Breaking News

ಸಚಿವ ಈಶ್ವರಪ್ಪರನ್ನ ಸಂತೋಷ್‌ ಪಾಟೀಲ್‌ ಭೇಟಿಯಾಗಿದ್ದು ನಿಜ ಎಂದ ಬೈಲಹೊಂಗಲ ಆರಾದಿಮಠದ ಮಹಾಂತೇಶ ಶಾಸ್ತ್ರಿ

Spread the love

ಬೆಂಗಳೂರು : ಗುತ್ತಿಗೆದಾರ ಸಂತೋಷ್‌ ಅತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಸ್ಪೋಟಕ ವಿಚಾರ ಬಯಲಾಗಿದ್ದು, ಸಚಿವ ಈಶ್ವರಪ್ಪರನ್ನ ಸಂತೋಷ್‌ ಪಾಟೀಲ್‌ ಭೇಟಿಯಾಗಿದ್ದು ನಿಜ ಎಂದು ಬೈಲಹೊಂಗಲ ಆರಾದಿಮಠದ ಮಹಾಂತೇಶ ಶಾಸ್ತ್ರಿ ಹೇಳಿದ್ದಾರೆ.

 

ಈ ಕುರಿತು ಮಾತನಾಡಿದ ಅವ್ರು, ‘ಸಚಿವ ಈಶ್ವರಪ್ಪರನ್ನ ಸಂತೋಷ್‌ ಪಾಟೀಲ್‌ ಭೇಟಿಯಾಗಿದ್ದು ನಿಜ. ಆದ್ರೆ, ಸಂತೋಷ್‌ ಪಾಟೀಲ್‌ ಯಾರೆಂದು ನನಗೆ ಗೊತ್ತಿಲ್ಲ. 2021ರ ಫೆ.21ರಂದು ಸಚಿವ ಈಶ್ವರಪ್ಪರನ್ನು ಭೇಟಿಯಾಗಿದ್ದೆ. ದುರ್ಗಾದೇವಿ ಜಾತ್ರಾ ಮಹೋತ್ಸವಕ್ಕೆ ಆಹ್ವಾನಿಸಲು ಕೆಲ ಪುರೋಹಿತರ ಜತೆ ಹೋಗಿದ್ದೆ.

ಈ ವೇಳೆ ಸಚಿವ ಈಶ್ವರಪ್ಪ ಕಚೇರಿಯಲ್ಲಿ ಇದ್ದ ಸಂತೋಷ್‌ ಇದ್ದರು. ನನ್ನ ನೋಡಿ ಬೈಲಹೊಂಗಲದ ಸ್ವಾಮೀಜಿ ಅಲ್ಲವಾ ಎಂದಿದ್ದರು. ಹೌದು ಅಂತ ಹೇಳಿದಾಗ ಫೋಟೋ ತೆಗಿಸಿಕೊಳ್ಳೋಣ ಅಂದ್ರು. ಬಳಿಕ ನಾನು, ಸಂತೋಷ್‌, ಪುರೋಹಿತರು ಸೇರಿ ಸಚಿವ ಈಶ್ವರಪ್ಪ ಜತೆ ಫೋಟೋ ತೆಗೆಸಿಕೊಂಡೆವು. ಆದ್ರೆ, ಆ ಫೋಟೋವನ್ನ ಅರ್ಧ ಭಾಗ ಕಟ್‌ ಮಾಡಲಾಗಿದೆ.

ಕಟ್‌ ಮಾಡಿ ನಾನೇ ಕರೆದುಕೊಂಡು ಹೋಗಿದ್ದೆ ಅನ್ನೋದು ಸುಳ್ಳು. ಎಲ್ಲರೂ ಸೇರಿ ಈಶ್ವರಪ್ಪ ಜತೆ ಫೋಟೋ ತೆಗೆಸಿಕೊಡಿದ್ದು ನಿಜ. ಆದ್ರೆ, ಈಶ್ವರಪ್ಪ ಬಳಿ ಸಂತೋಷ್‌ರನ್ನ ನಾನು ಕರೆದೊಯ್ದಿರಲಿಲ್ಲ’ ಎಂದರು.


Spread the love

About Laxminews 24x7

Check Also

ಬಾಬಾನಗರದ ನೆಲದಲ್ಲಿ ಹೊಸ ಕೃಷಿ ಕ್ರಾಂತಿ; ರೆಡ್ ಡೈಮಂಡ್ ಪೇರಲ ಬೆಳೆದು ಸಚಿವರಿಗೆ ಉಡುಗೊರೆ ನೀಡಿದ ರೈತ*

Spread the love : ವಿಜಯಪುರ ಜಿಲ್ಲೆಯ ಬಬಲೇಶ್ವರ ಮತಕ್ಷೇತ್ರದಲ್ಲಿ ವ್ಯಾಪ್ತಿಯಲ್ಲಿ ಬರುವ ತಿಕೋಟಾ ತಾಲ್ಲೂಕಿನ ಬಾಬಾನಗರದ ನೆಲದಲ್ಲಿ ಹೊಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ