Breaking News

ಬೆಂಗಳೂರಲ್ಲಿ ಹುಕ್ಕಾ ಬಾರ್‌ ಹಾವಳಿ : ಕ್ರಮಕ್ಕೆ ಬಿಜೆಪಿಗರ ಆಗ್ರಹ

Spread the love

 

 

ಬೆಳಗಾವಿ : ಬೆಂಗಳೂರಿನಲ್ಲಿ ತಲೆಯೆತ್ತುತ್ತಿರುವ ಹುಕ್ಕಾಬಾರ್‌ (Hukka bar) ಗಳ ಬಗ್ಗೆ ಮಂಗಳವಾರ ವಿಧಾನಸಭೆಯಲ್ಲಿ (Belagavi winter session) ಚರ್ಚೆಯಾಯಿತು. ಬಿಜೆಪಿ (BJP) ಶಾಸಕರಾದ ಸಿ.ಕೆ.ರಾಮಮೂರ್ತಿ (C K Ramamurthy) ಮತ್ತು ಎಸ್‌. ಸುರೇಶ್‌ ಕುಮಾರ್‌ (S Sureshkumar) ಈ ಕುರಿತು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗೃಹಸಚಿವ ಪರಮೇಶ್ವರ್‌ (G Parameshwar) ಅವರನ್ನು ಆಗ್ರಹಿಸಿದರು.

 

ಈ ಕುರಿತು ಮಾತನಾಡಿದ ಸಿ.ಕೆ. ರಾಮಮೂರ್ತಿ ದೆಹಲಿ ಹೊರತುಪಡಿಸಿದರೆ ಬೆಂಗಳೂರು ಅತಿ ಹೆಚ್ಚು ಹುಕ್ಕಾ ಬಾರ್‌ ಗಳನ್ನು ಹೊಂದಿರುವ ನಗರವಾಗಿದೆ. ನಗರದ ಯುವಜನತೆ ದುರ್ವ್ಯಸನಕ್ಕೆ ಒಳಗಾಗುತ್ತಿದ್ದಾರೆ. ನಗರದ ವಿದ್ಯಾರ್ಥಿಗಳನ್ನೂ ಸಹ ದಾರಿತಪ್ಪಿಸುವ ಕೆಲಸಕ್ಕೆ ಹುಕ್ಕಾಬಾರ್ ಗಳು ಕೈ ಹಾಕಿವೆ ಎಂದು ಆರೋಪಿಸಿದರು. ಜೊತೆಗೆ ಅಕ್ಟೋಬರ್‌ ನಲ್ಲಿ ಕೋರಮಂಗಲದ ಹುಕ್ಕಾಬಾರ್‌ ನಡೆದ ಅಗ್ನಿದುರಂತದ ಬಗ್ಗೆಯೂ ಪ್ರಸ್ತಾಪಿಸಲಾಯಿತು.
ಇದಕ್ಕೆ ಉತ್ತರ ನೀಡಿದ ಗೃಹಸಚಿವ ಜಿ. ಪರಮೇಶ್ವರ್‌ ಇದಕ್ಕೆ ಎಫ್‌ಎಸ್‌ಎಐ ಪರವಾನಗಿ ನೀಡುತ್ತದೆ. ಹುಕ್ಕಾಬಾರ್‌ ಗಳಿಗೆ ಬಿಬಿಎಂಪಿ ಅನುಮತಿ ಬೇಕಿಲ್ಲ. ಜೊತೆಗೆ ಸುಪ್ರೀಂ ಕೋರ್ಟ್‌ ಈ ಕುರಿತು ಸ್ಪಷ್ಟ ನಿರ್ದೇಶನ ನೀಡಿರುವಂತೆ ಹುಕ್ಕಾಬಾರ್‌ ಸ್ಥಾಪನೆಗೆ ಯಾವುದೇ ಪರವಾನಗಿ ಅಗತ್ಯವಿಲ್ಲ ಎಂದರು.


Spread the love

About Laxminews 24x7

Check Also

ಹಾವೇರಿ: ಶರಣ ಚೌಡಯ್ಯ ಐಕ್ಯ ಮಂಟಪಕ್ಕೆ ಜಲದಿಗ್ಬಂಧನ, ತೆಪ್ಪದಲ್ಲಿ ತೆರಳಿ ಭಕ್ತರಿಂದ ಪೂಜೆ

Spread the loveಹಾವೇರಿ: ಸಂತರ, ಶರಣರ ಮತ್ತು ದಾರ್ಶನಿಕರ ಜಿಲ್ಲೆ ಹಾವೇರಿ. ಇಲ್ಲಿ ಸರ್ವಜ್ಞ, ಅಂಬಿಗರ ಚೌಡಯ್ಯ, ಕನಕದಾಸರು, ಶಿಶುನಾಳ ಶರೀಫರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ