Breaking News

ರಾಜಕಾರಣಿಗಳ ಜೊತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಬಾಲಿವುಡ್​ ನಟಿಯರು ಇವರೇ

Spread the love

ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಮಾತ್ರವಲ್ಲದೇ, ರಾಜಕಾರಣಿಗಳ ಜೊತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಬಾಲಿವುಡ್​ ನಟಿಯರು ಇವರೇ ನೋಡಿ..

ಪರಿಶುದ್ಧ ‘ಪ್ರೀತಿ’ಗೆ ಯಾವುದೇ ಮಿತಿಯಿಲ್ಲ. ಯಾವುದೇ ಷರತ್ತುಗಳಿಲ್ಲ. ಪ್ರೀತಿ ಯಾರಿಗೆ, ಯಾವಾಗ ಬೇಕಾದರೂ, ಯಾರೊಂದಿಗೂ ಆಗಬಹುದು.

ಅದು ಎರಡು ಮನಸ್ಸುಗಳಿಗೆ ಸಂಬಂಧಪಟ್ಟಿರುವ ವಿಚಾರ. ಪ್ರೀತಿಗೆ ವೃತ್ತಿ, ಜಾತಿ, ಧರ್ಮ ಯಾವುದೂ ಮುಖ್ಯವಾಗಿರಲ್ಲ. ಇದೇ ರೀತಿ ಬಾಲಿವುಡ್​ಗೂ ರಾಜಕೀಯಕ್ಕೂ ವಿಶೇಷವಾಗಿ ಪ್ರೀತಿಯ ನಂಟು ಇದೆ.

ಹೌದು.., ಹಿಂದಿ ಚಿತ್ರರಂಗದ ಬ್ಯೂಟಿಫುಲ್​ ನಟಿ ಪರಿಣಿತಿ ಚೋಪ್ರಾ ಮತ್ತು ಸಂಸದ ರಾಘವ್ ಚಡ್ಡಾ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಜಸ್ಥಾನದ ಉದಯಪುರದ ಲೀಲಾ ಪ್ಯಾಲೆಸ್ ಹೋಟೆಲ್‌ನಲ್ಲಿ ರಾಘ್​ನೀತಿ ಅದ್ಧೂರಿಯಾಗಿ ಸಪ್ತಪದಿ ತುಳಿಯಲಿದ್ದಾರೆ. ಇಷ್ಟು ವರ್ಷದ ಪ್ರೀತಿಗೆ ದಾಂಪತ್ಯದ ಮುದ್ರೆ ಒತ್ತಿದ್ದಾರೆ.

ವಿಶೇಷವೆಂದರೆ, ಇವರಿಬ್ಬರ ವೃತ್ತಿ ಜೀವನವೇ ಬೇರೆ. ಮಾಡುವ ಕೆಲಸಗಳು ಕೂಡ ಬೇರೆಯೇ. ರಾಘವ್​ ಚಡ್ಡಾ ರಾಜಕಾರಣಿ ಆಗಿದ್ದರೆ, ಪರಿಣಿತಿ ಚೋಪ್ರಾ ನಟಿ. ಈ ಮೊದಲು ಅನೇಕ ಬಾಲಿವುಡ್​ ನಟಿಯರು ರಾಜಕಾರಣಿಗಳ ಜೊತೆ ಸಪ್ತಪದಿ ತುಳಿದಿದ್ದಾರೆ. ರಾಘ್​ನೀತಿ ಸಾಲಿನಲ್ಲಿ ಅನೇಕ ಜೋಡಿಗಳು ಸೇರಿದ್ದಾರೆ.

ರಾಘ್​ನೀತಿ: ಪರಿಣಿತಿ ಚೋಪ್ರಾ ಮತ್ತು ರಾಘವ್​ ಚಡ್ಡಾ ಮದುವೆ ಸಾಕಷ್ಟು ಸುದ್ದಿ ಮಾಡುತ್ತಿದೆ. ಇಬ್ಬರೂ ಕೂಡ ವಿಭಿನ್ನ ಕ್ಷೇತ್ರದ ಗಣ್ಯ ವ್ಯಕ್ತಿಗಳಾದ ಹಿನ್ನೆಲೆಯಲ್ಲಿ ಕುತೂಹಲ ಸಹಜ. ಪರಿಣಿತಿ ಹಿಂದಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರೆ, ರಾಜಕೀಯ ಕ್ಷೇತ್ರದಲ್ಲಿ ರಾಘವ್​ ಚಡ್ಡಾ ಯಂಗ್​ ಆಯಂಡ್​ ಎನರ್ಜಿಟಿಕ್​ ಲೀಡರ್​ ಆಗಿ ಗುರುತಿಸಿಕೊಂಡವರು. ಇವರಿಬ್ಬರು ಮೇ 13ರಂದು ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇಂದು ಅತ್ಯಂತ ಸಂಭ್ರಮದಿಂದ ಮೂರು ಗಂಟಿನ ನಂಟಿಗೆ ಒಳಗಾಗಿದ್ದಾರೆ.

ರಿ

ರಾಘ್​ನೀತಿ ಮಾರ್ಚ್​ ತಿಂಗಳಲ್ಲಿ ಪದೇ ಪದೇ ಒಟ್ಟಿಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಡೇಟಿಂಗ್​ ವದಂತಿ ಆರಂಭವಾಗಿತ್ತು. ಅದಾದ ಬಳಿಕ ರೆಸ್ಟೋರೆಂಟ್​, ಏರ್​ಪೋರ್ಟ್​ಗಳಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು. ಹಲವು ಗಣ್ಯರು ಸಹ ಪರೋಕ್ಷವಾಗಿ ಈ ಜೋಡಿ ಪ್ರೀತಿಯಲ್ಲಿರುವ ಬಗ್ಗೆ ಮಾತನಾಡಿದ್ದರು. ಪರಿಣಿತಿ ಮತ್ತು ರಾಘವ್ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಒಟ್ಟಿಗೆ ವಿದ್ಯಾಭ್ಯಾಸ ಪಡೆದಿದ್ದಾರೆ. ದೀರ್ಘಕಾಲದ ಸ್ನೇಹಿತರು ಕೂಡ ಹೌದು.

 

ಸ್ವರಾ ಭಾಸ್ಕರ್​ ಮತ್ತು ಫಹಾದ್ ಅಹ್ಮದ್: ಈ ವರ್ಷ ಫೆಬ್ರವರಿ ತಿಂಗಳಿನಲ್ಲಿ ವಿಶೇಷ ವಿವಾಹ ಕಾಯ್ದೆಯಡಿ ನಟಿ ಸ್ವರಾ ಭಾಸ್ಕರ್​ ಮತ್ತು ಸಮಾಜವಾದಿ ಪಕ್ಷದ ನಾಯಕ ಫಹಾದ್ ಅಹ್ಮದ್ ಮದುವೆ ಆದರು. ಫೆಬ್ರವರಿಯಲ್ಲಿ ಈ ಜೋಡಿಯ ರಿಜಿಸ್ಟರ್ ಮ್ಯಾರೇಜ್ ನಡೆದಿತ್ತು.​ ಬಳಿಕ ಮಾರ್ಚ್​ ತಿಂಗಳಿನಲ್ಲಿ ಶಾಸ್ತ್ರಗಳ ಪ್ರಕಾರ ಅದ್ಧೂರಿಯಾಗಿ ಮದುವೆ ಮಾಡಿಕೊಂಡರು.

ಹಳ್ದಿ ಶಾಸ್ತ್ರ, ಸಂಗೀತ ಸಮಾರಂಭ, ಮೆಹಂದಿ ಶಾಸ್ತ್ರ ಸೇರಿದಂತೆ ಮದುವೆಗೆ ಸಂಬಂಧಿಸಿದ ಎಲ್ಲ ಸಮಾರಂಭಗಳು ಶಾಸ್ತ್ರೋಕ್ತವಾಗಿ ನೆರವೇರಿತ್ತು. ಬಳಿಕ ಮಾರ್ಚ್​ 16ರಂದು ಆರತಕ್ಷತೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ದೆಹಲಿಯಲ್ಲಿ ಅದ್ಧೂರಿಯಾಗಿ ನಡೆದ ಕಾರ್ಯಕ್ರಮಕ್ಕೆ ರಾಜಕೀಯ ಮತ್ತು ಚಿತ್ರರಂಗದ ಗಣ್ಯರು ಸಾಕ್ಷಿಯಾಗಿದ್ದರು.


Spread the love

About Laxminews 24x7

Check Also

ಹಾವೇರಿ: ಶರಣ ಚೌಡಯ್ಯ ಐಕ್ಯ ಮಂಟಪಕ್ಕೆ ಜಲದಿಗ್ಬಂಧನ, ತೆಪ್ಪದಲ್ಲಿ ತೆರಳಿ ಭಕ್ತರಿಂದ ಪೂಜೆ

Spread the loveಹಾವೇರಿ: ಸಂತರ, ಶರಣರ ಮತ್ತು ದಾರ್ಶನಿಕರ ಜಿಲ್ಲೆ ಹಾವೇರಿ. ಇಲ್ಲಿ ಸರ್ವಜ್ಞ, ಅಂಬಿಗರ ಚೌಡಯ್ಯ, ಕನಕದಾಸರು, ಶಿಶುನಾಳ ಶರೀಫರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ