Breaking News
Bengaluru: Buses remain parked at Majestic Bus stand in Bengaluru during a total Sunday lockdown -- fourth of the total five -- to fight the coronavirus pandemic as part of Unlock 2.0, shutting everything except essential services, being observed across Karnataka on July 26, 2020. (Photo: IANS)

ಸಗಟು ಡೀಸೆಲ್ ದರ ಏರಿಕೆ: ಸಾರಿಗೆ ಸಂಸ್ಥೆಗಳಿಗೆ ₹2.17 ಕೋಟಿ ಹೊರೆ

Spread the love

ಬೆಂಗಳೂರು: ಸಗಟು ಲೆಕ್ಕದಲ್ಲಿ ಡೀಸೆಲ್ ಖರೀದಿ ದರ ಏರಿಕೆಯಾಗಿರುವುದು ಮೊದಲೇ ಸಂಕಷ್ಟದಲ್ಲಿರುವ ಸಾರಿಗೆ ಸಂಸ್ಥೆಗಳನ್ನು ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ. ಇದರಿಂದಾಗಿ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ, ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗಳಿಗೆ ದಿನಕ್ಕೆ ₹2.17 ಕೋಟಿ ಹೆಚ್ಚುವರಿ ಹೊರೆ ಆಗಲಿದೆ.

ಪ್ರತಿನಿತ್ಯ ಕೆಎಸ್‌ಆರ್‌ಟಿಸಿಗೆ 5.30 ಲಕ್ಷ ಲೀಟರ್, ಬಿಎಂಟಿಸಿಗೆ 2.06 ಲಕ್ಷ ಲೀಟರ್, ಎನ್‌ಡಬ್ಲ್ಯುಕೆಆರ್‌ಟಿಸಿಗೆ 2.82 ಲಕ್ಷ ಲೀಟರ್ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗೆ 2.50 ಲಕ್ಷ ಲೀಟರ್ ಡೀಸೆಲ್‌ ಬೇಕಾಗುತ್ತದೆ.

ಕೆಎಸ್‌ಆರ್‌ಟಿಸಿ ನಿತ್ಯದ ವರಮಾನ ₹7 ಕೋಟಿ ಇದ್ದರೆ ಡೀಸೆಲ್‌ಗೇ ₹5 ಕೋಟಿ ಖರ್ಚಾಗುತ್ತಿತ್ತು.

ಈಗ ಹೆಚ್ಚುವರಿಯಾಗಿ ₹86.60 ಲಕ್ಷ ಹೊರೆ ಆಗಿದೆ. ಬಿಎಂಟಿಸಿ ನಿತ್ಯದ ವರಮಾನ ₹3.10 ಕೋಟಿ ಇದ್ದರೆ ಡೀಸೆಲ್‌ಗೆ ₹2.10 ಕೋಟಿ ಖರ್ಚಾಗುತ್ತಿತ್ತು. ಈಗ ₹35 ಲಕ್ಷ ಹೆಚ್ಚುವರಿಯಾಗಿ ಸೇರಿಕೊಂಡಿದೆ. ಎನ್‌ಡಬ್ಲ್ಯುಕೆಆರ್‌ಟಿಸಿಗೆ ₹48.97 ಲಕ್ಷ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗೆ ₹43.41 ಲಕ್ಷ ಹೆಚ್ಚುವರಿ ಡೀಸೆಲ್‌ ವೆಚ್ಚ ಹೊರೆಯಾಗಿದೆ.

ಈ ನಷ್ಟದಿಂದ ಪಾರು ಮಾಡಲು ಕೋರಿ ನಾಲ್ಕೂ ಸಾರಿಗೆ ಸಂಸ್ಥೆಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ಆದರೂ, ಪ್ರಯಾಣ ದರ ಹೆಚ್ಚಳ ಮಾಡುವ ಸಾಧ್ಯತೆಗಳಿಲ್ಲ.


Spread the love

About Laxminews 24x7

Check Also

ಚಿತ್ರದುರ್ಗ ಬಸ್​ ದುರಂತ: ಗಾಯಗೊಂಡಿದ್ದ ಬಸ್​ ಚಾಲಕ ಸಾವು

Spread the loveಹುಬ್ಬಳ್ಳಿ: ಚಿತ್ರದುರ್ಗದ ಹಿರಿಯೂರು-ಶಿರಾ ನಡುವಿನ ಜವನಗೊಂಡಹಳ್ಳಿ ಬಳಿ ಸಂಭವಿಸಿದ್ದ ಬಸ್​ ​ದುರಂತದಲ್ಲಿ ಗಾಯಗೊಂಡಿದ್ದ ಖಾಸಗಿ ಬಸ್ ಚಾಲಕ ಶಿಗ್ಗಾವಿಯ ಮೊಹಮ್ಮದ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ