದಾಂತಗಳ ವಿರೋಧಿಗಳು ಕಾರ್ಯಕ್ರಮವನ್ನು ಚುನಾವಣಾ ಕಾರ್ಯಕ್ರಮವಾಗಿ ಮಾಡಿದಾಗ ಅಂತಹ ಕಾರ್ಯಕ್ರಮಕ್ಕೆ ನಮ್ಮ ನಾಯಕರು ಹೋಗುವುದು ಸರಿ ಎನಿಸುವುದಿಲ್ಲ ಹೀಗಾಗಿ ಹೋಗುತ್ತಿಲ್ಲ ಎಂದು ಅವರು ಹೇಳಿದರು.
ಸೀಟು ಹಂಚಿಕೆ ಸಮಸ್ಯೆ ಬಗೆಹರಿಯಲಿದೆ.
ಸೀಟು ಹಂಚಿಕೆ ವಿಚಾರದಲ್ಲಿ ಎದ್ದಿರುವ ಗೊಂದಲಗಳ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿ, ನನಗೆ ಇಂಡಿಯಾ ಮೈತ್ರಿಕೂಟದಲ್ಲಿರುವ ಎಲ್ಲಾ ಸಣ್ಣಪುಟ್ಟ ಸಮಸ್ಯೆಗಳು ಬಗೆಹರಿಯುವ ಭರವಸೆ ಇದೆ, ಒಗ್ಗಟ್ಟಾಗಿ ಬಿಜೆಪಿಯನ್ನು ಮಣಿಸುತ್ತೇವೆ ಎಂದು ಅವರು ಹೇಳಿದರು.