Breaking News

ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಕೇಸ್‌; ಬೆಂಕಿ ಹಚ್ಚಿದವರು ಅಮಾಯಕರಾ?: ಬೊಮ್ಮಾಯಿ

Spread the love

ಹಾವೇರಿ: ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ (DJ Halli, KG Halli Riots) ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳು ಅಮಾಯಕರು ಎಂಬ ನಿರ್ಣಯಕ್ಕೆ ಬಂದಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಆಕ್ರೋಶ ಹೊರಹಾಕಿದ್ದಾರೆ.

 

ನಗರದಲ್ಲಿ ಮಾತನಾಡಿದ ಅವರು, ಎರಡು ಪೊಲೀಸ್​ ಠಾಣೆಗಳಿಗೆ ಬೆಂಕಿ ಹಚ್ಚಿದವರು ಅಮಾಯಕರಾ? ಸಾರ್ವಭೌಮತ್ವಕ್ಕೆ ಸವಾಲು ಎಸೆಯುವ ಶಕ್ತಿಗೆ ಅಮಾಯಕರು ಅಂತಾರಾ ಎಂದು ಪ್ರಶ್ನಿಸಿದ್ದಾರೆ.

ಪೊಲೀಸರ ಕ್ರಮ ಸರಿ ಅಂತಾ ಕಾಂಗ್ರೆಸ್​ನವರೇ ಒಪ್ಪಿದ್ದಾರೆ. ಈಗ ಸಂಪುಟದಲ್ಲಿ ವರದಿ ಒಪ್ಪಿ ಅಮಾಯಕರು ಇದ್ದಾರೆ ಅಂದರೆ ಹೇಗೆ? ಇದು ಕಾಂಗ್ರೆಸ್​ನ ದ್ವಂದ್ವ ಧೋರಣೆ ಹಾಗೂ ಓಲೈಕೆ ರಾಜಕಾರಣವಾಗಿದೆ. ಕಾಂಗ್ರೆಸ್​​ನವರು ಡಿಜೆ ಹಳ್ಳಿ, ಕೆಜಿ ಹಳ್ಳಿ ಪ್ರಕರಣವನ್ನು​ ದುರ್ಬಲ​ ಮಾಡುತ್ತಿದ್ದಾರೆ. ಅಮಾಯಕರು ಎಂದು ತೀರ್ಮಾನ ಮಾಡುವವರು ಯಾರು? ಬಂಧಿತರು ಅಮಾಯಕರೋ ಅಥವಾ ಆರೋಪಿಗಳೋ ಎಂಬುದನ್ನು ಕೋರ್ಟ್​ ತೀರ್ಮಾನ ಮಾಡಲಿ ಎಂದರು.

ಮತ್ತೊಂದು ಗೋಧ್ರಾ ಹತ್ಯಾಕಾಂಡ ಆಗದಂತೆ ನೋಡಿಕೊಳ್ಳಿ ಎಂದು ಕಾಂಗ್ರೆಸ್ ಎಂಎಲ್​ಸಿ ಬಿಕೆ ಹರಿಪ್ರಸಾದ್​ ಹೇಳಿಕೆಗೆ ಆಕ್ರೋಶ ಹೊರಹಾಕಿದ ಬೊಮ್ಮಾಯಿ, ಮೊದಲು ಬಿಕೆ ಹರಿಪ್ರಸಾದ್​ಗೆ ಸಮನ್ಸ್​ ಜಾರಿ ಮಾಡಲಿ. ಇದೇ ರೀತಿ ಬಿಜೆಪಿಯವರು ಮಾತನಾಡಿದ್ದರೆ ಸುಮ್ಮನೆ ಬಿಡುತ್ತಿದ್ದಿರಾ ಎಂದು ಬೊಮ್ಮಾಯಿ ಪ್ರಶ್ನಿಸಿದರು.


Spread the love

About Laxminews 24x7

Check Also

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಚಿವ ರಾಮಲಿಂಗಾರೆಡ್ಡಿ ಭೇಟಿ: ಅಭಿವೃದ್ಧಿ ಯೋಜನೆಗಳ ಅವಲೋಕನ

Spread the love ಸುಬ್ರಹ್ಮಣ್ಯ, ದಕ್ಷಿಣ ಕನ್ನಡ: ಇಲ್ಲಿನ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ