Breaking News

ಬಿಜೆಪಿ ಶಾಸಕರಿಂದ ‘ರಾಷ್ಟ್ರಧ್ವಜ’ಕ್ಕೆ ಅಪಮಾನ: ‘ತಿರಂಗ’ದ ಹೊದ್ದ ಆನೆ ಮೇಲೆ ಮಗನನ್ನು ಕೂರಿಸಿ ಸವಾರಿ

Spread the love

ವಿಜಯಪುರ: ಆಜಾದಿಕ ಅಮೃತ ಮಹೋತ್ಸವದ ಸಲುವಾಗಿ ದೇಶಾದ್ಯಂತ ಹರ್ ಘರ್ ತಿರಂಗ ಯಾತ್ರೆಯನ್ನು ನಡೆಸಲಾಗುತ್ತಿದೆ. ಈ ಸಲುವಾಗಿಯೇ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಕ್ಷೇತ್ರದ ತಾಳಿಕೋಟೆಯಲ್ಲಿ ಹಮ್ಮಿಕೊಂಡಿದ್ದಂತ ಕಾರ್ಯಕ್ರಮದಲ್ಲಿ, ಆನೆಯೊಂದಕ್ಕೆ ತಿರಂಗ ಹೊದಿಸಿ, ಸಿಂಗರಿಸಲಾಗಿತ್ತು.

ಹೀಗೆ ಸಿಂಗಾರಗೊಂಡಿದ್ದಂತ ತಿರಂಗ ಹೊದ್ದಿದ್ದಂತ ಆನೆಯ ಮೇಲೆಯೇ ಬಿಜೆಪಿ ಶಾಸಕ ಎ ಎಸ್ ಪಾಟೀಲ್ ನಡಹಳ್ಳಿ ( MLA A S Patil Nadahalli ) ತಮ್ಮ ಮಗನನ್ನು ಕೂರಿಸಿ, ಮೆರವಣಿಗೆ ಮಾಡಿ, ರಾಷ್ಟ್ರಧ್ವಜಕ್ಕೆ ( National Flag ) ಅಪಮಾನ ಮಾಡಿರುವಂತ ಘಟನೆ ಇಂದು ನಡೆದಿದೆ.

ಇಂದು ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ತಾಳಿಕೋಟೆಯಲ್ಲಿ 75 ಕಿಲೋ ಮೀಟರ್ ಯುವಜನ ಸಂಕಲ್ಪ ನಡಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಮೆರವಣಿಗೆಯ ವೇಳೆಯಲ್ಲಿ ಆನೆಯೊಂದಕ್ಕೆ ತಿರಂಗ ಹೊದಿಸಿ, ಸಿಂಗಾರಗೊಳಿಸಲಾಗಿತ್ತು.

ಈ ಯುವಜನ ಸಂಕಲ್ಪ ನಡಿಗೆಯಲ್ಲಿ ಭಾಗವಹಿಸಿದ್ದಂತ ಮುದ್ದೇಬಿಹಾಳ ಕ್ಷೇತ್ರದ ಬಿಜೆಪಿ ಶಾಸಕ ಎ ಎಸ್ ಪಾಟೀಲ್ ನಡಹಳ್ಳಿಯವರು, ತಮ್ಮ ಮಗನನ್ನು ರಾಷ್ಟ್ರಧ್ವಜ ಹೊದ್ದಿದ್ದಂತ ಆನೆಯ ಮೇಲೆ ಕೂರಿಸಿ, ತಿರಂಗಕ್ಕೆ ಅವಮಾನ ಮಾಡಿರೋ ವೀಡಿಯೋ, ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.


Spread the love

About Laxminews 24x7

Check Also

ಕಾರ್ಮಿಕ ಸಂಘಟನೆಗಳಿಂದ ಭಾರತ್ ಬಂದ್‌ಗೆ ಕರೆ – 9 ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರೊಟೆಸ್ಟ್

Spread the loveಬೆಂಗಳೂರು: ದೇಶಾದ್ಯಂತ ಹಲವು ಕಾರ್ಮಿಕ ಸಂಘಟನೆಗಳು  ಇಂದು ಭಾರತ್ ಬಂದ್‌ಗೆ  ಕರೆ ಕೊಟ್ಟಿವೆ. ಕೇಂದ್ರ ಸರ್ಕಾರದ ಹೊಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ