Breaking News

ರಾಜ್ಯಮಟ್ಟದ ಕರ್ನಾಟಕ ಸೌಂದರ್ಯ ಸ್ಪರ್ಧೆ: ಕಿಂಜಲ್​ಗೆ ಮಿಸ್ ಕರ್ನಾಟಕ ಕಿರೀಟ

Spread the love

ಪುತ್ತೂರು: ಸೌಂದರ್ಯವರ್ಧಕ ಕ್ಷೇತ್ರವೆನಿಸಿದ ಮಾಡೆಲಿಂಗ್ ಕ್ಷೇತ್ರಕ್ಕೆ ಹುಡುಗರು, ಹುಡುಗಿಯರು ಫಿದಾ ಆಗುವುದು ಸಹಜ. ಈ ಮಾಡೆಲಿಂಗ್ ಕ್ಷೇತ್ರವು ಹಲವರು ಪ್ರತಿಭಾವಂತರನ್ನು ಕೈ ಬೀಸಿ ಕರೆಯುತ್ತಿದೆ. ಈ ನಿಟ್ಟಿನಲ್ಲಿ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ಯುವತಿಯೊಬ್ಬಳು ಚೊಚ್ಚಲ ಪ್ರಯತ್ನದಲ್ಲಿಯೇ ಸೈ ಎನಿಸಿಕೊಂಡ ಬಾಲೆಯಾಗಿದ್ದು, ಪ್ರತಿಷ್ಠಿತ ಮಿಸ್ ಕರ್ನಾಟಕ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

ಫೆ.20 ರಂದು ಮೂಡಬಿದ್ರೆಯ ಕನ್ನಡ ಭವನದಲ್ಲಿ ದೀಪಕ್ ಶೆಟ್ಟಿರವರು ಯೂನಿಕ್ ಫ್ಯಾಷನ್ ಸಂಸ್ಥೆಯ ವತಿಯಿಂದ ಆಯೋಜಿಸಿರುವ ಕರ್ನಾಟಕ ರಾಜ್ಯ ಮಟ್ಟದ ಮಿಸ್ಟರ್, ಮಿಸ್, ಟೀಮ್ ಕರ್ನಾಟಕ ಸ್ಪರ್ಧೆಯ ಮಿಸ್ ವಿಭಾಗದಲ್ಲಿ ಕಿಂಜಲ್‌ರವರು ಪ್ರತಿಷ್ಠಿತ ಟೈಟಲ್​ನ್ನು ತಮ್ಮದಾಗಿಸಿ ಫಿಲೋಮಿನಾ ಕಾಲೇಜಿಗೆ ಮಾತ್ರವಲ್ಲ, ಪುತ್ತೂರಿಗೂ ಹೆಸರು ತಂದಿರುತ್ತಾರೆ.

ಈ ಸ್ಪರ್ಧೆಯಲ್ಲಿನ ಅಂತಿಮ ಸುತ್ತಿನಲ್ಲಿ ನಾಲ್ಕು ಮಂದಿ ಸ್ಪರ್ಧಿಗಳಿದ್ದು, ಅಂತಿಮವಾಗಿ ಕಿಂಜಲ್‌ರವರು ಉಳಿದ ಮೂವರನ್ನು ಹಿಂದಿಕ್ಕಿ ತೀರ್ಪುಗಾರರ ಮೆಚ್ಚುಗೆ ಗಳಿಸಿ ಚಾಂಪಿಯನ್ ಆಗುವುದರೊಂದಿಗೆ ಸೌಂದರ್ಯ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ.


Spread the love

About Laxminews 24x7

Check Also

SIT ಮುಂದೆ ಕೊನೆಗೂ ಬುರುಡೆ ರಹಸ್ಯ ಬಿಚ್ಚಿಟ್ಟ ಗಿರೀಶ್ ಮಟ್ಟಣ್ಣವರ್

Spread the loveಮಂಗಳೂರು, ಸೆಪ್ಟೆಂಬರ್​ 07: ಧರ್ಮಸ್ಥಳ ಬುರುಡೆ ಪ್ರಕರಣದ (Dharmasthala Case) ಒಂದೊಂದೆ ಸತ್ಯಗಳು ಹೊರ ಬರುತ್ತಿವೆ.  ಇಷ್ಟು ದಿನ ಬುರುಡೆ ಕಥೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ